ಭಾನುವಾರ, ಜೂನ್ 25, 2023

ಕವಿನಾಮಾಂಕಿತ ಷಡರ ಚಕ್ರಬಂಧ

ವಿವಿಧ ಚಿತ್ರಗಳ ಆಕಾರದಲ್ಲಿ ಅಕ್ಷರಗಳನ್ನು ಜೋಡಿಸಿ ಪದ್ಯಗಳನ್ನು ರಚಿಸುವುದೇ ಚಿತ್ರಬಂಧ. ಮೊದಲು ಚಿತ್ರವನ್ನು ಬಿಡಿಸಿ ಅನಂತರ ಎಲ್ಲಿ ಯಾವ ಅಕ್ಷರಗಳು ಬರಬೇಕು, ಹೇಗೆ ಅವುಗಳ ಪುನರಾವರ್ತನೆಯಾಗಬೇಕು ಎಂದು ಕೂಲಂಕಷವಾಗಿ ನೋಡುತ್ತಾ ಒಂದು ವಿಷಯದ ಬಗ್ಗೆ ಅರ್ಥಗರ್ಭಿತವಾದ ಪದ್ಯವನ್ನು ಬರೆಯುವುದೇ ಕಷ್ಟಸಾಧ್ಯ. ಅಷ್ಟಾವಧಾನದಲ್ಲಿ ಇಂತಹ ಪದ್ಯ ರಚಿಸುವುದು ಅಸಾಧ್ಯ ಎಂದುಕೊಂಡರೆ ತಪ್ಪೇನಿಲ್ಲ. ಚಿತ್ರವು ಎದುರಿನಲ್ಲಿ ಇಲ್ಲದೆ, ಬರೆಯಲು ಪೆನ್ನೂ ಇಲ್ಲದಾಗ ಅನೇಕ ಜನರು ವಿವಿಧ ವಿಷಯಗಳನ್ನು ಕುರಿತಾಗಿ ಕೇಳುತ್ತಿರುವಾಗ, ಅನೇಕ ಛಂದಸ್ಸುಗಳಲ್ಲಿ ಪದ್ಯರಚನೆ ನಡೆಯುತ್ತಿರುವಾಗ ಇಂತಹ ಚಿತ್ರಬಂಧಗಳಿಗೆ ಅವಧಾನಿ ಕೈಹಾಕುವುದು ಸಾಹಸವೇ ಸರಿ.

ಶತಾವಧಾನಿ ಗಣೇಶ್ ಅವಧಾನಗಳಲ್ಲಿ ಚಿತ್ರಬಂಧಗಳನ್ನೂ ರಚಿಸಬಹುದು ಎಂಬುವುದನ್ನು ತೋರಿಸಿದ್ದಾರೆ. ಚಿತ್ರಬಂಧಗಳಲ್ಲೂ ಕೆಲವೊಂದು ಬಂಧಗಳು ಸರಳ ಎಂದೆನಿಸುತ್ತವೆ. ಇನ್ನು ಕೆಲವು ಬಂಧಗಳು ಸಂಕೀರ್ಣ. ನಿನ್ನೆಯ (24-06-2023) ಅವಧಾನದಲ್ಲಿ ಗಣೇಶಭಟ್ಟ ಕೊಪ್ಪಲತೋಟ ಸಂಕೀರ್ಣವಾದ ಬಂಧರಚನೆಗೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

ಗಂಗಾನದಿಯ ವರ್ಣನೆಯನ್ನು ಕವಿನಾಮಾಂಕಿತ ಷಡರ ಚಕ್ರಬಂಧದಲ್ಲಿ ಮಾಡಿದ ಪದ್ಯ ಹೀಗಿದೆ.

ಜನ್ಯಳ್ ಜಾಹ್ನವಿ ತೋಷಕಂ ಪರಮದಳ್ ಸಾವಿಲ್ಲಿ ಪುಣ್ಯಪ್ರದಂ

ಧನ್ಯಾತ್ಮರ್ಗೆನೆ ಟಕ್ಕೆಯಂತರಕೆನಲ್ಕಾಚನ್ದ್ರನಾರ್ದ್ರತ್ವಮೇ-

ನನ್ಯಂ ನೀಗಿರೆ ಕರ್ಮಮೇ ವರಮವಳ್ ವಕ್ರತ್ವದಿಂ ತೋರ್ದುದೈ

ದೈನ್ಯಕ್ಕಂಜದಗಾಧಯಾನೆ ನರರಿಂದಂ ಪೂಜ್ಯೆ ಮೇಲ್ ಪಾರ್ವುದೈ

 ಜಾಹ್ನವಿ ಸಂತೋಷವನ್ನು ನೀಡುವವಳು, ಧನ್ಯರಿಗೆ ಗಂಗೆಯಲ್ಲಿನ ಸಾವು ಪುಣ್ಯವನ್ನು ನೀಡುವಂತಹದು, ಗಂಗೆ ಧರ್ಮಕ್ಕೆ ಧ್ವಜದಂತಿರುವವಳು (ಟಕ್ಕೆ – ಧ್ವಜ, ಅಱ- ಧರ್ಮ), ಚಂದ್ರನಂತೆ ಶೀತಲಳಾದವಳು, ಕರ್ಮಬಂಧವನ್ನು ಕಳಚಿ ಮೋಕ್ಷವನ್ನು ಕೊಡುವವಳು, ಭೂಮಿಯಲ್ಲಿ ವಕ್ರವಾಗಿ (ಓರೆಕೋರೆಯಾಗಿ) ಕಾಣಿಸುವವಳು, ದೀನಸ್ಥಿತಿಯಿದ್ದರೂ (ಭೂಮಿಗಿಳಿಯುವ ಸಂದರ್ಭದಲ್ಲಿ ಎಷ್ಟೇ ಕಷ್ಟ ಬಂದರೂ) ಹೆದರದೆ ಆಳವಾದ ಹರಿವಿನಿಂದ ಚಲಿಸುವವಳಾಗಿ, ಜನರಿಂದ ಪೂಜಿಸಲ್ಪಟ್ಟವಳಾಗಿ ಮೇಲೆ ಬಂದು (ಉಕ್ಕಿ) ಹರಿಯುತ್ತಿದ್ದಾಳೆ.

ಪದ್ಯದಲ್ಲಿನ ಅಕ್ಷರಗಳನ್ನು ಚಿತ್ರದಲ್ಲಿ ಬರೆದಾಗ ಆರು ಕಡ್ಡಿಗಳುಳ್ಳ ಚಕ್ರವೊಂದು ಸಿದ್ಧವಾಗುತ್ತದೆ. ಆದ್ದರಿಂದ ಷಡರ ಚಕ್ರಬಂಧ. ಈ ಚಕ್ರದಲ್ಲಿ ಆರನೆಯ ಅಕ್ಷರದಿಂದ ರಚಿತವಾದ ಸಣ್ಣ ಚಕ್ರವನ್ನು ನೋಡಿದಾಗ ಕವಿಯ ಹೆಸರು ಕಾಣಿಸುತ್ತದೆ. (ಚಿತ್ರದಲ್ಲಿ ಕೆಂಪು ಬಣ್ಣದಿಂದ ತೋರಿಸಲಾಗಿದೆ) ಆದ್ದರಿಂದ ಇದು ಕವಿನಾಮಾಂಕಿತ ಷಡರ ಚಕ್ರಬಂಧ.

ಮೊದಲ ಮೂರು ಸಾಲುಗಳನ್ನು ಮೂರು ಕಡ್ಡಿಗಳಲ್ಲಿ ಓದಬಹದು. ಕೊನೆಯ ಸಾಲು ಚಕ್ರದ ಪರಿಧಿಯಲ್ಲಿದೆ. ದೈ ಎಂಬಲ್ಲಿಂದ ಆರಂಭಿಸಿ ದೈ ಎಂಬುವುಬಲ್ಲಿಗೆ ಮುಗಿಯುತ್ತದೆ.

ಇಲ್ಲಿ ಇಂತಹ ಅರ್ಥಗರ್ಭಿತವಾದ ಸುಂದರ ಪದ್ಯಗಳನ್ನು ರಚಿಸುವಾಗ ಅನೇಕ ಸವಾಗಲುಗಳಿದ್ದವು

ಶಾರ್ದೂಲವಿಕ್ರೀಡಿತ ಛಂದಸ್ಸನ್ನು ಅನುಸರಿಸಬೇಕು.

ಪ್ರತಿ ಪಾದದ ಎರಡನೇ ಅಕ್ಷರ ಪ್ರಾಸಾಕ್ಷರವೇ (ನ್ಯ) ಇರತಕ್ಕದ್ದು.

ಕವಿಯ ಹೆಸರು ಬರುವಂತೆ ಮಾಡಲು ಮೊದಲ ಮೂರು ಪಾದಗಳ ಆರನೆಯ ಅಕ್ಷರಗಳು ತೋ,ಟ,ಕ ಎಂದೂ ಹದಿನಾಲ್ಕನೆಯ ಅಕ್ಷರಗಳು ವಿ, ಚ, ಕ್ರ ಎಂದೂ ಇರಬೇಕು

ಮೊದಲ ಮೂರು ಪಾದಗಳ ಹತ್ತನೆಯ ಅಕ್ಷರ ಇರಬೇಕು. ಅದು ಚಕ್ರದ ಮಧ್ಯದಲ್ಲಿರುತ್ತದೆ.

ಮೂರನೆಯ ಪಾದದ ಕೊನೆಯ ಅಕ್ಷರ, ನಾಲ್ಕನೆಯ ಪಾದದ ಮೊದಲನೆಯ ಹಾಗೂ ಕೊನೆಯ ಅಕ್ಷರಗಳು ಸಮಾನವಾಗಿರಬೇಕು. (ದೈ)

ಕೊನೆಯ ಸಾಲು ರಚಿಸುವಾಗ ಏಳು ಅಕ್ಷರಗಳು ಮೊದಲೇ ಸಿದ್ಧವಾಗಿರುತ್ತವೆ. ಅದಕ್ಕನುಗುಣವಾಗಿ ಅರ್ಥ ಬರುವಂತೆ, ಛಂದಸ್ಸು ತಪ್ಪದಂತೆ ಉಳಿದ ಹನ್ನೆರಡು ಅಕ್ಷರಗಳನ್ನು ಜೋಡಿಸಬೇಕು.

ಇವಿಷ್ಟನ್ನೂ ಮನಸ್ಸಿನಲ್ಲಿಟ್ಟುಕೊಂಡು ಅವಧಾನದ ಇತರ ಅಂಗಗಳ ನಡುವೆಯೇ ಪದ್ಯ ರಚಿಸಬೇಕು.

ಇಂತಹ ಕಷ್ಟಕರವಾದ ಕವಿನಾಮಾಂಕಿತ ಷಡರಚಕ್ರಬಂಧವನ್ನು ಸುಂದರವಾಗಿ ರಚಿಸಿದ ಗಣೇಶ ಭಟ್ಟ ಕೊಪ್ಪಲತೋಟ ನಿಜವಾಗಿಯೂ ಅಭಿನಂದನಾರ್ಹರು.



ಶನಿವಾರ, ಆಗಸ್ಟ್ 28, 2021

ज्ञात्रज्ञानेन वञ्चितः

समाजे उन्नतस्थानं प्राप्तवतां ज्येष्ठानां मेलनं रोमाञ्चं जनयति । संस्कृतक्षेत्रे विद्यमानाः ज्येष्ठाः मां न परिचिनुयुः इति अहं भावयामि । यतो हि अहं सामान्यः । विद्वत्सभासु वा इतरत्र वा सर्वे यथा पश्येयुः तादृशे स्थाने तु अहं न भवामि । केचन विद्वद्भिः सह कपटविनयं दर्शयित्वा सम्भाषमाणाः भवन्ति । (तुळुभाषया ओङ्गुना इति पदं विद्यते तस्य समानार्थकपदं भाषान्तरेषु अहं न स्मरामि ) । अहं न तादृशः । यदि तेषां समयस्वीकारे मम अधिकारः अस्ति इति भासेत तर्हि एव ज्येष्ठैः सह भाषे । नो चेत् तेभ्यः दूरदेशे एव भवामि । अपरिचितः कश्चित् मया सह भाषमाणः अस्ति इत्येतस्य भावः मम कारणतः तेषां न भवेत् इति मम मतिः । परन्तु अद्यत्वे आन्तर्जालिककार्यक्रमाणां प्रभावतः बहवः अस्मान् दृष्टवन्तः भवन्ति । अनेके परिचिन्वन्ति च ।

काचित् व्याख्यानमाला मम वासस्थानस्य समीपे एव प्रचलति । तत्र व्याख्यानमालां द्रष्टुम् अहं गतवान् । करोनाकारणतः अङ्गुलिमेयाः एव जनाः  आसन् । व्याख्याता विद्वान् मम गुरुः । सः तु मां परिचिनोति, तेन सह मम आत्मीयता अपि अस्ति । तत्रोपस्थितेषु विद्वत्सु अनेकान् अहं परिचिनोमि । मां ते न परिचिनुयुः इत्येव चिन्तितवान् आसीत् । परन्तु मत्पार्श्वे उपविष्टः देशस्य प्रख्यातः संस्कृतविद्वान् मामेव पश्यति स्म । एवं मयि दीर्घं दृष्टिं दधतः तस्य अवज्ञा न कार्या इति धिया अहं तं शिरः अवनमय्य साञ्जलिः प्रणतवान् । 

'किं भोः सूर्य! अस्यां सभायां कदाचित् भवतः अपि व्याख्यानं भवेत्' इति सः ज्येष्ठः विद्वान् अवोचत् । एषः मां न केवलं परिचिनोति परन्तु मम नाम अपि जानाति इति ज्ञात्वा विस्मितः । मम भाषणं कुत्रापि अयं श्रुतवान् स्यात् । नो चेत् अत्र भवान् कदाचित् भाषेत इति कथं वा सः वक्तुं शक्नुयात्? सभायां व्याख्यानं प्रचलद् एव आसीत् इति कारणतः तेन सह अधिकसम्भाषणाय अवसरः मया न लब्धः । कार्यान्तरवशात्  सभातः उत्थाय आगतः । 

परन्तु सः मां न जानाति इति मत्वा अहं यदि तस्य वन्दनं नाकरिष्यं तर्हि किम् अचिन्तयिष्यत् सः? एषः अहङ्कारी वर्तते । विनयः एव नास्ति इति निश्चयेन अचिन्तयिष्यत् । तस्य स्थाने यदि अहम् अभविष्यं तर्हि निश्चयेन तथा अचिन्तयिष्यम् । सर्वे मां जानन्ति इति गर्वः यथा उन्नतेर्बाधकः तद्वदेव एषः मां न जानीयात् इति अवज्ञापि ज्येष्ठाशीर्भिः वञ्चनस्य हेतुः भवेत् ।


ಶುಕ್ರವಾರ, ಜೂನ್ 18, 2021

ಒಂದು ನಿದ್ದೆಯ ಕತೆ

 ದೇವರ ದಯೆಯಿಂದ ನಿದ್ದೆಯ ವಿಚಾರದಲ್ಲಿ ನಾನು ಅದೃಷ್ಟವಂತ. ಎಷ್ಟು ಹೊತ್ತು ಮಲಗಿದರೂ ಎಲ್ಲೇ ಮಲಗಿದರೂ ನಿದ್ದೆ ಬರುತ್ತದೆ. ಕೆಲವೊಂದು ಸಲ ನಿದ್ದೆಮಾಡಬಾರದಾದ ಸ್ಥಳದಲ್ಲೂ ನಿದ್ದೆ ಬರುವುದುಂಟು. ಈ ವಿಷಯದಲ್ಲಿ ಪಿ.ಎಚ್.ಡಿ ಯ ತರಗತಿಗಳಿಗೋಸ್ಕರ ಪ್ರಯಾಗದಲ್ಲಿದ್ದಾಗ ನಡೆದ ಘಟನೆಯೊಂದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಮಾರ್ಚ್ ತಿಂಗಳಿಗಾಗಲೇ ಚಳಿ ಕಳೆದು ಸೆಖೆ ಆರಂಭವಾಗಿತ್ತು. ನಮ್ಮ ತರಗತಿಗಳೂ ಮಾರ್ಚ್ ತಿಂಗಳಲ್ಲೇ ನಡೆಯುತ್ತಿದ್ದವು. ಹಿರಿಯ ವಿದ್ವಾಂಸರ ಭಾಷಣಗಳನ್ನು ಅಲ್ಲಿ ಆಯೋಜಿಸಲಾಗುತ್ತಿತ್ತು. ಕೆಲವು ಹಿರಿಯರ ಮಾತುಗಳು ಹೊರಗಡೆ ಶೃಂಗಾರ ಒಳಗಡೆ ಗೋಳಿಸೊಪ್ಪಿನಂತೆ ಇರುತ್ತವೆ. ಇಂತಹ ಸಂದರ್ಭದಲ್ಲಿ ಪ್ರಯಾಗದ ಹಿರಿಯ ವಿದ್ವಾಂಸರಾದ ಪ್ರೊ. ಹರದತ್ತ ಶರ್ಮಾ ಅವರ ವ್ಯಾಖ್ಯಾನವನ್ನು ನಮ್ಮ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಯಾವುದೋ ವಿಷಯದ ಬಗ್ಗೆ ಹಿಂದಿಯಲ್ಲಿ ಮಾಡುತ್ತಿದ್ದ ವ್ಯಾಖ್ಯಾನ ನನಗಂತೂ ಜೋಗುಳ ಹಾಡಿದಂತಾಗಿತ್ತು. ಅಲ್ಲದೇ ಕಂಬವೊಂದಕ್ಕೆ ಒರಗಿಕೊಂಡು ಕೂತಿದ್ದೆ. ಇದರಿಂದಾಗಿ ವ್ಯಾಖ್ಯಾನ ನಡೆಯುತ್ತಿದ್ದಾಗ ಚೆನ್ನಾಗಿ ನಿದ್ದೆ ಮಾಡಿದ್ದೆ.

ಬೋಧಿಸುತ್ತಿರುವವರೂ ಗಮನಿಸಿದರು. ಹತ್ತು ನಿಮಿಷಗಳ ನಂತರ ನನ್ನ ಪಕ್ಕದವನ ಹತ್ತಿರ ನನ್ನನ್ನು ಎಬ್ಬಿಸಲು ಹೇಳಿದರು. ನಾನು ಆವಾಗಿನಿಂದ ನೋಡ್ತಾ ಇದ್ದೆ. ನೀನೇ ಏಳುತ್ತೀ ಅಂತ ಅಂದುಕೊಂಡೆ. ಆದರೆ ನಿನಗೆ ಎಚ್ಚರವಾಗಲಿಲ್ಲ, ಆದ್ದರಿಂದ ಎಬ್ಬಿಸಲು ಹೇಳಿದೆ ಎಂದರು. ನಾನು ಎದ್ದುನಿಂತು ನನ್ನನ್ನು ಕ್ಷಮಿಸಿ ಎಂದು ಹೇಳಿದೆ. 

ನಮ್ಮ ತರಗತಿಯ ಮುಖ್ಯಸ್ಥರಾಗಿದ್ದ ಪ್ರೊ.ಲಲಿತ್ ಕುಮಾರ್ ತ್ರಿಪಾಠಿಯವರಿಗೆ ಅವಮಾನವಾದಂತಾಯಿತು. ತಾನು ಕರೆಸಿದ ವಿದ್ವಾಂಸರ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನು ನಿದ್ದೆ ಮಾಡುತ್ತಿದ್ದಾನೆಂದರೆ ಅವಮಾನವಲ್ಲವೇ ? ತಕ್ಷಣವೇ ನನ್ನನ್ನು ಎದುರಿಗೆ ಕರೆದು ಕೂರಿಸಿದರು. ತದನಂತರ ನನ್ನ ನಿದ್ದೆಗೂ ಸಮಜಾಯಿಷಿ ಕೊಟ್ಟರು. दक्षिण में लोगों के आदत ऐसा है । मैं जब दक्षिण में गया था तब देखा । दोपहर में खाने के बाद सब लोग सो जातें हैं । चार बजे तक सब बंद रहते है । इसके बाद फिर से सब काम चालू हो जाता है । ये लडका दक्षिण का है इसलिए सो रहा था ।

ಅವರೇನೂ ಕೋಪಿಸಿಕೊಳ್ಳಲಿಲ್ಲ. ಹಿರಿಯರಾದ ಅವರು ತರಗತಿಯಲ್ಲಿ ನಿದ್ದೆ ಮಾಡುವ ನನ್ನಂತಹ ಎಷ್ಟು ಜನರನ್ನು ನೋಡಿರಲಿಕ್ಕಿಲ್ಲ? ತಮ್ಮ ಬೋಧನೆ ಮುಗಿಸಿ ತೆರಳಿದರು. ತದನಂತರ ಪ್ರೊ.ಲಲಿತ್ ಕುಮಾರ್ ತ್ರಿಪಾಠಿ ಅವರು ಇಡಿಯ ತರಗತಿಯನ್ನು ತರಾಟೆಗೆ ತೆಗೆದುಕೊಂಡರು. ನೀವು ಪಾಠ ಕೇಳುವುದಿಲ್ಲ. ನಾವು ನಿಮಗೆ ಬೋಧಿಸಲಿಕ್ಕೆ ಯಾರ್ಯಾರನ್ನೋ ಕರೆಸುತ್ತೇವೆ. ಅವರೆದುರು ನೀವು ಮರ್ಯಾದೆ ತೆಗೆಯುತ್ತೀರಿ ಎಂದು ಎಲ್ಲರನ್ನೂ ಬೈದರು. ಕೊನೆಯಲ್ಲಿ ವಿಶೇಷವಾಗಿ ನನ್ನನ್ನುದ್ದೇಶಿಸಿ सूर्य, आप क्यों सोते हैं जिससे हमें ऐसे बहाना बनाना पडता है । ಏನನ್ನೂ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲವಾದ್ದರಿಂದ ಮೌನಿಯಾದೆ.


ಸೋಮವಾರ, ಜೂನ್ 7, 2021

ಭಾಷೆಗಳೂ ಶಬ್ದಗಳೂ ಅನುವಾದವೂ

ಭಾಷಾಪ್ರಪಂಚ ವಿಚಿತ್ರವಾದುದು. ಭಾಷೆಗಳ ನಡುವೆ ಕಾಣುವ ವೈಶಿಷ್ಟ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಮುಗಿದಷ್ಟು ಅಂಶಗಳು ದೊರೆಯಬಹುದು. ವ್ಯಾಕರಣದ ನಿಯಮಗಳನ್ನು ಕಲಿತು ಮಾತನಾಡುವುದಕ್ಕಿಂತ ಮಾತನಾಡುತ್ತಿರುವವರ ನಡುವೆ ಕಲೆತು ಮಾತನಾಡಿದಾಗ ಭಾಷೆ ಹೆಚ್ಚು ಆಪ್ತವಾಗುತ್ತದೆ. ಸಾಮಾನ್ಯವಾಗಿ ಹೊಸ ಭಾಷೆಗಳನ್ನು ಕಲಿಯುವಾಗ ನಮಗೆ ಗೊತ್ತಿರುವ ಭಾಷೆಯಲ್ಲಿ ಯೋಚಿಸಿ ಆ ವಾಕ್ಯವನ್ನೇ ತರ್ಜುಮೆ ಮಾಡುತ್ತೇವೆ. ಯಾವಾಗ ಚಿಂತನೆಯಲ್ಲೂ ಭಾಷೆಯೊಂದು ಒದಗಿ ಬರುತ್ತದೆಯೋ ಆವಾಗ ಆ ಭಾಷೆ ಆಪ್ತವಾದಂತೆ ಎಂಬುವುದು ಅನೇಕರ ಅಭಿಪ್ರಾಯ.

ನನ್ನ ವಿಚಾರಕ್ಕೆ ಬರುವುದಾರೆ ಮನೆಯಲ್ಲಿ ಆಡುವ ಚಿತ್ಪಾವನೀ ಭಾಷೆ, ಶಾಲೆಯಲ್ಲಾಡಿದ ಕನ್ನಡ, ಕಾಲೇಜು ಹಾಗೂ ಉದ್ಯೋಗದ ಸ್ಥಳದಲ್ಲಾಡುತ್ತಿರುವ ಸಂಸ್ಕೃತ ಹೀಗೆ ಮೂರು ಭಾಷೆಗಳು ಆಪ್ತವಾದ ಭಾಷೆಗಳಾಗಿವೆ.  ಈ ಭಾಷೆಗಳಲ್ಲಾಡುವಾಗ ಅದೇ ಭಾಷೆಯಲ್ಲಿ ಯೋಚನೆಯನ್ನೂ ಮಾಡುತ್ತೇನೆ.  ಕೆಲವೊಂದು ಕಡೆಗಳಲ್ಲಿ ಮೂರೂ ಭಾಷೆಯ ವಾಕ್ಯರಚನಾಶೈಲಿ ಭಿನ್ನವಾಗಿದೆ. ಉದಾಹರಣೆಗೆ ನಾನು ನಿನ್ನೊಂದಿಗೆ ಬರುತ್ತೇನೆ ಎನ್ನುವಾಗ ನಿನ್ನ ಎಂದು ಷಷ್ಠೀ ವಿಭಕ್ತಿಯನ್ನು ಕನ್ನಡದಲ್ಲೂ, ತೂಸವ ಏಸ ಎನ್ನೂವಾಗ ತೂ ಎಂದು ಪ್ರಥಮಾ ವಿಭಕ್ತಿಯನ್ನು ಚಿತ್ಪಾವನೀ ಭಾಷೆಯಲ್ಲಿಯೂ, ಭವತಾ ಸಹ ಆಗಚ್ಛಾಮಿ ಎನ್ನುವಾಗ ಭವತಾ ಎಂದು ತೃತೀಯಾ ವಿಭಕ್ತಿಯನ್ನು ಸಂಸ್ಕೃತದಲ್ಲಿಯೂ ಬಳಸಲಾಗುತ್ತದೆ. ಸಂಸ್ಕೃತದಲ್ಲಿ ಇಂತಹ ಸಂದರ್ಭದಲ್ಲಿ ತೃತೀಯಾವಿಭಕ್ತಿಯನ್ನು ಬಳಸಬೇಕು ಎಂಬ ನಿಯಮವನ್ನು ನಾನು ಓದಿರುವೆನಾದರೂ ಮಾತನಾಡುವಾಗ ನಿಯಮವನ್ನು ನೆನಪಿಸಿಕೊಂಡು ಮಾತನಾಡುವುದಿಲ್ಲ. ಅದು ಸಹಜವಾಗಿಯೇ ನನ್ನ ಬಾಯಿಯಿಂದ ಬರುತ್ತದೆ. 

ಹೀಗಿದ್ದರೂ ಕೂಡಾ ಕೆಲವೊಮ್ಮೆ ಒಂದು ಭಾಷೆಯ ಪ್ರಭಾವ ಮತ್ತೊಂದು ಭಾಷೆಯ ಮೇಲೆ ಆಗುವುದಿದೆ. ಕನ್ನಡ ಮಾತನಾಡುವಾಗ ಹಲವಾರು ಬಾರಿ ಸಹಜವಾಗಿ ಸಂಸ್ಕೃತದ ಶಬ್ದಗಳು ಬರುತ್ತವೆ. ಒಂದು ಭಾಷೆಯ ಗುಂಗಿನಲ್ಲಿದ್ದಾಗ ಮತ್ತೊಂದು ಭಾಷೆಯಲ್ಲಿ ಮಾತನಾಡತೊಡಗಿದರೆ ಗುಂಗಿನಲ್ಲಿರುವ ಭಾಷೆಯ ಶಬ್ದಗಳೇ ಬರಲಾರಂಭಿಸುತ್ತವೆ. ಕೆಲವೊಂದು ಬಾರಿ ಶಬ್ದಶಃ ಅನುವಾದವೂ ಆಗಿಬಿಡುತ್ತದೆ.

ನನ್ನ ದೂರದ ಸಂಬಂಧಿಯೊಬ್ಬರು ಮದುವೆಗಾಗಿ ಬೆೆಂಗಳೂರಿನಿಂದ ಊರಿಗೆ ಹೊರಡುತ್ತಿದ್ದರು. ನಾನು ಕೂಡಾ ಅವರ ಮನೆಗೆ ತಯಾರಿಗೆಂದು ಹಿಂದಿನ ದಿನವೇ ಹೋಗಿದ್ದೆ. ಅವರ ಮನೆಯಲ್ಲಿ ಚಿತ್ಪಾವನೀಯನ್ನು ಮಾತನಾಡುತ್ತಾರೆ. ಅವರ ಪಕ್ಕದ ಮನೆಯಲ್ಲೂ ಚಿತ್ಪಾವನೀಯನ್ನಾಡುವ ಕುಟುಂಬವೊಂದಿದೆ. ಬೆಳಿಗ್ಗೆ ಬೇಗ ಕಾರಿನಲ್ಲಿ ಅವರು ಹೊರಟರು. ನಾನು ಅವರನ್ನು ಬೀಳ್ಕೊಟ್ಟು ಬರುವಾಗ ಪಕ್ಕದ ಮನೆಯವರು ಕಂಡರು. ಅವರಲ್ಲೂ ಚಿತ್ಪಾವನೀಯಲ್ಲಿ ಮಾತಾಡಿ ಮನೆಗೆ ವಾಪಾಸ್ಸಾದಾಗ ಮೇಲಿನ ಮನೆಯವರು ಕಂಡರು. ಇವರಲ್ಲೂ ಹೊರಟದ್ದನ್ನು ತಿಳಿಸೋಣ ಎಂದುಕೊಂಡೆ. ಚಿತ್ಪಾವನೀ ಗುಂಗಿನಲ್ಲಿದ್ದ ನಾನು ಕನ್ನಡದಲ್ಲಿ ಆರಂಭಿಸಿದೆ.

ಈಗಷ್ಟೇ ಹೋದ್ರು ಅಂತ ಹೇಳಿದೆ. ಈ ವಾಕ್ಯಕ್ಕೆ ಕನ್ನಡದಲ್ಲಿ ಅಮಂಗಲಕರವಾದ ಅರ್ಥವಿದೆ. ಇದನ್ನು ನಾನೂ ತಿಳಿಯದವನೇನಲ್ಲ. ಆದರೆ ಚಿತ್ಪಾವನೀ ಭಾಷೆಯ ಎಷ್ಶಾ ಗೆಲ್ಲಿ ಎಂಬುವುದರೆ ಶಬ್ದಾನುವಾದ ಈಗಷ್ಟೇ ಹೋದ್ರು ಎನ್ನುವುದು. ಹಿಂದಿನ ದಿನದಿಂದ ಇದ್ದ ಚಿತ್ಪಾವನೀಯ ಗುಂಗು ನನ್ನ ಬಾಯಿಯಿಂದ ಈ ಮಾತನ್ನಾಡಿಸಿತ್ತು. ಕೇಳಿಸಿಕೊಂಡವರು ಹೊರಟ್ರಾ..... ಒಳ್ಳೆದಾಯ್ತು ಎಂದು ಹೇಳಿದಾಗ ನನ್ನ ವಾಕ್ಯದ ಅಮಂಗಳಕರವಾದ ಅರ್ಥ ಹೊಳೆಯಿತು. 

ಹೀಗೆ ಕೆಲವೊಂದು ಬಾರಿ ನಮ್ಮ ಗುಂಗಿನಲ್ಲಿರುವ ಭಾಷೆಯಿಂದ ಹೊರಬರಲಾಗುವುದಿಲ್ಲ. ಆದರೂ ಕೂಡಾ ಇಂತಹ ಸಂದರ್ಭಗಳಲ್ಲಿ ಅನರ್ಥಗಳೇನೂ ಘಟಿಸುವುದಿಲ್ಲ. ಭಾಷಾವಿಷಯದಲ್ಲಿ ಯೋಚಿಸುವವರು ಈ ಹಾದಿಯಲ್ಲೂ ಯೋಚನಾಲಹರಿಯನ್ನೂ ವಿಸ್ತರಿಸಬಹುದು.

ಬುಧವಾರ, ಜೂನ್ 2, 2021

मम महातोषः

सर्वेषामपि जीवने सन्तोषः भवत्येव । सः आजीवनं दुःखी स्यात् परन्तु निश्चयेन कदाचित् महान्तम् आनन्दम् अनुभूतवान् एव भवति । सर्वत्र रन्ध्रान्वेषिणः कदाचित् तोषस्य अनुभवं न कृतवन्तः स्युः । परन्तु भगवतः कृपया मम जीवने कष्टानामपेक्षया तोष एव अधिकः । एतेषु तोषेषु एतावत्पर्यन्तं भवता अनुभूतः महान् तोषः कः इति प्रच्छ्यते चेत् वर्तते कश्चित्, यश्च आजीवनं महातोषत्वेनैव तिष्ठति ।

तत्प्रकाशयितुम् अयं सुसमयः । यतो  हि मम शैक्षिकं जीवनं समाप्तप्रायं वर्तते । विद्यावारिधिशोधप्रबन्धः उपाधये समर्पयितुं सज्जः । विद्यावारिधिः इति उपाधिरपि मया लभेत । अनेके जनाः विद्यावारिध्युपाधिप्राप्तिसमयः एव मम शैक्षिकजीवनस्य आनन्दमयः समयः इति मन्वते । मम विषये अपि तथा चिन्तयन्तः अनेके भवतः विद्यावारिधिः समाप्यमाना अस्ति खलु इति पृच्छन्ति । मम अपेक्षया तत्र उत्सुकता, आनन्दः च तेषामेव वर्तते इति कदाचित् भासते । (न केवलम् उद्योगादिविषये चिन्तयन्तः ते इदं कथयन्ति अपि तु विद्यावारिधिप्राप्तिः नाम ते महतीम् उपलब्धिं मन्वते) । भवतु नाम तेषां मतिः । मम तु विद्यावारिधिप्राप्त्या महानन्दः तु न भवत्येव । यतो हि तदपेक्षया महानन्दम् अहं शैक्षिकजीवने प्रागेव प्राप्तवान् अस्मि ।

अखिलभारतस्तरे शास्त्रविषयेषु भाषणादिस्पर्धाः प्रचलन्ति । तत्र भागः वोढव्यः इति मम स्वप्नः प्राक्शास्त्रितः आसीत् । तत्र भागग्रहणमेव मम शैक्षिकजीवनस्य महती उपलब्धिः इति चिन्तितवान् आसम् । शास्त्रिकक्ष्यासु राज्यस्तरीयस्पर्धायामेव पराजयं प्राप्तवान् इति हेतोः अवसरः न लब्धः आसीत् । आचार्यस्तरे प्रथमवर्षे अवसरं प्राप्य पुरस्कारद्वयं प्राप्तवान् आसम् । तावता अहं तृप्तः च आसम् । परन्तु आचार्यद्वितीयवर्षे अपि अखिलभारतशास्त्रस्पर्धां प्रति गमनाय अवसरः प्राप्तः । तत्र एकं स्वर्णपदकम् (साहित्यभाषणे) एकं रजतपदकम् (समस्यापूर्तौ) कांस्यपदकद्वयं (अक्षरश्लोक्यां प्रश्नमञ्चे च) प्राप्तवान् । एषः तु मम आनन्दमयः क्षणः आसीत् । यस्यां स्पर्धायां भागग्रहणमात्रेण आत्मानं धन्यं मन्ये स्म, तादृशस्पर्धायां चतुर्णां पदकानाम् अवाप्त्या अहम् आनन्दतुन्दिलः आसम् ।

परन्तु अन्येषां दृष्ट्या इदम् आनन्ददायकं न । यतो हि एतद्वारा उद्योगप्राप्तिः वा विद्यालयस्य सर्वोत्कृष्टविद्यालयः इति नाम वा न भवति । तद् अहमपि जानामि । विद्यालयीयाः तु युवमहोत्सवे चत्वारि पदकानि प्राप्तानि इतीदम् अधुनापि मम महोपलब्धिं चिन्तयन्ति ।  तथापि मम शैक्षिकजीवनस्य आनन्दतमः समयः एषः इत्यत्र इदानीमपि नास्ति सन्देहः । स च आनन्दः अन्यैः आज्ञातः स्यात् । परन्तु अहं तु आनन्दानुभूतिं प्राप्तवान्, तत् स्मरामि चेत् इदानीमपि आनन्दः भवति । 





एतादृशः अव्यक्तानन्दः मया अन्येषु नावलोकितः आसीत् । अन्येऽपि एतादृशम् अनुभूतवन्तः स्युः एव । यथा मम आनन्दः अन्यैः न ज्ञायते तथैव अन्येषामपि आनन्दः मया न ज्ञातः स्यात् । एषः आनन्दः कस्यचित् वैद्यस्य मुखे मया दृष्टः। 

मम मातुः शस्त्रचिकित्सां कश्चन वैद्यः कृतवान् । सः मङ्गलूरुनगरे प्रसिद्धः शस्त्रचिकित्सकः । मम मातुः शस्त्रचिकित्साम् अयं करोति इति ज्ञानानन्तरं गूगल्-द्वारा तस्य विषये ज्ञातुं प्रयासः मया कृतः । तदा तेन घण्टाः यावत् शस्त्रचिकित्साः कृत्वा अनेकान् रोगिणः प्राणान् रक्षितवान् इति पठितम् । प्रतिदिनं सः रात्रौ शस्त्रचिकित्सां निर्वर्तयति स्म । मातुः शस्त्रचिकित्सायाः पूर्वं सप्त दिनानि यावत् लघुचिकित्सार्थम् अहं वैद्यालये आसम् । तदानीं एषः शस्त्रचिकित्सां कृत्वा शस्त्रक्रियाप्रकोष्ठतः बहिः आगच्छन् द्वित्रवारं दृष्टः । तदा तस्य मुखे विशिष्टः कोऽपि भावः न भवति स्म । मम मातुः शस्त्रचिकित्साकरणानन्तरम् आगतस्य तस्य मुखस्य उपरि विशिष्टः आनन्दः आसीत् । शस्त्रक्रिया क्लृप्तरूपेण जाता अस्ति इति आनन्देन बहुवारम् अवोचत् । जनाः माम् अन्यान्यविषयार्थं प्रशंसां कुर्युः, परन्तु मम महानन्दः एतया शस्त्रचिकित्सया अभवत् इति भावः तस्य मुखे दृश्यते स्म । एतेन ममापि अखिलभारतशात्रस्पर्धायाः आनन्ददायकः क्षणः स्मृतः । मम मातुः शस्त्रचिकित्सा उत्तमतया जाता इति आन्दोपि अभवत् ।

ಭಾನುವಾರ, ಮೇ 9, 2021

ಮಕ್ಕಳು ಕಷ್ಟಕೊಡುವುದೇ ತಾಯಿಗೆ ಸಂತೋಷ

ಇದೇನು ಹೀಗೆ ಹೇಳುತ್ತಿದ್ದಾನೆ ಎಂದು ಆಶ್ಚರ್ಯಪಡಬೇಡಿ. ನಾನು ಹೇಳಲು ಹೊರಟದ್ದು ಇದನ್ನೇ. ಮಗ ಕಷ್ಟ ಕೊಟ್ಟರೂ ತಾಯಿಗೆ ಸಂತೋಷ ಎಂದಾದರೆ ಸಹಿಸಿಕೊಳ್ಳಬಹುದು.  ಆದರೆ ಮಗ ಕಷ್ಟ ಕೊಟ್ಟರೇ ತಾಯಿಗೆ ಸಂತೋಷ ಎಂಬ ವಾಕ್ಯವನ್ನು ಅರಗಿಸಿಕೊಳ್ಳುವುದು ಅನೇಕರಿಗೆ ಕಷ್ಟವಾಗಬಹುದು. ಹಾಗಾದರೆ ತಾಯಿಗೆ ಕಷ್ಟಕೊಡುವುದು ಮಕ್ಕಳಾದವರ ಕರ್ತವ್ಯವೇ ಎಂದು ಅನಿಸಬಹುದು. ಕೆಲವೊಂದು ಸಂದರ್ಭದಲ್ಲಿ ತಾಯಿಗೆ ಕಷ್ಟಕೊಡುವುದೇ ಮಕ್ಕಳ ಕರ್ತವ್ಯ ಎಂಬುವುದು ನಿಜವೇ ಆಗಿದೆ. ಮಕ್ಕಳು ಕೊಡುವ ಕಷ್ಟವೇ ತಾಯಿಗೆ ಆನಂದವಾಗಿರುತ್ತದೆ. ಹಾಗೆಂದು ಬೇರೆಯವರು ಆ ಕಷ್ಟವನ್ನು ಕೊಟ್ಟರೆ ಅದು ಹಿಂಸೆಯಾಗುತ್ತದೆ. ಆದರೆ ಇಂತಹ ಸುಖಕರ ಕಷ್ಟವನ್ನು ನಾನು ನನ್ನ ತಾಯಿಗೆ ಕೊಟ್ಟಿಲ್ಲ ಎಂಬುವುದೇ ನನಗಿರುವ ಕೊರಗು.

ಬಾಲ್ಯದಿಂದಲೂ ನಾನು ತಿಂಡಿಪೋತ. ಆದ್ದರಿಂದಲೇ ಇಂತಹ ದಷ್ಟಪುಷ್ಟವಾದ ದೇಹವನ್ನು ಹೊಂದಿದ್ದೇನೆ. ಆದರೆ ನನಗೆ ತಿನ್ನಲು ಇದೇ ತಿಂಡಿ ಬೇಕು ಎಂದು ಯಾವಾಗಲೂ ಅಂದುಕೊಂಡವನೇ ಅಲ್ಲ. ಸಿಕ್ಕಿದ್ದನ್ನು ಸಂಕೋಚವಿಲ್ಲದೇ ಸಂತೋಷದಿಂದ ತಟ್ಟೆತುಂಬಾ ಬಡಿಸಿಕೊಂಡು ಹೊಟ್ಟೆತುಂಬಾ ತಿನ್ನುವುದು ನನ್ನ ಅಭ್ಯಾಸ. ಇದರಿಂದ ಅನೇಕ ಅನುಕೂಲತೆಗಳು ಆಗಿದ್ದುಂಟು.

ಕಾಲೇಜು ಜೀವನದಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಲು ದೇಶದ ವಿವಿಧ ಭಾಗಗಳಿಗೆ ಹೋದಾಗ ಅಲ್ಲಿನ ಊಟ ತಿಂಡಿಗಳು ರುಚಿಸದೆ ಅನೇಕ ಮಿತ್ರರು ಕಷ್ಟಪಟ್ಟದ್ದನ್ನು ಗಮನಿಸಿದ್ದೇನೆ. ಅವರಿಗೆ ಸಂತೋಷವಾಗಲಿ ಎಂಬ ಕಾರಣಕ್ಕಾಗಿ ಅನೇಕ ಬಾರಿ ತಿನ್ನುತ್ತಿರುವ ಊಟವನ್ನು ಹಳಿದದ್ದೂ ಇದೆ. ಆದರೆ ನಾನು ಮಾತ್ರ ಅಲ್ಲಿದ್ದ ಎಲ್ಲಾ ತಿಂಡಿತಿನಿಸುಗಳನ್ನು  ತಟ್ಟೆಯಲ್ಲಿ ತುಂಬಿಸಿಕೊಂಡು ಉಣ್ಣುತ್ತಿದ್ದೆ.  ಕರೋನಾ ಕಾಲದಲ್ಲಿ ರುಚಿ ವಾಸನೆಗಳು ಇಲ್ಲದಿದ್ದರೂ ಕ್ವಾರೆಂಟೈನ್ ನಲ್ಲಿ ಇದ್ದಾಗ ತಂದುಕೊಟ್ಟಿದ್ದ ಆಹಾರವನ್ನು ತಟ್ಟೆ ತುಂಬಾ ತಿನ್ನುತ್ತಿದ್ದೆ. ಕರೋನಾದಿಂದ ಗುಣಮುಖನಾಗಿ ನೆಗೆಟಿವ್ ಫಲಿತಾಂಶ ಬರಲು ಇದೂ ಒಂದು ಕಾರಣ ಎಂದು ನಂಬಿದ್ದೇನೆ.



ಇದೇನಿದು ತಾಯಂದಿರ ಬಗ್ಗೆ ಹೇಳಿ ಹೇಳುತ್ತೇನೆಂದು ಹೊರಟು ತನ್ನ ಬಗ್ಗೆಯೇ ಹೇಳಿಕೊಳ್ಳುತ್ತಿದ್ದಾನೆ ಎಂದುಕೊಳ್ಳಬೇಕಾಗಿಲ್ಲ. ಮತ್ತೆ ತಾಯಂದಿರ ವಿಷಯಕ್ಕೇ ಬರೋಣ. ಸಾಮಾನ್ಯವಾಗಿ ಮನೆಯಿಂದ ಹೊರಗಿರುವ (ಹಾಸ್ಟೆಲ್ ಪಿ.ಜಿ ಇತ್ಯಾದಿಗಳಲ್ಲಿ) ಮಕ್ಕಳ ಬಗ್ಗೆ ತಾಯಂದಿರು ತುಂಬಾ ಚಿಂತಿಸುತ್ತಾರೆ. ಅವರ ಮುಖ್ಯ ಚಿಂತೆಯಿರುವುದು ಊಟ-ತಿಂಡಿಗಳ ಬಗೆಗೆ. ಮಕ್ಕಳು ಕೂಡಾ ಫೋನ್ ಮಾಡಿದಾಗ ಊಟ ತಿಂಡಿಗಳ ವಿಚಾರದಲ್ಲಿ ಕಷ್ಟವಾಗುತ್ತಿದೆ, ಊಟ ರುಚಿಯಿಲ್ಲ ಎಂಬುದಾಗಿ ತಾಯಿಯ ಬಳಿ ಹೇಳುತ್ತಾರೆ. ತಾಯಂದಿರೂ ಮಕ್ಕಳ ಮಾತು ಕೇಳಿ ಮರುಗಿ ಮನೆಗೆ ಬಂದಾಗ ಅವರಿಗಿಷ್ಟದ ತಿಂಡಿ ಮಾಡಿಹಾಕಬೇಕು ಎಂದುಕೊಳ್ಳುತ್ತಾರೆ.

ಒಮ್ಮೆ ಹಾಸ್ಟೆಲ್'ನಲ್ಲಿರುವ ಹುಡುಗನ ತಾಯಿಯೊಬ್ಬರು ಭೇಟಿಯಾಗಿದ್ದರು. ತನ್ನ ಮಗ ಬರುತ್ತಾನೆ ಎಂಬ ಸಂಭ್ರಮದಲ್ಲಿದ್ದರು. ಅದೂ ಕೇವಲ ಎರಡು ದಿನಗಳ ರಜೆಗೋಸ್ಕರ ಮಗ ಬರುವವನಾಗಿದ್ದ. ತಾಯಿ ಹಿಂದಿನ ಎರಡು ಮೂರು ದಿನಗಳ ಕಾಲ ಕೆಲಸ ಮಾಡಿ ಸುಸ್ತಾಗಿದ್ದರು. ಅವರ ಸುಸ್ತು ಮುಖದಲ್ಲಿ ಕಾಣುತ್ತಿತ್ತು. ಮಗ 'ನಾನು ಬಂದಾಗ ಪುರಿ ಭಾಜಿ ಮಾಡು' ಎಂದು ಫೋನಿನಲ್ಲಿ ತಿಳಿಸಿದ್ದ. ಸುಸ್ತಾಗಿದ್ದ ಸಮಯದಲ್ಲಿ ವಿಶೇಷ ಅಡುಗೆಯನ್ನು ಮಾಡಬೇಕು ಎಂದರೆ ಎಂತಹ ಗೃಹಿಣಿಯರೂ ಕೆಂಡಾಮಂಡಲವಾಗುತ್ತಾರೆ. ಆದರೂ ಮಗ ಹೇಳಿದ್ದಾನೆ ಎಂಬ ಕಾರಣಕ್ಕೆ ಆ ತಾಯಿ ಅಡುಗೆಯ ತಯಾರಿಯಲ್ಲಿದ್ದರು. ಕಷ್ಟವಾದರೂ ಮಗನಿಗೆ ಇಷ್ಟವಾಗುವ ತಿಂಡಿಯನ್ನು ಮಾಡಿ ಬಡಿಸುತ್ತೇನೆ ಎಂಬ ಖುಷಿ ಸುಸ್ತಿನೊಂದಿಗೆ ಅವರ ಮುಖದಲ್ಲಿ ರಾರಾಜಿಸುತ್ತಿತ್ತು. 

ಆ ದಿನ ನನ್ನ ಮೇಲೆ ನನಗೇ ಬೇಸರವಾಯಿತು. ನನ್ನ ತಾಯಿಗೆ ಇಂತಹ ಸಂತೋಷಮಯವಾದ ಕಷ್ಟವನ್ನು ನಾನು ಯಾವತ್ತೂ ನೀಡಿದವನಲ್ಲ . ಮೊದಲೇ ಹೇಳಿದಂತೆ ಏನೇ ಮಾಡಿದರೂ ಚಪ್ಪರಿಸಿಕೊಂಡು ತಿನ್ನುತ್ತೇನೆ. ಫೋನಿನ ಮೂಲಕ ನಾನು ಹೋದ ಕಡೆಯ ತಿಂಡಿಯನ್ನು ಬೈದದ್ದೇ ಇಲ್ಲ. ಅದು ಮಾಡಿಕೊಡು ಇದು ಮಾಡಿಕೊಡು ಎಂದು ಹೇಳಿದ್ದಿಲ್ಲ. ತಾಯಿಯ ಇಚ್ಛೆಯಂತೆ ನಡೆದುಕೊಂಡು ಆಕೆಯನ್ನು ಸಂತೋಷಪಡಿಸುವುದಂತೂ ದೂರದ ಮಾತು. ಕೊನೆಯ ಪಕ್ಷ ತಾಯಿಗೆ ಕಷ್ಟ ಕೊಟ್ಟಾದರೂ ಸಂತೋಷ ನೀಡುವಂತಹ ಅವಕಾಶವನ್ನೂ ಇಷ್ಟು ವರ್ಷಗಳ ಕಾಲ ಬಳಸಿಕೊಳ್ಳಲಿಲ್ಲ. ಆದರೆ ಇನ್ನೂ ಕಾಲ ಮಿಂಚಿಲ್ಲ. ಯಾವುದಾದರೊಂದು ತಿಂಡಿಯನ್ನು ನನಗೆ ಇಷ್ಟದ ತಿಂಡಿ ಎಂದು ಹೇಳಿ ಅದನ್ನು ಮಾಡಿಕೊಡು ಎಂದು ತಾಯಿಯನ್ನು ಪೀಡಿಸಿ ಆಕೆಗೆ ಸಂತೋಷವನ್ನುಂಟು ಮಾಡುವುದೇನೂ ಕಷ್ಟದ ಕೆಲಸವಲ್ಲ.

ಶುಕ್ರವಾರ, ಏಪ್ರಿಲ್ 16, 2021

नाटकमिति नाटकम् ನಾಟಕವೆಂಬ ನಾಟಕ

 

मम अध्ययनकाले अस्माकं विद्यालये नाटकस्पर्धा भवति स्म । अस्माकं विद्यालयः ११ परिसरात्मकस्य विश्वविद्यालयस्य कश्चन परिसरः (शृङ्गेरीपरिसरः) । प्रतिपरिसरम् एकैकः नाटकगणः देहलीं गच्छति स्म । तत्र एकहोरात्मकं नाटकं प्रदर्श्यते स्म । अन्ते पुरस्काराः च भवन्ति स्म । प्रतिपरिसरम् एकः गणः गच्छति इति सामान्यतः उपदशाः गणाः नाट्यस्पर्धायां भवन्ति स्म । तेषु पञ्चषाणां गणानां नाटकप्रदर्शनम् उत्कृष्टं भवति स्म । कांश्चन गौणान् अंशान् अविगणय्य पश्यामः चेत् वृत्तिपरगणानां नाटकप्रदर्शनवत् छात्राणामपि नाटकगणस्य प्रदर्शनं भवति स्म । अस्माकं विश्वविद्यालयपक्षतः अपि नाटकानि उत्कृष्टानि भवेयुः इति आशयः आसीत् । संस्कृतभाषया प्राचीनकविभिः रचितानि नाटकानि सुन्दरतया मञ्चे प्रदर्शितानि भवेयुः इति आयोजकानां उद्देश्यमपि आसीत् । अहं तु नटने नितराम् अकुशलः । तथापि नाटकस्पर्धायां वर्षत्रयं यावत् मया भागः गृहीतः ।

नाटके नटन्तः कुशीलवाः तदन्वर्थनामानः एव भविष्यन्ति इति अनेकेषां ज्येष्ठानाम् आक्षेपः नाटकविषये भवति स्म  (कुत्सितं शीलं येषां ते कुशीलवाः इति कुशीवलव पदस्य व्युत्पत्तिः)।  नटनचतुराणां जनानां स्वाभाविकतया वाचालता, शरीरसौन्दर्यं च भवत्येव । ते स्त्रीपुम्भेदं विना समानरूपेण सर्वैः सह मैत्रीं सम्पादयन्ति । अतः व्यवहारमेव दर्शयन्तः ज्येष्ठाः नटेषु कुशीलवत्वम् आरोपयन्ति स्म ।  नाटकाभ्यासे रताः पठनमानसिकतां सर्वथा त्यजन्तीति अनेकेषाम् आरोपः । वर्षद्वयं सम्यक् पठितवान् छात्रः यदा नाटकं प्रविष्टः तत आरभ्य सम्यक् न पठति इति उदाहरणमपि ते दर्शयन्ति ।  एवं सति नाटककरणेन न कोऽपि लाभः, हानिरेव अधिका इति तेषां उद्घोषः सत्यमित्यपि भासते ।

अस्य कारणान्यपि सन्ति । युवावस्थायां मनः चञ्चलं भवति । नाटकस्य विलासः छात्रान् पठनविमुखान् करोति । अस्माकं विद्यालये  प्रायेण मासं यावत्  सायं ४ तः ६.३० वादनपर्यन्तं, शनिरविवासरयोः सम्पूर्णदिनम्, अन्तिमेषु दशसु दिनेषु पुनरपि सम्पूर्णदिनं नाटकाभ्यासः प्रवर्तते स्म ।  देहलीगमनागमनाय १० दिनानि  च याप्यन्ते स्म । सार्धैकमासं यावत् नाटके निमग्नस्य छात्रस्य पठने मतिः कथं भवेत् ? छात्रस्तु नाटके मम प्रदर्शनम् उत्तमं कर्तुमहं कथं प्रयतेय इत्येव चिन्तयति स्म । पठनविषये तस्य मतिरेव न भवति स्म ।

एतदस्माभिः अन्यया दृष्ट्या अपि द्रष्टव्यम् । नाटकानि तु महाकविप्रणीतानि । नानृषिः कुरुते काव्यम् । तादृशानां नाटकानाम् अध्ययनाय रङ्गे प्रदर्शनाय च लभ्यमानः सु-अवसरः वस्तुतः छात्रैः न हातव्यः । नाटकतः प्रयोजनं प्राप्तवन्तः अङ्गुलिमेयाः छात्राः विद्यन्ते एव । नाटकं पाठयितुम् आगतवतां ज्येष्ठानां द्वारा अनेकान् विषयान् पठित्वा अन्यत्रापि तस्य उपयोगं प्राप्तवन्तः । स्वनटनकौशले वृद्धिमपि प्राप्तवन्तः । नाटकप्रयोगावलोकनेन स्वभाषां सुन्दरीमपि कृतवन्तः ।

मम  कथा तु सर्वथा भिन्ना । मम नटने रुचिः सामर्थ्यं च शून्यम् । परन्तु नाटके अभिरुचिः तु आसीदेव । अलङ्कारशास्त्रं पठतः मम तत्र आसक्तिः सहजा । नाटकगणे विद्यमानाः सर्वेऽपि मम आत्मीयमित्राणि । अतः वर्षत्रयं यावत् नाटकगणेन सह अहमपि गतवान् । नाटकगणस्य रङ्गमञ्चसज्जता, वस्तूनां क्रयणम् इत्यादिषु अहं साहाय्यम् आचरामि स्म । अभ्याससमये अहमपि तत्स्थले उपतिष्ठे स्म । अतः सर्वा अपि नाटकपङ्क्तयः मम कण्ठे भवन्ति स्म । यत्र कुत्रचित् अभिनयानुगुण्येन नाट्यपङ्क्तौ व्यत्ययः क्रियते चेत् तत्रापि मूलकविना लिखितं किम् अस्ति, किमर्थमत्र परिवर्तनं कृतं इत्येतान् अंशान् एकाकी एव विमृशामि स्म ।


एतादृशप्रयोजनं यदि सर्वे प्राप्स्यन्त नाटकविषये दूषणम् अन्येषां नाभविष्यत् । नाटकार्थम् आगच्छतां तु नटने एव आसक्तिः । एतादृशाः विषयाः तेषां दृष्ट्या गौणाः । नाटकात् व्युत्पत्तिं सम्पादयितुं कोऽपि न आगच्छति । नटः नाटकद्वारा व्युत्पत्तिं सम्पादयेत् इति अपेक्षा अपि अनुचिता स्यात् ।  तथापि नटनसमये आनुषङ्गिकरूपेण लभ्याः कतिचन विचाराः कदापि न त्यक्तव्याः । परन्तु बहुभिस्त्यज्यते इति खेदाय ।

अहं कर्पूरमञ्जरी, भगवदज्जुकम्, पण्डितराजीयम् इति नाटकत्रयं यदा अभिनीतं तेषु गणेषु आसम् । तदानीं श्रुताः रमणीयाः नाट्योक्तयः काश्चन इदानीमपि स्मर्यन्ते । कदाचित् शङ्करराजाराममहोदयेन सह सम्भाषणावसरे तेन भगवदज्जुकप्रहसनविषये किञ्चिदुक्ते अहमपि सर्वं स्मृत्वा तेन सह कतिचन विचारान् संविभक्तुम् अशकम् । कस्यचित् महाकवेः पुरस्तात् मम मुखरत्वे नाटकम् एव कारणम् अभवत् ।

परन्तु बहवः एवं न चिन्तयन्ति इत्येव नाटकस्य, तथा चिन्तयतां च अधोगतौ कारणम् । अहं कस्यचित् नाट्यगणे सक्रियस्य मित्रस्य गृहं गतवान् । नाटकदिनानि स्मृतानि । भवता अमुकपात्रं सम्यक् निरूढम् इति मयोक्ते कस्मिन् नाटके इति तत्र विद्यमानः अपरः अपृच्छत् । सः नाटकनाम स्मर्तुं नाशकत् । अहं भगवदज्जुकम् इति उक्तवान् । भगवदज्जुकम् इति नाम श्रुत्वा सः रोमाञ्चितः स्यादिति अहम् अचिन्तयम् । परन्तु  सः तदेव । यत्किञ्चित् नाटकम् आसीत् इति अवज्ञया अवदत् । मम तु नाटकानां नामानि स्मरामि चेदेव तत्रत्यानां रमणीयांशानां स्मरणेन रोमाञ्चः भवति । नाटके पात्रं सम्यक् निरूढवतः अपि तस्य नाटकनामविषये ईदृशीम् अवज्ञां दृष्ट्वा, नाटकविषये या अवज्ञा ज्येष्ठैः विद्यालये क्रियते सा समीचीना एव इत्यभासत । नटाः नाटके मम आसक्तिरस्तीति नाटकमेव अकुर्वन् इत्यपि मतिरुत्पन्ना ।


ನಾನು ಓದುತ್ತಿರುವಾಗ ನಮ್ಮ ವಿಶ್ವವಿದ್ಯಾಲಯದ ವತಿಯಿಂದ ನಾಟಕಸ್ಪರ್ಧೆ ನಡೆಯುತ್ತಿತ್ತು. ನಮ್ಮ ಕಾಲೇಜು ಹನ್ನೊಂದು ಕ್ಯಾಂಪಸ್ ಗಳನ್ನು ಹೊಂದಿರುವ ವಿಶ್ವವಿದ್ಯಾಲಯದ ಒಂದು ಕ್ಯಾಂಪಸ್ (ಶೃಂಗೇರೀ ಪರಿಸರ). ದೆಹಲಿಯಲ್ಲಿ ನಡೆಯುತ್ತಿದ್ದ ನಾಟಕಸ್ಪರ್ಧೆಯಲ್ಲಿ ಪ್ರತಿ ಕಾಲೇಜಿನಿಂದ ಒಂದೊಂದು ತಂಡ ಭಾಗವಹಿಸುತ್ತಿತ್ತು. ಹೀಗೆ ಹತ್ತಾರು ತಂಡಗಳು ತಲಾ ಒಂದು ಗಂಟೆಯ ನಾಟಕಪ್ರದರ್ಶನವನ್ನು ನೀಡುತ್ತಿದ್ದವು. ಸುಮಾರು ಐದಾರು ತಂಡಗಳ ಪ್ರದರ್ಶನ ಅತ್ಯುತ್ಕೃಷ್ಟವಾಗಿರುತ್ತಿತ್ತು. ಕೆಲವು ಅಂಶಗಳನ್ನು ಬಿಟ್ಟರೆ ನೀನಾಸಂನಂತಹ ವೃತ್ತಿಪರ ತಂಡಗಳು ಪ್ರದರ್ಶಿಸುವ ನಾಟಕದಂತೆಯೇ ವಿದ್ಯಾರ್ಥಿಗಳ ನಾಟಕಪ್ರದರ್ಶನಗಳಿರುತ್ತಿದ್ದವು. ಸಂಸ್ಕೃತದಲ್ಲಿ ಪ್ರಾಚೀನ ಕವಿಗಳು ಬರೆದಂತಹ ನಾಟಕಗಳು ಸುಂದರವಾಗಿ ರಂಗದಲ್ಲಿ ಪ್ರಸ್ತುತಿಗೊಳಪಡಬೇಕು ಎಂಬುವುದು ಆಯೋಜಕರ ಉದ್ದೇಶವಾಗಿತ್ತು.  ಅಭಿನಯದಲ್ಲಿ ಕುಶಲತೆಯಿಲ್ಲದಿದ್ದರೂ ನಾನು ಮೂರುವರ್ಷ ನಾಟಕದಲ್ಲಿ ಭಾಗವಹಿಸಿದ್ದೆ.

 

ಸಂಸ್ಕೃತದಲ್ಲಿ ನಟ ಎಂಬ ಪದಕ್ಕೆ ಕುಶೀಲವ ಎಂಬ ಪರ್ಯಾಯ ಪದವಿದೆ. ನಡತೆಗೆಟ್ಟವರೇ ನಟರು ಎಂಬುವುದು ಕುಶೀಲವ ಪದದ ಅರ್ಥ. ಕಾಲೇಜಿನಲ್ಲಿ ನಾಟಕದಲ್ಲಿ ಭಾಗವಹಿಸುವವರೆಲ್ಲಾ ನಿಜಾರ್ಥದಲ್ಲಿ ಕುಶೀಲವರೇ ಎಂಬುವುದು ಕಾಲೇಜಿನ ಅನೇಕ ಹಿರಿಯರ ಅಭಿಪ್ರಾಯವಾಗಿತ್ತು. ನಟನೆಯಲ್ಲಿ ಚತುರರಾಗಿರುವವರು ಚಂದದ ರೂಪವುಳ್ಳವರೂ, ಮೋಹಕ ಮಾತುಗಳನ್ನಾಡುವವರೂ ಆಗಿರುವುದು ಸಹಜ. ಸ್ತ್ರೀ-ಪುರುಷರೆಂಬ ಭೇದವಿಲ್ಲದೇ ಎಲ್ಲರಲ್ಲಿಯೂ ಚೆನ್ನಾಗಿಯೇ ಸ್ನೇಹ ಸಂಪಾದಿಸಿರುತ್ತಾರೆ. ಆದ್ದರಿಂದ ಇವರ ವ್ಯವಹಾರವನ್ನು ಉದಾಹರಣೆಯನ್ನಾಗಿಸಿಕೊಂಡು ಹಿರಿಯರು ನಟರೆಲ್ಲಾ ಕುಶೀಲವರು ಎಂಬ ಅಭಿಪ್ರಾಯಕ್ಕೆ ಬರುತ್ತಾರೆ. ನಾಟಕದಲ್ಲಿ ಆಸಕ್ತರಾದರೆ ಓದಿನ ಬಗ್ಗೆ ಗಮನ ಹರಿಸುವುದಿಲ್ಲ ಎಂಬುವುದು ಇನ್ನೊಂದು ಆರೋಪ. ಎರಡು ವರ್ಷಗಳ ಕಾಲ ಚೆನ್ನಾಗಿ ಓದಿದ ವಿದ್ಯಾರ್ಥಿ ನಾಟಕವನ್ನಾರಂಭಿಸಿದ ಕೂಡಲೇ ಓದಿನಲ್ಲಿ ಹಿಂದುಳಿಯುತ್ತಾನೆ ಎಂಬುವುದಕ್ಕೆ ಅನೇಕ ಉದಾಹರಣೆಗಳನ್ನು ತೋರಿಸುತ್ತಾರೆ. ಆದ್ದರಿಂದ ನಾಟಕದಲ್ಲಿ ಭಾಗವಹಿಸುವುದರಿಂದ ಹಾನಿಯೇ ಹೆಚ್ಚಲ್ಲದೇ ಲಾಭವೇನೂ ಇಲ್ಲ ಎಂಬ ಅನೇಕರ ಅಭಿಪ್ರಾಯ ಸರಿಯೆಂದೇ ಕಾಣುತ್ತದೆ.  

 

ಹೀಗಾಗುವುದಕ್ಕೆ ಕಾರಣಗಳೂ ಅನೇಕ. ಯೌವನ ಕಾಲದಲ್ಲಿ ಮನಸ್ಸು ಚಂಚಲವಾಗಿರುತ್ತದೆ. ನಾಟಕದಲ್ಲಿ ವಿವಿಧ ವಿಲಾಸಗಳನ್ನು ಕಾಣುವ ವಿದ್ಯಾರ್ಥಿಗಳು ಓದಿನಿಂದ ವಿಮುಖರಾಗುತ್ತಾರೆ. ನಮ್ಮ ಕಾಲೇಜಿನಲ್ಲಿ ಸುಮಾರು ಒಂದು ತಿಂಗಳ ಕಾಲ ಸಂಜೆ ೪ ರಿಂದ ೬.೩೦ ರ ತನಕ, ಶನಿವಾರ ಭಾನುವಾರಗಳಂದು ಇಡೀ ದಿವಸ, ಕೊನೆಯ ಹತ್ತು ದಿನಗಳ ಕಾಲವೂ ಇಡೀ ದಿವಸ ನಾಟಕದ ಅಭ್ಯಾಸ ನಡೆಯುತ್ತಿತ್ತು. ದೆಹಲಿಗೆ ಹೋಗಿ ಬರಲು ಹತ್ತು ದಿನಗಳಾಗುತ್ತಿದ್ದವು. ಹೀಗೆ ಸುಮಾರು ಒಂದುವರೆ ತಿಂಗಳ ಕಾಲ ನಾಟಕದ ಗುಂಗಿನಲ್ಲಿದ್ದ ವಿದ್ಯಾರ್ಥಿಗೆ ಪುನಃ ಓದಿನ ವಾತಾವರಣಕ್ಕೆ ಮರಳಲು ಕಷ್ಟವಾಗುತ್ತಿತ್ತು. ಒಂದುವರೆ ತಿಂಗಳ ಕಾಲ ಸಮಗ್ರ ಸಮಯವನ್ನೂ ನಾಟಕದಲ್ಲಿ ನನ್ನ ಪ್ರದರ್ಶನ ಉತ್ತಮವಾಗಲು ಏನು ಮಾಡಬೇಕು ಎಂಬ ಯೋಚನೆಯಲ್ಲಿಯೇ ವಿದ್ಯಾರ್ಥಿಗಳು ಕಾಲ ಕಳೆಯುತ್ತಿದ್ದರು.

 

ಇದೇ ವಿಚಾರವನ್ನು ಇನ್ನೊಂದು ದೃಷ್ಟಿಕೋನದಿಂದಲೂ ಯೋಚಿಸಬೇಕಾಗುತ್ತದೆ. ನಾಟಕಗಳನ್ನು ಬರೆದವರೆಲ್ಲರೂ ಋಷಿಸಮಾನರಾದ ಕಾಲಿದಾಸ, ಭಾಸ ಮೊದಲಾದ ಮಹಾಕವಿಗಳು. ಅಂತಹ ಮಹಾಕವಿಗಳು ಬರೆದ ನಾಟಕಗಳನ್ನು ಅಭಿನಯಿಸುವ, ಅಭ್ಯಸಿಸುವ ಸುವರ್ಣಾವಕಾಶವನ್ನು ವಿದ್ಯಾರ್ಥಿಗಳು ಕೈಚೆಲ್ಲಬಾರದು. ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳಾದರೂ ನಾಟಕದಿಂದ ಲಾಭಾನ್ವಿತರಾಗಿದ್ದಾರೆ ಎಂಬುವುದನ್ನೂ ಗಮನಿಸಬೇಕು. ನಾಟಕವನ್ನು ನಿರ್ದೇಶಿಸಲು ಬಂದ ಹಿರಿಯರಿಂದ ಅನೇಕ ವಿಚಾರಗಳನ್ನು ಕಲಿತು, ಬೇರೆ ಕಡೆಗಳಲ್ಲೂ ಅದರ ಉಪಯೋಗ ಮಾಡಿಕೊಳ್ಳಬಹುದು. ತನ್ನ ಅಭಿನಯಕೌಶಲವನ್ನು ಹೆಚ್ಚಿಸಿಕೊಳ್ಳಬಹುದು. ನಾಟಕಗಳಲ್ಲಿ ಭಾಷೆಯ ಬಗ್ಗೆ ಗಮನ ಹರಿಸುವುದರಿಂದ ಸಂಸ್ಕೃತ ಭಾಷೆಯ ಬಳಕೆಯಲ್ಲಿ ಉತ್ಕೃಷ್ಟತೆಯನ್ನೂ ಸಾಧಿಸಬಹುದು.

 

ನನ್ನ ವಿಚಾರವನ್ನು ಹೇಳುವುದಾದರೆ ಅಭಿನಯದಲ್ಲಿ ಕುಶಲತೆಯೂ ಆಸಕ್ತಿಯೂ ನನಗಿಲ್ಲ. ಆದರೆ ನಾಟಕದಲ್ಲಿ ಅಭಿರುಚಿಯಿತ್ತು. ಅಲಂಕಾರ ಶಾಸ್ತ್ರದ ವಿದ್ಯಾರ್ಥಿಯಾದ ನನಗೆ ನಾಟಕದ ಕಡೆಗಿನ ಒಲವು ಸಹಜವೇ. ಅಲ್ಲದೇ ನಾಟಕದಲ್ಲಿ ನಟಿಸುವವರೆಲ್ಲಾ ನನ್ನ ಆತ್ಮೀಯ ವಲಯದವರು. ಈ ಎಲ್ಲಾ ಕಾರಣಗಳಿಂದ ಮೂರು ವರ್ಷ ನಾಟಕ ಸ್ಪರ್ಧೆಯ ತಂಡದೊಂದಿಗೆ ನಾನೂ ಇದ್ದೆ. ನಾಟಕಕ್ಕೆ ವೇದಿಕೆಯ ಸಿದ್ಧತೆ, ವಸ್ತುಗಳನ್ನು ಕೊಳ್ಳುವುದು ಮೊದಲಾದ ಕೆಲಸಗಳನ್ನು ನಾಟಕ ತಂಡದೊಂದಿಗಿದ್ದು ಮಾಡುತ್ತಿದ್ದೆ. ಅಭ್ಯಾಸದ ಸಮಯದಲ್ಲಿ ನಾನೂ ನಾಟಕವನ್ನು ನೋಡುತ್ತಿದ್ದೆ. ಆದ್ದರಿಂದ ನಾಟಕದ ಬಹುಪಾಲು ಸಂಭಾಷಣೆಗಳು ನನಗೆ ಕಂಠಸ್ಥವಾಗಿರುತ್ತಿದ್ದವು. ಅಭಿನಯಕ್ಕನುಗುಣವಾಗಿ ಮೂಲಕವಿಯ ಸಾಲುಗಳನ್ನು ಬದಲಾಯಿಸಿದ್ದರೆ, ಬಿಟ್ಟಿದ್ದರೆ ಮೂಲವನ್ನು ಓದಿ ಯಾಕೆ, ಹೇಗೆ ಪರಿವರ್ತನೆ ಮಾಡಲಾಗಿದೆ ಎಂದು ಒಬ್ಬನೇ ಮನಸ್ಸಿನಲ್ಲೇ ವಿಶ್ಲೇಷಿಸುತ್ತಿದ್ದೆ.

 

ಇಂತಹ ಪ್ರಯೋಜನವನ್ನು ಎಲ್ಲರೂ ಪಡೆದುಕೊಂಡಿದ್ದರೆ ಹಿರಿಯರು ನಾಟಕವನ್ನು ನಿಂದಿಸುತ್ತಿರಲಿಲ್ಲವೇನೋ. ನಾಟಕದಲ್ಲಿ ಭಾಗವಹಿಸುತ್ತಿದ್ದವರ ಆಸಕ್ತಿ ಅಭಿನಯದಲ್ಲೂ, ವಿಲಾಸಗಳಲ್ಲೂ ಮಾತ್ರ ಇರುತ್ತಿತ್ತು. ನಾಟಕದಲ್ಲಿರುವ ಭಾಷಾಸ್ವಾರಸ್ಯವನ್ನೋ, ವಿಷಯಸ್ವಾರಸ್ಯವನ್ನೋ ಪಡೆದುಕೊಳ್ಳಬೇಕು ಎಂಬ ಹಂಬಲದಿಂದ ಯಾರೂ ನಾಟಕತಂಡಕ್ಕೆ ಸೇರುತ್ತಿರಲಿಲ್ಲ. ಒಳ್ಳೆಯ ಅಭಿನಯಸಾಮರ್ಥ್ಯವಿರುವ ನಟನೊಬ್ಬ ನಾಟಕದಿಂದ ಇಂತಹ ಪ್ರಯೋಜನಗಳನ್ನು ಮಾಡಿಕೊಳ್ಳಬೇಕು ಎಂದು ಹೇಳುವುದೂ ತಪ್ಪಾಗಬಹುದು. ಆದರೆ ನಾಟಕದಿಂದ ಸುಲಭವಾಗಿ ಸಿಗುವ ಇಂತಹ ಅನೇಕ ಪ್ರಯೋಜನಗಳನ್ನು ವ್ಯರ್ಥವಾಗಿಸುತ್ತಾರೆ ಎಂಬುವುದೇ ಖೇದದ ಸಂಗತಿ.

 

ಕರ್ಪೂರಮಂಜರೀ, ಭಗವದಜ್ಜುಕ, ಪಂಡಿತರಾಜೀಯ ಎಂಬ ಮೂರು ನಾಟಕಗಳ ತಂಡಗಳೊಂದಿಗೆ ನಾನಿದ್ದೆ. ಆ ನಾಟಕಗಳ ಅಭ್ಯಾಸದ ಸಂದರ್ಭದಲ್ಲಿ ಕೇಳಿದ ಹಲವು ಸುಂದರ ಸಂಭಾಷಣೆಗಳು ಈಗಲೂ ಸ್ಮೃತಿಪಥದಲ್ಲಿವೆ. ಸದ್ಯ ಸಂಸ್ಕೃತ ಕ್ಷೇತ್ರದಲ್ಲಿ ಮಹಾಕವಿಯಾದ ಶಂಕರ ರಾಜಾರಾಮನ್ ಅವರೊಂದಿಗೆ ಮಾತನಾಡುತ್ತಿರುವಾಗ ಅವರು ಭಗವದಜ್ಜುಕ ನಾಟಕದ ವಿಚಾರವನ್ನು ಪ್ರಸ್ತಾಪಿಸಿದರು. ನಾನೂ ಕೂಡಾ ಅಲ್ಲಿನ ಸಂಭಾಷಣೆಗಳನ್ನು ನೆನಪಿಸಿಕೊಂಡು ಕೆಲವೊಂದು ವಿಚಾರಗಳನ್ನು ಹಂಚಿಕೊಂಡೆ. ಒಬ್ಬ ಮಹಾಕವಿಯ ಮುಂದೆ ಮುಕ್ತವಾಗಿ ಮಾತನಾಡಲು ಅವಕಾಶವಾದುದು ನಾಟಕದ ಕಾರಣದಿಂದಲೇ ಎಂಬುವುದರಲ್ಲಿ ಸಂದೇಹವಿಲ್ಲ.

 

ಅನೇಕರು ಹೀಗೆ ಯೋಚಿಸುವುದಿಲ್ಲ ಎಂಬುವುದೇ ನಾಟಕದ ಹಾಗೂ ನಟರ ಅಧೋಗತಿಗೆ ಕಾರಣವಾಗಿರಬಹುದು. ನಾಟಕದ ತಂಡದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದ್ದ ಗೆಳೆಯನ ಮನೆಗೆ ತೆರಳಿದ್ದೆ. ಮಾತಿನ ಮಧ್ಯೆ ನೀನು ಇಂತಹ ಪಾತ್ರವನ್ನು ಚೆನ್ನಾಗಿ ಮಾಡಿದ್ದೆ ಎಂದು ನೆನಪಿಸಿದೆ. ಅಲ್ಲೇ ಇದ್ದ ಮತ್ತೊಬ್ಬ ಗೆಳೆಯ ಯಾವ ನಾಟಕದಲ್ಲಿ? ಎಂದು ಕೇಳಿದ. ಆತನಿಗೆ ನೆನಪೇ ಆಗಲಿಲ್ಲ. ಜೀವನದ ಜಂಜಾಟದಲ್ಲಿ ತೊಡಗಿಕೊಂಡ ಮೇಲೆ ನಾಟಕವನ್ನು ನೆನಪಿಟ್ಟುಕೊಳ್ಳಬೇಕು ಎಂದರೆ ಅದು ಸಾಧ್ಯವಿಲ್ಲ. ನಾನೇ ಭಗವದಜ್ಜುಕ ನಾಟಕದಲ್ಲಿ ಎಂದು ನೆನಪಿಸಿದೆ. ನಾಟಕದ ಹೆಸರನ್ನು ಕೇಳಿದ ಕ್ಷಣದಲ್ಲೇ ಆತ ರೋಮಾಂಚಿತನಾಗುತ್ತಾನೆ ಎಂಬುವುದು ನನ್ನ ಊಹೆಯಾಗಿತ್ತು. ಆದರೆ ಅದೇ ಯಾವುದೋ ನಾಟಕದಲ್ಲಿ ಎಂದು ಹೇಳಿ ಅತ್ಯಂತ ಉಪೇಕ್ಷಾಭಾವವನ್ನು ಸೂಚಿಸಿದ. ನನಗಂತೂ ನಾಟಕದ ಹೆಸರನ್ನು ಕೇಳಿದಾಗಲೇ ಅಲ್ಲಿರುವ ಸುಂದರ ಸಂಭಾಷಣೆಗಳು ನೆನಪಾಗಿ ರೋಮಾಂಚನವಾಗುತ್ತದೆ. ನಾಟಕದಲ್ಲಿ ಚೆನ್ನಾಗಿ ಪಾತ್ರ ಮಾಡಿದ ನಟನೇ ನಾಟಕದ ಬಗೆಗೆ ಈ ರೀತಿಯಾದ ಉಪೇಕ್ಷೆಯನ್ನು ತೋರಿದರೆ ಅಭಿನಯದ ಗಂಧಗಾಳಿಯಿಲ್ಲದ  ಕೆಲವು ಪ್ರಾಧ್ಯಾಪಕರು ನಾಟಕವನ್ನು ಹೀನವಾಗಿ ಕಾಣುವುದು ತಪ್ಪಲ್ಲವಲ್ಲ. 

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...