ಶನಿವಾರ, ಫೆಬ್ರವರಿ 27, 2021

कृष्णाय मणिहाराः

(मणिहारबन्धे इमानि पद्यानि रचितानि । बन्धेस्मिन् प्रतिपादं अनुष्टुप्छन्दसि द्वितीय-चतुर्थ-षष्ठवर्णाः समानाः भवन्ति । प्रथमपद्यं सचित्रं दर्शितम् ।)


लोकलोकनकर्तव्याद्द्वापरे पदपद्मकम् ।

यः कृत्वा कृतकृत्यस्तं श्रीपङ्गोपनृपम्भजे ॥१॥

शैशवे शत्रुशक्तीनां मारणं रणरङ्गके

व्यधत्त धर्मधर्ता तं श्रीपङ्गोपनृपम्भजे ॥२॥

संहृत्य हृत्सुहृद्भावात्क्षीरञ्च रसरञ्जितम् ।

रेजे व्रजेऽब्धिजेशस्तं श्रीपङ्गोपनृपम्भजे ॥३॥

गिरिधारिहरिस्त्राता कुनागनाशनाद्धितः ।

लीलाकुलाकुलाङ्गस्तं श्रीपङ्गोपनृपम्भजे ॥४॥

यशोदेशो यशोदाया यो राधारागराट्प्रभुः

नन्दनन्दनस्तं हि श्रीपङ्गोपनृपम्भजे ॥५॥

कंसध्वंसनसत्कार्यधीरक्रूरवरप्रदः ।

सताम्पातावतारी तं श्रीपङ्गोपनृपम्भजे ॥६॥

क्रूरान्घोराञ्जरासन्धादीनरीनहनद्धिया ।

यः सदा सत्सु सश्रीस्तं श्रीपङ्गोपनृपम्भजे ॥७॥

रमा भामा च माधुर्ययुते एते वृते पुनः ।

येनाङ्गनास्सनाथास्तं श्रीपङ्गोपनृपम्भजे ॥८॥

सुदाम्नेऽदान्मुदा सख्ये  योऽभयं भयभञ्जकः ।

सुभद्रां भद्रभर्त्रे, तं श्रीपङ्गोपनृपं भजे ॥९॥

गीता माता सताय्येँन प्रदिष्टा दिव्यदिक्प्रदा ।

सदेष्टं देवदेवं तं श्रीपङ्गोपनृपं भजे ॥१०॥ 



चित्रलेखनम्- कीर्ति अडिगा

(इमानि पद्यानि सम्पूर्णानन्दविश्वविद्यालयद्वारा आयोजितायां काव्यकल्लोलिनीनाम्न्याम् आन्तर्जालिककविगोष्ठ्यां प्रस्तुतानि ।)

ಗುರುವಾರ, ಫೆಬ್ರವರಿ 11, 2021

अनौपचारिकी शिक्षा यद्वलादस्मि रक्षितः

जीवने औपचारिकरूपेण बहु किमपि वयं पठामः ।  अनौपचारिकरूपेण यत्पठितं तस्य तु महत्त्वं औपचारिकशिक्षायाः अपेक्षया अधिकमेव वर्तते इति मे मतिः । यतो हि विद्यालये अङ्कप्राप्त्यर्थं यदा पठ्यते तदानीं यान्त्रिकतां वयमनुभवामः । पाठ्यक्रमः अयम् इति निर्दिश्य तन्निमित्तं समयसीमा अपि निर्दिश्यते चेत् तत्र पाठनेऽपि आनन्दः न भवति । परन्तु स्थूलरूपेण किञ्चन पाठ्यक्रमं निश्चित्य वस्तुतः ज्ञानस्य सम्प्रसारणायैव यत् पाठनं क्रियते तत्र तु अध्यापकस्य छात्रस्य च महान् लाभः वर्तते । 

नाहं शिक्षकः शिक्षाशास्त्री वा । केषाञ्चन अनुभवानाम् आधारेण यत्किमपि यदि स्फुरति तर्हि तस्य संविभागम् अत्र करोमि । मम मातुः चिकित्सावसरे शस्त्रचिकित्सकः आगत्य प्रतिदिनं कुशलं पृच्छति स्म । कस्मिंश्चित् दिने मातरं परीक्ष्य तत्र विद्यमानान् वैद्यकीयच्छात्रान् अनुवैद्यान् च उद्दिश्य पञ्च निमेषान् यावत् किमपि उक्तवान् । तेन उक्तः विषयस्तु मया किञ्चिदपि नावगतः । परन्तु इदमवगतं यत् तेन उच्यमानः विषयः वैद्यकीयक्षेत्रे सद्यःप्रविष्टानां तासां महते उपकाराय भवति इति । यदि एतमेव विषयं सः औपचारिकरूपेण कक्ष्ययाम् अपाठयिष्यत् तर्हि एतावान् प्रभावः छात्राणाम् अभविष्यत् इति वक्तुं न शक्यते ।

एतादृशानाम् अनौपचारिकाध्ययनानां प्रयोजनं बहुधा मया प्राप्तम् इति मम आनन्दः विद्यते । शृङ्गेरीं गतवान् अहं छात्रावासे वासम् अकरवम् इति कारणतः बहुविधाम् अनौपचारिकशिक्षां प्राप्तवान् । तत्र विद्यालयस्य मम च भावनात्मकः सम्बन्धः आसीत् । अतः विद्यालयस्य दोहनं यावत् कर्तुं शक्यते तावत् छात्रावस्थायां मया कृतम् । २०१६-२०१७ तमे वर्षे पुरस्कारस्य धनराशिः, स्पर्धार्थं गमनागनव्ययः, प्रयाणे भोजनव्यवस्था, विद्यार्थिवेतनम्, इत्येतेषां चतुर्णाम् अंशानां कृते विद्यालयेन मम कृते एकलक्षरूप्यकाणां व्ययः कृतः वर्तते । एवं विद्यालयस्थं सर्वमपि मदीयम् इति भावः यदा भवति तदा तु अनौपचारिकरूपेण पठनस्य अवसराः बहवः लभ्यन्ते ।

ये च विद्यालयपरिसरात् बहिः वसन्ति तेषाम् एतादृश-अनौपचारिकशिक्षाप्राप्तिः न भवति । (जीवनदृष्ट्या पश्यामः चेत् ते अपि अनेकान् पाठान् पठेयुः । परन्तु विद्यालयं प्रविष्टवता च्छात्रेण यावद्विद्यालयतः प्राप्तव्यं तावत् न प्राप्यते इति कथनस्य आशयः ।) अतः यदि सौकर्यं वर्तते तर्हि यावच्छक्यं विद्यालयपरिसरे एव वासः क्रियते चेत् बहुविधम् अनौपचारिकं ज्ञानं प्राप्तुं शक्यते इति अनुभवस्तु जातः । एवं प्राप्तम् अनौपचारिकज्ञानमेव अस्माकम् अग्रिमजीवनं कष्टरहितं यथा स्यात् तथा करोति ।    

अन्येषां भाषणादिश्रवणे महती रुचिः मम । तदानीं समग्रस्य विषयस्य ग्रहणं तु न भवति । परन्तु कतिचन वाक्यानि तु बुद्धिं प्रविशन्ति स्म । तादृशवाक्येषु सुभाषितानि बहूनि भवन्ति स्म । प्रौढशालायामपि मम संस्कृतविषयः नासीत् इति हेतोः विद्यालयप्रवेशात् प्राक् अहम् एकमपि सुभाषितं न जानामि स्म । विद्यालयागमनानन्तरमपि एकमपि सुभाषितं न कण्ठस्थीकृतवान् । परन्तु अनेकानि सुभाषितानि मम कण्ठे विद्यन्ते । कदाचित् कश्चित् मां घण्टाद्वयं यावत् बोधनम् अकरोत् । तदा तस्य वाक्यानि श्रुत्वा दशाधिकसुभाषितानि मया स्मृतानि । तेषु एकमपि सुभाषितम् औपचारिकरूपेण पठितं नासीत् । 

व्याकरणविषये अपि समाना स्थितिः । मम तु अलङ्कारशास्त्रम् । मन्दमतयः संस्कृतमधीयते । तत्रापि मन्दमतितराः अलङ्कारशास्त्रमधीयते इति स्थितिः समाजे वर्तते । अतः अलङ्कारशास्त्रं पठितुं प्रवृ्त्तः अहं मन्दः एव स्याम् । तथापि व्याकरणविषये मम महती आसक्तिः । मधुकेश्वरभट्ट-प्रियव्रतमिश्र-प्रमोद-जयकृष्णसदृशाः उत्कृष्टाः वैयाकरणाः प्राक्शास्त्रिस्तरे मम पाठनम् अकुर्वन् इत्यपि एतस्य कारणं स्यात् । अनिवार्यतया व्याकरणपठनं तु शास्त्रिप्रथमवर्षे समाप्यते । तदन्तरं प्रायेण बहवः इतरशास्त्रीयच्छात्राः व्याकरणं द्विषन्ति । न पठन्ति च । मम तु विरुद्धा स्थितिः तदनन्तरमपि रुचिमान् सन् सन्देहे सति ज्येष्ठान् पृच्छन् व्याकरणं किञ्चित् किञ्चित् पठितवान् । तत्परिणामतः बहवः माम् अद्यापि वैयाकरणमेव मन्वते ।

अत्र संस्कृतभारतीकार्यमपि कारणम् । संस्कृतभारतीप्रवेशः भवति चेत् अध्ययनेच्छा नश्यति इति बहवः वदन्ति । मम विषये तु न तथा । अद्य किञ्चिद्वा संस्कृतेन एवं लिखन् अस्मि इत्येतस्य कारणं संस्कृतभारती एव । तत्रापि यदा आरभ्य अक्षरे मम प्रवेशः जातः ततः मासचतुष्टयात् अनन्तरं प्रतिसप्ताहं घण्टात्रयं जनार्दनमहोदयस्य अनौपचारिकपाठनम् आरब्धम् । ततः अपि बहवः व्याकरणांशाः ज्ञाताः, तेन बहुलाभान्वितः च अभवम् ।

अद्य कश्चन ज्येष्ठः महाविद्यालयीयप्राध्यापकः व्याकरणविषये किमपि प्रष्टुं दूरवाणीं कृतवान् । कदाचित् एतादृशान् अंशान् अस्माकं छात्रानपि आगत्य बोधयतु इति च उक्तवान् । मम आश्चर्यम् अभवत् यत् सः तु संस्कृतक्षेत्रे चत्वारिंशदधिकवर्षेभ्यः कार्यं कुर्वन् वर्तते । महतां वैयाकरणानां परिचयः तु तस्य स्यादेव । तथापि सः व्याकरणविषयं किमर्थम् मामेव पृष्टवान् । अनौपचारिकरूपेण व्याकरणं पठितवतः मम भाग्यमेव इदमिति मन्ये ।

ಬುಧವಾರ, ಫೆಬ್ರವರಿ 10, 2021

त्यक्तो न स्यात् "त्याजितः"

त्याजितैः फलमुत्खातैर्भग्नैश्च बहुधा नृपैः ।
तस्यासीदुल्बणो मार्गः पादपैरिव दन्तिनः ॥ (रघुवंशम्, ४-३३)

त्याजितैरिति । "फलं फले धने बीजे निष्पत्तौ भोगलाभयोः" इति केशवः । वृक्षपक्षे प्रसवं च । त्याजितैः । त्यजेर्ण्यन्ताद्द्विकर्मकादप्रधाने कर्मणि क्तः । उत्खातैः स्वपदाच्च्यावितैः । अन्यत्रोत्पाटितैः । बहुधा भग्नै रणे जितैः । अन्यत्र च्छिन्नैः । नृपैः । पादपैर्दन्तिनो गजस्येव । तस्य रघोर्मार्ग उल्बणः प्रकाश आसीत् । "प्रकाशं प्रकटं स्पृष्टमुल्पणं विशदं स्फुटम्" इति यादवः ।  (मल्लिनाथव्याख्या)

एतस्य श्लोकस्य तात्पर्यार्थः इत्थं वर्तते । रघुः दिग्विजयावसरे मार्गे स्थितवतां राज्ञां नाशनम् अकरोत् । तेन तस्य मार्गे प्रकाशः (श्लोके प्रकाशार्थे उल्बणशब्दः प्रयुक्तः) समभवत् । गजाः वृक्षान् उन्मूलयन्ति चेत् यथा तेषां मार्गे प्रकाशः भवति तथा शत्रून् नाशितवतः रघोः मार्गे अपि प्रकाशः आसीत् ।

श्लोके विद्यमानानां पदानाम् अर्थावगमनेन तात्पर्यार्थस्तु ज्ञायते एव । काव्यरसोऽपि आस्वाद्यते । परन्तु कस्य केन सह कथम् अन्वयः इति ज्ञानेन काव्यरसेन सह व्याकरणरसः अपि अनुभोक्तुं शक्यः । तत्र दृष्टिः प्रसार्यते । 

रघोः मार्गः त्याजितलाभानां नृपाणां नाशनेन प्रकाशयुक्तः अभवत्  इत्येतम् अर्थं श्लोके विद्यमानानां पदानाम् आधारेण पश्यामः ।  'उत्खातैः फलं त्याजितैः नृपैः मार्गः उल्बणः आसीत्' इति शब्दाः पद्ये प्रयुक्ताः । अत्र त्याजितैः इति क्तान्तं नृपैः इत्यनेन सह सम्बद्धं भवति चेदेव एतस्य अर्थस्य सिद्धिर्भवति । परन्तु तत्र तथा अर्थसाधने क्लेशः कश्चन विद्यते ।

नृपाः फलं त्यक्तवन्तः इति अण्यन्तं वाक्यं कर्तरि । रघुः नृपैः फलं त्याजितवान् इति ण्यन्तं वाक्यम् ।  गतिबुद्धिप्रत्यवसानार्थशब्दकर्माकर्मकाणामणि कर्ता स णौ इति सूत्रेण गत्याद्यर्थकधातुषु सत्सु  अणिजन्तवाक्ये यः कर्ता भवति (ण्यन्तवाक्ये प्रयोज्यकर्ता इत्युच्यते), ण्यन्तवाक्ये तस्य कर्मसंज्ञा द्वितीयाविभक्तिः च भवति । यथा 'बालकः शालां गच्छति' इत्यस्य ण्यन्तवाक्यं 'पिता बालकं शालां गमयति' इति । गत्याद्यर्थान् अतिरिच्य अन्यत्र तु प्रयोज्यकर्तुः तृतीया एव । यथा- 'सेवकः पत्रं लिखति' इत्यस्य 'स्वामी सेवकेन पत्रं लेखयति' इति ण्यन्तवाक्यम् ।

अधुना त्यजधातोः विषये चिन्तयामः चेत् वस्तुतः अयं धातुः गत्याद्यर्थकेषु नान्तर्भूतः । अतः ण्यन्ते वाक्ये प्रयोज्यकर्तुः द्वितीयाविभक्तिः न भवति । एतेन 'नृपाः फलं त्यक्तवन्तः' इत्यस्य 'रघुः नृपैः फलं त्याजितवान्' इति ण्यन्तवाक्यं सिद्धं तस्य च कर्मणि 'रघुणा नृपैः फलं त्याजितम्' इति वाक्यं सिद्ध्यति ।

श्लोकेऽपि नृपैः इत्युक्तं वर्तते अतः न कापि हानिः इति न चिन्तनीयम् । नृपैः इत्यस्य त्याजितैः इति क्तान्तं विशेषणत्वेन प्रयुक्तम् । (त्याजितैः इति तृतीयाबहुवचनं नृपैः इत्यत्रापि तथा । यदि 'रघुः नृपैः फलं त्याजितम्' इति वाक्यं स्यात् तर्हि 'नृपाः फलैः त्याजितैः' इति श्लोके प्रयुक्तम् स्यात् । परन्तु तथा नास्ति । ) एवं सति वाक्यं 'रघुणा नृपाः फलं त्याजिताः' इत्येव स्यात् । एवं वाक्यप्राप्तौ त्यजधातोः णिचि द्विकर्मकता अङ्गीकरणीया एव । 

एवं सति 'रघुः नृपान् फलं त्याजितवान्' इति कर्तरि वाक्यम् । रघुणा नृपाः फलं त्याजिताः इति कर्मणि ।   

बुद्धिभक्ष्यार्थयोः शब्दकर्मणां च निजेच्छया ।
प्रयोज्यकर्मण्यन्येषां ण्यन्तानां लादयो मताः ॥ (सिद्धान्तकौमुदी)

इत्युक्तम् । त्यजधातुः बुद्ध्यादिष्वर्थेषु नास्ति । अतः प्रयोज्यकर्मणः प्रथमा भवति । अतः 'रघुः नृपान् फलं त्याजितवान्' इत्यस्य कर्मणि 'रघुणा नृपाः फलं त्याजिताः' इति प्रयोगः सिद्धः भवति । तैः मार्गः प्रकाशयुक्तः अभवत् इति कथयितुं 'रघुणा उत्खातैः फलं त्याजितैः नृपैः तस्य मार्गः उल्बणः आसीत्' इति इति प्रयुक्तम् । अत्र नृपैः इति तृतीया प्रयुक्ता इति कारणतः  नृपः इति कर्ता स्यादिति भानं सामान्यतया भवति । परन्तु तत् करणम् एव इति तु स्पष्टम् ।   

(जनार्दनहेगडेमहोदयस्य बोधनेन अयं विषयः संगृहीतः । त्यजधातोः णिचि द्विकर्मकत्वविषये अन्यानि मतानि अपि स्युः, तानि न परिशीलितानि । )

ಶುಕ್ರವಾರ, ಫೆಬ್ರವರಿ 5, 2021

अनियन्त्रितचित्तस्य कुकार्यं सर्वमेव हि

जगति विद्यमानेषु सर्वेष्वपि जीविषु मानवस्य मनः तीक्ष्णं सत् सम्यक् कार्यं करोति इति वयं सर्वेऽपि जानीमः । कदाचित् मनसः विक्षिप्तता भवति । तन्नाम बहुषु कार्येषु यदि पराजयः एव प्राप्यते तर्हि मनसः समतोलनं विनश्यति । तदा कदाचित् किं कुर्वन्नस्मि अहम् इत्येव विस्मर्यते । युक्तायुक्तविवेकः, कार्याकार्यविवेकः वा तदानीं न भवति । यस्य मनः खिन्नं भवति सः तु उन्मत्त इव व्यवहरति ।

मम तु मनसः खेदः अभवत् इति परिस्थितिः बहुविरलतया भवति । सर्वदाऽपि प्रायेण प्रसन्नः एव भवामि अहम् । परन्तु कदाचित् मम मनः बहु खिन्नम् आसीत् विविधैः कारणैः । यत्किमपि विचिन्त्य एतत्करणीयम्, इदं सिद्ध्यति इति चिन्तयामि चेत् किमपि न सिद्ध्यति स्म । परन्तु तस्मिन् काले तु अवशिष्टस्य कार्यस्य समापने महान् उत्साहः भवति इति तु सत्यमेव ।

कस्माच्चित् आपणात् मया किञ्चिद्धनं प्राप्तव्यम् आसीत् । स च आपणः मम कार्यालयतः एककिलोमीटर्-परिमिते दूरे आसीत् । तथैव मया वित्तकोषः अपि गन्तव्यः आसीत् । अन्यस्मिन् अपि आपणे किञ्चित् कार्यम् आसीत् । सर्वमपि कार्यं मध्याह्ने भोजनविरामावसरे समापयिष्यामि इति चिन्तितवान् । मम कार्यालये विद्यमानायाः कस्याश्चित् ज्येष्ठभगिन्याः यानं स्वीकृत्य कार्याणि कर्तुं प्रस्थितः । 

आदौ तु आपणः एव गतः यतः मया धनं प्राप्तव्यम् आसीत् । स च आपणः सीतासर्कल् इति स्थलात् अनतिदूरे वर्तते । तत्र महामार्गः अस्ति यत्र  वाहनसम्मर्दः अधिकः भवति । आपणस्य पार्श्वे  किञ्चन कार्-यानम् स्थितम् आसीत् । तस्य पृष्ठतः अन्यकार्-यानस्य स्थगनार्थं यावत् स्थलम् आवश्यकं तावत् स्थलम् आसीत् । मम तु केवलं धनस्वीकरणमात्रं कार्यम् । तस्माद् कार्-यानस्य पृष्ठतः यानं स्थगयित्वा धनं स्वीकृत्य आगतवान् । 

प्रत्यागत्य याने उपविष्टः प्रस्थातुकामः कुञ्चिकां याने प्रवेशितवान् । परन्तु याने कुञ्चिका न प्रविष्टा । यानस्य handle lock कृतं नासीत् । अहं कुञ्चिकां परिशीलितवान् । कुञ्चिका किञ्चिदिव वक्रा आसीत् ।  अहं एषा कुञ्चिका नष्टा इति चिन्तितवान् । भगिन्याः यानं स्वीकृत्य आगतवान् इति कारणतः प्रत्यर्पणं मम उत्तरदायित्वम् । अहं कथञ्चित् मम कार्यालयपर्यन्तं यानं नीत्वा तस्यै दद्याम् । नो चेत् मम अपराधः भविष्यति इति अहं चिन्तितवान् । अपि च आपणस्य अपेक्षया अधोभागे कार्यालयः आसीत् । अतः प्रायेण यानस्य यन्त्रम् अनुपयुज्य एव यानमानेतुं शक्यम् आसीत् । तथापि कुत्रचित् यानस्य नोदनं करणीयं भवति इत्यपि अहं जानामि स्म । परन्तु यथाकथञ्चित् यानस्य प्रापणं मया करणीयमेव इति उत्तरदायित्वनिर्वहणबुद्ध्या यानं नुदन्नेव प्रस्थितः ।

तस्मिन् दिने मया पाकः अपि न कृतः आसीत् । अतः क्वचित् बहिरेव भोक्तव्यम् इति पूर्वमेव चिन्तनम् आसीत् । मम तु एतदेकं वैशिष्ट्यं विद्यते । यः कोऽपि कायिकः मानसिको वा क्लेशः भवतु अहं खादनं न परित्यजामि, अपि तु तस्मिन् काले अधिकमेव खादामि । यदा यानं नुदन् अहं कस्यचित् उपाहारमन्दिरस्य समीपम् आगतवान् तदा बुभुक्षा स्मृता । सर्वत्र वैफल्यं जायमानम् अस्ति, भोजनं वा सम्यक् कुर्मः इति यानं स्थगयित्वा भोजनम् आरब्धवान् । भुञ्जानस्य मम मनसि एकं चिन्तनम् उद्भूतम् । किं मया आनीतं यानं ममैव वा? कुञ्चिकायां दोषः अस्ति वा? यानस्यैव परिवर्तनं मया कृतं वा इति । भोजने समाप्यमाने मम संशयः दृढः जायमानः आसीत्, यदा गत्वा यानं दृष्टवान् तदा च दृढतरः अभवत् । द्वे अपि श्वेतवर्णीये एव याने । परन्तु मया तावद् अन्यस्य यानम् आनीतम् आसीत् ।

इदानीं मयि भीतिरपि आरब्धा । भगिन्याः यानस्य कुञ्चिका मम हस्ते अस्ति इति कारणतः तद्यानं कोऽपि न नयेत् । परन्तु एतस्य यानस्य स्वामी आगत्य यदि यानम् अन्विष्येत् तर्हि यानम् अपश्यन् सह आरक्षकालयमेव गच्छेत् । आरक्षकाः तु cctv मध्ये अवलोक्य मां track कृत्वा आगत्य नयेयुः । अहं तु एतावता मम कार्यालयमपि न प्राप्तवान् । अर्धदूरे एव अस्मि । इदानीमत्रैव यानं त्यजेयं चेत् अन्यः कोऽपि नयति चेत् आरक्षकाः मां नयेयुः । अतः अहं यानं कार्यालयं नीतवान् । ततः अन्यस्याः भगिन्याः यानं स्वीकृत्य यानदात्र्या भगिन्या सह पुनरपि आपणं गतवान् । आपणे भगिन्याः यानं मया स्थापिते स्थाने एव आसीत् । कोऽपि आगत्य यानम् अन्विष्टवान् वा इत्यापणिकः पृष्टः । याने कोऽपि न पृष्टवान् इति आपणिकेन उक्तम् । तदानीं तु किञ्चिदिव समाहितं मनः । आपणिकं सर्वं वृ्त्तान्तं निवेद्य, कोऽपि यानम् अन्विष्यति चेन्मम सङ्ख्यां ददातु इति उक्त्वा भगिन्याः यानं स्वीकृत्य प्रत्यागवन्तौ ।

ततः अनुक्षणं दोषेण आनीतं यानं पुनः तत्र प्रापणीयम् इति बुद्धिः आगता । परन्तु नयनं कथम् ? कुञ्चिका नास्ति । तत्र गन्तुम् आरोहणं करणीयम् । उपायद्वयमेव अवशिष्टम् आसीत् । एकस्तु तावत्पर्यन्तं यानं नोत्तव्यम् अन्यथा रज्ज्वा अन्यस्मिन् याने बद्ध्वा जागरूकतया नेतव्यम् । यानस्य हानिरपि न भवेत् । अन्यस्य मित्रस्य साहाय्येन द्वितीयेन उपायेन कार्यं साधितवन्तः । पुनरपि दशसु निमेषेषु मया दोषवशादानीतम् यानं स्वस्थानं प्रापितम् । भगवतः कृपया तावत्पर्यन्तं यानस्वामी तत्र नागतः । तेन प्राप्तव्यं तर्जनम्, निन्दा, उपदेशः वा मया न प्राप्तः ।

प्रत्यागमनावसरे समग्रे कार्यालये मया कृतस्य मूर्खकार्यस्य वार्ता प्रसृता आसीत् । दिनद्वयं यावत् सर्वेषाम् उपहासपात्रम् अभवम् । दिनचतुष्टयानन्तरम् कार्यान्तरवशात् तत्र गतः अहं यानस्थानम् अवलोकितवान् । तत्र तद्यानं नासीत् । स्वामी आगत्य यानं नीतवान् स्यात् इति तर्कयामि । एतावता माम् अन्विष्यन्तः आरक्षकाः नागताः इति हेतोः अस्य प्रकरणस्य सुखान्त्यमेव अभवत् इति चिन्तयन् एतत् लिखितवान् अस्मि । 

ಜಗತ್ತಿನ ಜೀವಿಗಳಲ್ಲಿ ಮಾನವನ  ಮನಸ್ಸು ಸಂವೇದನಾಶೀಲವಾಗಿರುತ್ತದೆ ಎಂಬುವುದು ಎಲ್ಲರಿಗೂ ತಿಳಿದಿರುವ ಸಂಗತಿಯೇ ಆಗಿದೆ. ಮನಸ್ಸಿಗೆ ಬೇಸರವಾದಾಗ ಮಾಡುವ ಕೆಲಸಗಳು ಎಡವಟ್ಟಿನ ಕೆಲಸಗಳೇ ಆಗಿರುತ್ತವೆ. ಅನೇಕ ಕೆಲಸಗಳು ವಿಫಲವಾದಾಗ ಸಹಜವಾಗಿಯೇ ಮನಸ್ಸು ಹಿಡಿತ ಕಳೆದುಕೊಳ್ಳುತ್ತದೆ. ಆಗ ಮಾಡುವ ಕೆಲಸಗಳು ಮತ್ತಷ್ಟು ತೊಂದರೆಗಳಿಗೆ ದಾರಿಯಾಗುತ್ತವೆ.

 

ನನ್ನ ವಿಷಯದಲ್ಲಿ ಹೇಳುವುದಾದರೆ ಮನಸ್ಸಿಗೆ ಬೇಜಾರಾಗುವುದು ತುಂಬಾ ಕಡಿಮೆ. ಯಾವತ್ತೂ ಮನಸ್ಸನ್ನು ಸಂತೋಷವಾಗಿಟ್ಟುಕೊಳ್ಳುವವನು ನಾನು. ಆದರೂ ಕೂಡಾ ಒಂದು ದಿನ ವಿವಿಧ ಕಾರಣಗಳಿಂದ ನನ್ನ ಮನಸ್ಸಿಗೆ ತುಂಬಾ ಬೇಜಾರಾಗಿತ್ತು. ಬೇಜಾರಾದಾಗ ಪೆಂಡಿಂಗ್ ಇರುವ ಕೆಲಸಗಳ ಬಗ್ಗೆ ನೆನಪಾಗಿ ಅದನ್ನು ಮುಗಿಸಿಬಿಡುವ ಉತ್ಸಾಹವೂ ಹುಟ್ಟುತ್ತದೆ.

 

ಅಂಗಡಿಯಾತನೊಬ್ಬ ನನಗೆ ಹಣ ಕೊಡುವುದಿತ್ತು. ಆತನ ಅಂಗಡಿ ನನ್ನ ಕಛೇರಿಯಿಂದ ಸುಮಾರು ೧ ಕಿ.ಮೀ ದೂರದಲ್ಲಿತ್ತು. ಆ ದಿನ ಕಚೇರಿಯ ಸುತ್ತಮುತ್ತ ಅನೇಕ ಕೆಲಸಗಳಿದ್ದವು. ಆದ್ದರಿಂದ ಕಛೇರಿಯಲ್ಲಿನ ಹಿರಿಯ ಮಹಿಳೆಯೊಬ್ಬರ ಸ್ಕೂಟಿ ಪಡೆದುಕೊಂಡು ಕೆಲಸಗಳನ್ನು ಪೂರೈಸುತ್ತೇನೆ ಎಂದು ಹೊರಟೆ.

 

ಮೊದಲಿಗೆ ಅಂಗಡಿಗೇ ಹೋಗಿದ್ದೆ. ಅಂಗಡಿ ಮುಖ್ಯಮಾರ್ಗದಲ್ಲಿತ್ತು. ಅಂಗಡಿಯ ಸಮೀಪದಲ್ಲೇ ಕಾರೊಂದು ನಿಂತಿತ್ತು. ಅದರ ಹಿಂಭಾಗದಲ್ಲಿ ಮತ್ತೊಂದು ಕಾರು ನಿಲ್ಲಿಸುವಷ್ಟು ಜಾಗವಿತ್ತು. ನನ್ನ ಕೆಲಸ ಹಣ ಪಡೆದುಕೊಳ್ಳುವುದಷ್ಟೇ ಆಗಿದ್ದರಿಂದ ಕಾರಿನ ಹಿಂದೆ ಸ್ಕೂಟಿ ನಿಲ್ಲಿಸಿದೆ. ಅಂಗಡಿಯಾತನಿಂದ ಹಣ ಪಡೆದುಕೊಂಡು ಮುಂದಿನ ಕೆಲಸಕ್ಕೆ ತೆರಳಲು ಸ್ಕೂಟಿಯನ್ನೇರಿದೆ.

 

ಸ್ಕೂಟಿ ಸ್ಟಾರ್ಟ್ ಮಾಡಲು ಕೀಲಿಕೈಯನ್ನು ತಿರುಗಿಸಿದರೆ ಕೀಲಿಕೈ ಸರಿಯಾಗಿ ಹೊಂದಾಣಿಕೆಯಾಗುತ್ತಿರಲಿಲ್ಲ. ಸೂಕ್ಷ್ಮವಾಗಿ ಗಮನಿಸಿದಾಗ ಕೀಲಿಕೈ ಸ್ವಲ್ಪ ಬಾಗಿದಂತೆ ಕಂಡಿತು. ಇದೇ ಕಾರಣಕ್ಕಾಗಿ ಸ್ಕೂಟಿ ಸ್ಟಾರ್ಟ್ ಆಗುತ್ತಿಲ್ಲ. ಆದರೆ ಸ್ಕೂಟಿ ನನ್ನದಲ್ಲ. ಕಛೇರಿಯಿಂದ ತಂದ ಸ್ಕೂಟಿಯನ್ನು ಅಲ್ಲಿಗೊಯ್ದು ನೀಡುವ ಜವಾಬ್ದಾರಿ ನನ್ನದಾಗಿತ್ತು. ಅಲ್ಲದೇ ಅಂಗಡಿಯಿಂದ ಕಛೇರಿಯ ಮಾರ್ಗ ಇಳಿಜಾರಾಗಿತ್ತು. ಆದ್ದರಿಂದ ಬಹಳಷ್ಟು ದೂರವನ್ನು ಸ್ಟಾರ್ಟ್ ಮಾಡದೆಯೇ ಹೋಗಬಹುದಾಗಿತ್ತು. ಆದರೂ ಸ್ವಲ್ಪ ದೂರ ತಳ್ಳುವುದು ಅನಿವಾರ್ಯವಾಗಿತ್ತು.

 

ಆ ದಿನ ನಾನು ಅಡುಗೆಯನ್ನೂ ಮಾಡಿರಲಿಲ್ಲ. ಹೊರಗಡೆಯೇ ತಿಂದು ಬರುತ್ತೇನೆ ಎಂದು ಮೊದಲೇ ನಿರ್ಣಯಿಸಿದ್ದೆ. ಆದ್ದರಿಂದ ಹೋಟೇಲೊಂದರ ಬಳಿಯಲ್ಲಿ ಸ್ಕೂಟಿ ನಿಲ್ಲಿಸಿ ಊಟಮಾಡಲಾರಂಭಿಸಿದೆ. ಉಣ್ಣುತ್ತಿದ್ದವನ ಮನಸ್ಸಿನಲ್ಲಿ ಜ್ಞಾನೋದಯವಾಯಿತು. ನಾನು ಸ್ಕೂಟಿಯನ್ನೇ ಬದಲಾಯಿಸಿದ್ದೇನೆಯೇ ಎಂಬ ಸಂಶಯ ಕಾಡಲಾರಂಭಿಸಿತು. ಊಟ ಮುಗಿಸಿ ಬಂದು ಸ್ಕೂಟಿ ನೋಡಿದಾಗ ನನ್ನ ಸಂಶಯ ದೃಢವಾಯಿತು. ನಾನು ಬೇರೊಬ್ಬರ ಸ್ಕೂಟಿ ತಂದಿದ್ದೆ. ಈಗೇನು ಮಾಡುವುದು? ಅರ್ಧದಾರಿಯವರೆಗೆ ನಾನಾಗಲೇ ಬಂದಾಗಿತ್ತು. ನಾನು ತಂದಿದ್ದ ಸ್ಕೂಟಿಯ ಕೀಲಿಕೈ ನನ್ನ ಕೈಯಲ್ಲೇ ಇದ್ದುದರಿಂದ ಅದನ್ನು ಬೇರೆ ಯಾರಾದರೂ ಕದಿಯುವ ಹೆದರಿಕೆಯಿರಲಿಲ್ಲ. ಈ ಸ್ಕೂಟಿಯನ್ನು ಬಿಟ್ಟರೆ ಬೇರೆ ಯಾರಾದರೂ ಹೊತ್ತೊಯ್ದರೆ ನನ್ನ ಮೇಲೆಯೇ ಸ್ಕೂಟಿ ಕದ್ದ ಆರೋಪ ಬರುತ್ತದೆ. ಆದ್ದರಿಂದ ಸ್ಕೂಟಿಯನ್ನು ಹೇಗಾದರೂ ಕಚೇರಿಯವರೆಗೆ ಒಯ್ಯುವುದೇ ಸೂಕ್ತ ಎಂದೆನಿಸಿತು.

 

ಕಚೇರಿಗೆ ಬಂದ ತಕ್ಷಣ ಮತ್ತೊಬ್ಬರ ಸ್ಕೂಟಿ ತೆಗೆದುಕೊಂಡು ಮೊದಲು ಕೊಂಡು ಹೋಗಿದ್ದ ಸ್ಕೂಟಿಯ ಮಾಲಕಿಯನ್ನೂ ಕರೆದುಕೊಂಡು ಅಂಗಡಿಯತ್ತ ಧಾವಿಸಿದೆ. ಅಂಗಡಿಯ ಬಳಿಯಲ್ಲಿ ಸ್ಕೂಟಿಯೂ ಇತ್ತು. ಅಂಗಡಿಯ ಮಾಲಿಕನಲ್ಲಿ ಕೇಳಿದಾಗ ಯಾರೂ ಸ್ಕೂಟಿಯ ಬಗ್ಗೆ ಕೇಳಿಲ್ಲವೆಂದ. ನಾನು ತಂದಿದ್ದ ಸ್ಕೂಟಿಯ ಮಾಲಿಕ ಇನ್ನೂ ಬಂದಿರಲಿಲ್ಲ. ನನ್ನ ಬಹುದೊಡ್ಡ  ಆತಂಕ ದೂರವಾಯಿತು. ಅಂಗಡಿಯಾತನಿಗೆ ನನ್ನ ಮೊಬೈಲ್ ಸಂಖ್ಯೆ ಕೊಟ್ಟು ಯಾರಾದರೂ ಹುಡುಕಿದರೆ ಫೋನ್ ಮಾಡಿಸಿ ಎಂದು ಹೇಳಿದೆ.

 

ಆದರೂ ಮನಸಿನ ಮೂಲೆಯಲ್ಲಿ ಆತಂಕವಂತೂ ಉಳಿದಿತ್ತು. ಗಾಡಿಯನ್ನು ಹುಡುಕಿದ ಗಾಡಿಯ ಮಾಲಿಕ ಎಲ್ಲಿಯಾದರೂ ನೇರವಾಗಿ ಪೋಲೀಸ್ ಸ್ಟೇಶನ್ ಗೇ ಓಡಿದರೆ.... ನಾನು ಗಾಡಿಕಳ್ಳನೆಂದಾಗುತ್ತದೆ. ಆದ್ದರಿಂದ ಹೇಗಾದರೂ ಮಾಡಿ ಈ ಗಾಡಿಯನ್ನು ಅಲ್ಲಿಗೆ ತಲುಪಿಸಬೇಕೆಂದೆನಿಸಿತು. ಅಂಗಡಿಗೆ ಹೋಗುವ ಮಾರ್ಗ ಇಳಿಜಾರಾಗಿಲ್ಲ. ಕೊಂಡೊಯ್ಯಲು ಎರಡು ದಾರಿಗಳಿದ್ದವು. ಮೊದಲನೆಯದೆಂದರೆ ಗಾಡಿಯನ್ನು ತಳ್ಳುವುದು, ಎರಡನೆಯದು ಬೇರೆ ಗಾಡಿಗೆ ಕಟ್ಟಿ ಎಳೆದುಕೊಂಡು ಹೋಗುವುದು. ವಾಹನಗಳ ವಿಷಯದಲ್ಲಿ ನಿಪುಣನಾಗಿರುವ ಮಿತ್ರನೊಬ್ಬನ ಸಹಾಯದಿಂದ ಎರಡನೇ ಉಪಾಯವನ್ನು ಮಾಡಿ ಪುನಃ ಗಾಡಿಯನ್ನು ಅಂಗಡಿಯವರೆಗೆ ತಲುಪಿಸಿದೆ. ಪುಣ್ಯಕ್ಕೆ ಆ ಗಾಡಿಯ ಮಾಲಿಕ ಇನ್ನೂ ಬಂದಿರಲಿಲ್ಲ.

 

ಕಛೇರಿಗೆ ವಾಪಾಸಾದಾಗ ಇಡಿಯ ಕಛೇರಿಯಲ್ಲಿ ನಾನು ಮಾಡಿದ ಮಹಾಕಾರ್ಯದ ಸುದ್ದಿ ಹರಡಿತ್ತು. ಎರಡು ದಿನ ನಗೆಪಾಟಲಿಗೀಡಾದೆ. ನಾಲ್ಕು ದಿನಗಳ ನಂತರ ಯಾವುದೋ ಕೆಲಸಕ್ಕಾಗಿ ಆ ಅಂಗಡಿಯ ಬಳಿ ಹೋದಾಗ ಗಾಡಿ ಅಲ್ಲಿರಲಿಲ್ಲ. ಮಾಲಿಕನೇ ಬಂದು ಒಯ್ದಿರಬೇಕೆಂಬುದು ನನ್ನ ಊಹೆ. ನನ್ನನ್ನು ಹುಡುಕಿಕೊಂಡು ಪೋಲೀಸರೂ ಇಷ್ಟರತನಕ ಬಂದಿಲ್ಲವೆಂಬ ಕಾರಣದಿಂದ ಪ್ರಕರಣ ಸುಖಾಂತ್ಯವಾಗಿದೆ ಎಂದುಕೊಂಡು ಇಷ್ಟೆಲ್ಲಾ ಬರೆಯುತ್ತಿದ್ದೇನೆ.  


ಮಂಗಳವಾರ, ಅಕ್ಟೋಬರ್ 27, 2020

ಶೋಷಣೆಯೆಂದು ಅಳುವುದೇ ಪೋಷಣೆಯೆಂದು ಸಂಭ್ರಮಿಸುವುದೇ?

ಕೆಲವೊಂದು ಕೆಲಸಗಳು ನಮ್ಮ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ನಮ್ಮ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದಲೇ ಹಿರಿಯರು ನಮಗೆ ಅನೇಕ ಕೆಲಸಗಳನ್ನು ವಹಿಸಿರುತ್ತಾರೆ. ಆ ಕೆಲಸಗಳನ್ನು ಮಾಡಿ ಮುಗಿಸಿದಾಗ ಯಾವುದೋ ಒಂದು ಅವ್ಯಕ್ತವಾದಂತಹ ಆನಂದ ನಮಗಿರುತ್ತದೆ. ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ ನಂತರ ಹಿರಿಯರು ನಮಗೆ ಇನ್ನಷ್ಟು ಜವಾಬ್ದಾರಿಯುತ ಕೆಲಸಗಳನ್ನು ನೀಡಿ ನಮ್ಮನ್ನು ಪ್ರೋತ್ಸಾಹಿಸತೊಡಗುತ್ತಾರೆ. ಹೀಗೆ ಯಾವುದಾದರೊಂದು ಕೆಲಸದಲ್ಲಿ ನಿಪುಣತೆ ಕ್ರಮಶಃ ಪ್ರಾಪ್ತವಾಗುತ್ತದೆ. ನಾವು ಮಾಡಿದ ಕೆಲಸದಿಂದ ಮಾಡಿಸಿಕೊಂಡವರಿಗೆ ಲಾಭವಾದರೆ ಪಾರಿತೋಷಕವಾಗಿಯೋ, ಪ್ರೋತ್ಸಾಹಕ್ಕಾಗಿಯೋ ಕಿಂಚಿತ್ತನ್ನು ನಮಗೂ ನೀಡುವುದು ಸಜ್ಜನರ ಲಕ್ಷಣ. ದ್ರವ್ಯರೂಪದಲ್ಲಿ ನೀಡದಿದ್ದರೂ ನಾಲ್ಕು ಪ್ರೋತ್ಸಾಹದ ಮಾತುಗಳನ್ನಾಡಿ ಬೆನ್ನು ತಟ್ಟುವುದು, ಮಾಡಿದ ತಪ್ಪುಗಳನ್ನು ತಿದ್ದುವುದು ಮುಂತಾದುವುಗಳನ್ನು ಮಾಡಿಯೇ ಮಾಡುತ್ತಾರೆ.

 

ಜುಲೈ ತಿಂಗಳಲ್ಲಿ ಊರಿಗೆ ಹೋಗಿದ್ದಾಗ ಪ್ರತಿಷ್ಠಿತ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರ ಕರೆ ಬಂತು. ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಶಿಕ್ಷಕರ ಬೋಧನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸಂಸ್ಕೃತಸಾಹಿತ್ಯ ಎಂಬ ವಿಷಯದ ಬಗ್ಗೆ ಮುಂದಿನ ಸೋಮವಾರದಿಂದ ಮೂರು ಗಂಟೆಗಳ ಕಾಲ ಬೋಧಿಸಬೇಕು. ಎಂದರು. ನಾನೂ ಒಪ್ಪಿಕೊಂಡಾಯಿತು. ಯಾವ ವಿಷಯವನ್ನು ಬೋಧಿಸಬೇಕು, ಹೇಗೆ ಬೋಧಿಸಬೇಕು, ಬೋಧಿಸುವ ಮಾಧ್ಯಮ ಯಾವುದು (online platform), ಎಷ್ಟು ಗಂಟೆಯಿಂದ ಬೋಧಿಸಬೇಕು ಮೊದಲಾದ ವಿಚಾರಗಳಲ್ಲಿ ಮಾಹಿತಿ ಇರಲಿಲ್ಲ. ಆಮೇಲೆ ಹೇಳುತ್ತೇನೆ ಎಂದು ಹೇಳಿದ್ದರು. ಆದರೆ ಭಾನುವಾರದವರೆಗೂ ಅವರ ಸುದ್ದಿ ಇಲ್ಲ. ಯಾರೋ ದೊಡ್ಡ ವಿದ್ವಾಂಸರು ಬರುತ್ತೇನೆ ಎಂದು ಹೇಳಿ ಕೈ ಕೊಟ್ಟ ಮೇಲೆ ನನ್ನನ್ನು ಕೇಳಿದ್ದಿರಬಹುದು, ಈಗ ಅವರು ಪುನಃ ಒಪ್ಪಿಕೊಂಡಿರಬೇಕು ಎಂದು ನಾನೂ ಸುಮ್ಮನಾಗಿದ್ದೆ. ಫೋನ್ ಮಾಡಿ ನಿಮ್ಮ ಬೋಧನೆ ರದ್ದಾಗಿದೆ ಎಂಬ ವಾಕ್ಯವನ್ನು ಹೇಳುವ ಮುಜುಗರ ಅವರಿಗೂ ಕೇಳುವ ಮುಜುಗರ ನನಗೂ ಆಗಬಾರದು ಎಂಬುವುದು ನನ್ನ ಉದ್ದೇಶವಾಗಿತ್ತು.

 

ಆದರೆ ನಡೆದದ್ದೇ ಬೇರೆ. ಸೋಮವಾರ ಅಮ್ಮನಿಗೆ ಔಷಧಿ ತರಬೇಕು ಎಂದು ಹತ್ತಿರದ ಆಸ್ಪತ್ರೆಗೆ ಹೋಗಿದ್ದೆ. ವೈದ್ಯರ ಬಳಿಯಿದ್ದಾಗ ವಿಶ್ವವಿದ್ಯಾಲಯದ ಮತ್ತೊಬ್ಬ ಕಿರಿಯ ಅಧಿಕಾರಿಯ ಕರೆ ಬಂತು. ನಿಮ್ಮ ಇಂದಿನ ಬೋಧನೆಯಲ್ಲಿ ಪಿಪಿಟಿ ಉಪಯೋಗಿಸುತ್ತೀರಾ ಎಂದು ಅವರು ಕೇಳಿದಾಗ ಅವಾಕ್ಕಾದೆ. ಯಾವ ವಿಷಯ, ಎಂತಹ ಬೋಧನೆ, ಬೋಧನಾ ಮಾಧ್ಯಮ ಯಾವುದು ಎಂಬುದರ ಬಗ್ಗೆ ನನಗೆ ಅರಿವೇ ಇಲ್ಲ. ಹೇಳಿದ ಅಧಿಕಾರಿಗಳು ಏನನ್ನೂ ತಿಳಿಸಿಲ್ಲ ಎಂದಾಗ ಅವರು ವಿಷಯಗಳ ಪಟ್ಟಿಯನ್ನು ವಾಟ್ಸ್ ಆಪ್ ನ ಮೂಲಕ ಕಳುಹಿಸಿ, ಹೇಗೆ ಬೋಧಿಸಬೇಕು ಎಂಬುವುದನ್ನು ಒಂದೇ ನಿಮಿಷದಲ್ಲಿ ವಿವರಿಸಿದರು. ಆವಾಗಲೇ ಗಂಟೆ 11.00 ದಾಟಿತ್ತು. 12.30 ರಿಂದ 1.30 ರವರೆಗೆ ನನ್ನ ಅವಧಿಯಿತ್ತು. ಮನೆಗೆ ವೇಗವಾಗಿ ತೆರಳಿ ಕೂಡಲೇ ಸಿಕ್ಕಿದ ಪುಸ್ತಕಗಳನ್ನು ತಡಕಾಡಿ ಹೇಗಾದರೂ ವಿಷಯವನ್ನು ಸಿದ್ಧಪಡಿಸಿದೆ. ನಮ್ಮ ಊರಿನಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದುದರಿಂದ ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನು ಪಡೆಯಲೂ ವಿಫಲನಾಗಿದ್ದೆ.

 

ಮನೆಯಲ್ಲಿ ನೆಟ್ವರ್ಕ್ ಇರಲಿಲ್ಲ ಎಂಬ ಕಾರಣಕ್ಕಾಗಿ ಸಮೀಪದ ಬೆಟ್ಟಕ್ಕೆ ತೆರಳಿದೆ. ಮಳೆಯೂ ಹೊಯ್ಯುತ್ತಿದ್ದುದರಿಂದ ಕಾರಿನೊಳಗೆ ಕುಳಿತು ಬೋಧಿಸುವುದು ಮಾಡುವುದು ಅನಿವಾರ್ಯವಾಗಿತ್ತು. ನಮ್ಮ ಕಾರಿನ ಹಿಂಭಾಗದಲ್ಲಿ ಆಗಷ್ಟೇ ಕೊಯ್ದ ತಾಳೆ ಹಣ್ಣುಗಳು ಸುಮಾರು 3 ಕ್ವಿಂಟಾಲ್ನಷ್ಟಿದ್ದವು. ಅವುಗಳನ್ನು ಇಳಿಸಲು ಸಮಯವಿಲ್ಲದ್ದರಿಂದ ತಾಳೆ ಹಣ್ಣುಗಳ ವಾಸನೆಯನ್ನೂ, ತಾಳೆ ಹಣ್ಣುಗಳ ಬಳಿ ಹಾರುತ್ತಿದ್ದ ಕೀಟಗಳ ಕಚ್ಚುವಿಕೆಯನ್ನೂ ತಡೆದುಕೊಂಡು ಹೇಗೋ ಒಂದು ಗಂಟೆಯ ಬೋಧನೆಯನ್ನು ಮುಗಿಸಿದೆ. ನಂತರದ ಎರಡು ದಿನಗಳಲ್ಲಿ ಪಿಪಿಟಿ ರಚಿಸಿ ಸ್ವಲ್ಪ ಚೆನ್ನಾಗಿಯೇ ಸಿದ್ಧತೆ ಮಾಡಿಕೊಂಡು ಬೋಧಿಸಿದೆ.

 

ಮೂರು ದಿನಗಳ ಬೋಧನೆಯ ನಂತರ ವಿಶ್ವವಿದ್ಯಾಲಯಕ್ಕೆ ನನ್ನ ವಿಚಾರವೇ ಮರೆತು ಹೋಗಿತ್ತು. ಹೀಗೆಯೇ ನನ್ನ ಆತ್ಮೀಯ ಮಿತ್ರರ ಬಳಿ ವಿಶ್ವವಿದ್ಯಾಲಯದ ಕತೆಯನ್ನು ಹಂಚಿಕೊಳ್ಳುತ್ತಿದ್ದೆ. ಅವರೆಲ್ಲರದೂ ಒಂದೇ ಸಲಹೆಯಾಗಿತ್ತು. ಅವಶ್ಯವಾಗಿ ವಿಶ್ವವಿದ್ಯಾಲಯಕ್ಕೆ ಈ ವಿಷಯವನ್ನು ನೀನು ಮುಟ್ಟಿಸಬೇಕು. ಹೀಗೆ ಬೋಧನೆಯನ್ನು ಮಾಡಿಸಿ ಮರೆಯುವುದು ಯಾವುದೇ ಸಂಸ್ಥೆಗೆ ಶೋಭೆ ತರುವಂತಹ ವಿಚಾರವಲ್ಲ. ಅವರ ಕಣ್ತಪ್ಪಿನಿಂದಾದ ವಿಚಾರವಾದರೆ ಅವರು ಸರಿಪಡಿಸಿಕೊಳ್ಳುತ್ತಾರೆ ಎಂದು ಅನೇಕರು ಅನೇಕ ರೀತಿಯಲ್ಲಿ ಬೋಧಿಸುತ್ತಿದ್ದರು.

 

3 ಗಂಟೆಗಳ ಕಾಲ ಬೋಧನೆಯ ಅನುಭವ ನನಗಾಗಿದೆ. ಇದಕ್ಕಾಗಿ ಧನ್ಯವಾದದ ನುಡಿಗಳನ್ನೋ ಗೌರವ ಧನವನ್ನೋ ಅಪೇಕ್ಷಿಸಿ ಸಿಗದೇ ಇರುವುದಕ್ಕಾಗಿ ಬೇಸರ ಮಾಡಿಕೊಳ್ಳುವುದು ಉಚಿತವಲ್ಲ ಎಂದು ನನಗನ್ನಿಸುತ್ತಿತ್ತು. ಇಂತಹ ಕಾರ್ಯಕ್ರಮಗಳಿಂದ ನಾನೂ ಒಂದಷ್ಟು ಕಲಿತಂತಾಗುತ್ತದೆ ಎಂಬ ತೃಪ್ತಿಯೂ ಇತ್ತು. ಆದರೆ ವಿಶ್ವವಿದ್ಯಾಲಯ ನಡೆಸಿಕೊಂಡ ರೀತಿ ಉಚಿತವಲ್ಲ ಎಂದು ನನಗನ್ನಿಸುತ್ತಿತ್ತು. ಆದ್ದರಿಂದ ಅನೇಕ ಬಾರಿ ಈ ವಿಚಾರವನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಬೇಕು ಎಂದುಕೊಂಡಿದ್ದೆ. ಆದರೆ ಕಂಪ್ಯೂಟರ್ ತೆರೆದಾಗ ಈ ವಿಚಾರ ಮರೆಯುತ್ತಿತ್ತು. 3 ತಿಂಗಳ ನಂತರ ಯಾವುದೋ ವಿಚಾರಕ್ಕಾಗಿ ವಿಶ್ವವಿದ್ಯಾಲಯದ ವೆಬ್ ಸೈಟ್ ತೆರೆದಾಗ ಈ ವಿಚಾರ ನೆನಪಾಯಿತು. ವಿಶ್ವವಿದ್ಯಾಲಯದ ಇಮೇಲ್ ಐಡಿಗೆ ಸ್ವಲ್ಪ ಖಾರವಾಗಿಯೇ ಇಮೇಲೊಂದನ್ನು ರವಾನಿಸಿದೆ.

 

ನಾನು ಜುಲೈ ತಿಂಗಳ 13, 14, 15 ರಂದು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೋಧನೆ ನಡೆಸಿದ್ದೆ. ಇದಕ್ಕೆ ಕನಿಷ್ಠಪಕ್ಷ ಪ್ರಮಾಣಪತ್ರವನ್ನಾದರೂ ನೀಡಬಹುದು ಎಂದು ನಾನು ಭಾವಿಸಿದ್ದೆ. ಆದರೆ ಬಾಯಿಮಾತಿನಲ್ಲೂ ಧನ್ಯವಾದಗಳನ್ನು ತಿಳಿಸಲಿಲ್ಲ. ಬೋಧನೆಯ ಸಮಯದಲ್ಲಿ ನಾನು ಊರಿನಲ್ಲಿದ್ದೆ. ಅಲ್ಲಿ ಇಂಟರ್ ನೆಟ್ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಮಳೆ ಬರುತ್ತಿದ್ದಾಗಲೂ ಕಾರಿನಲ್ಲಿ ಕುಳಿತು ಬೋಧನೆ ನಡೆಸಿಕೊಟ್ಟಿದ್ದೆ. ನನ್ನ ಬೋಧನೆಯ ವಿಚಾರ ಬಾಲಿಶವೇ ಆಗಿರಬಹುದು ಆದರೂ ಕೂಡಾ ವಿಷಯವನ್ನು ಮಂಡಿಸಲು ಪ್ರಯತ್ನವನ್ನಂತೂ ಮಾಡಿದ್ದೇನೆ. ಅದಕ್ಕೋಸ್ಕರವಾಗಿ ಡಾಟಾ ಪ್ಯಾಕ್ ಕೂಡಾ ಹಾಕಿಸಿದ್ದೇನೆ. ಇಷ್ಟನ್ನೆಲ್ಲಾ ಮಾಡಿದರೂ ವಿಶ್ವವಿದ್ಯಾಲಯದ ಕಡೆಯಿಂದ ಪ್ರತಿಸ್ಪಂದವೇ ಇಲ್ಲ ಎಂಬ ಕಾರಣಕ್ಕಾಗಿ ಇಷ್ಟು ದಿನಗಳ ತನಕ ಕಾದು, ಈಗ ಮರ್ಯಾದೆ ಬಿಟ್ಟು ಹೇಳುತ್ತಾ ಇದ್ದೇನೆ. ಮುಂದೆ ಯಾರಿಗೂ ಹೀಗಾಗಬಾರದು, ವಿಶ್ವವಿದ್ಯಾಲಯದ ಗೌರವ ನಾಶವಾಗಬಾರದು ಎಂಬ ಇರಾದೆ ನನ್ನದು. ಆದ್ದರಿಂದ ಈ ನನ್ನ ನಿರ್ಲಜ್ಜ ವ್ಯವಹಾರ. ನಾನು ಮಾಡಿದ ಬೋಧನೆಯನ್ನು ವಿಶ್ವವಿದ್ಯಾಯ ಯೂಟ್ಯೂಬ್ ಚಾನಲ್ನಲ್ಲಿಯೂ ಅಪ್ಲೋಡ್ ಮಾಡಿದೆ ಅದರ ಲಿಂಕ್ ಈ ಕೆಳಗಿದೆ (ಇಲ್ಲಿ ಲಿಂಕ್ ಸೇರಿಸಿಲ್ಲ. ವಿಶ್ವವಿದ್ಯಾಲಯಕ್ಕೆ ಕಳುಹಿಸಿದ ಪತ್ರದಲ್ಲಿ ಸೇರಿಸಿದ್ದೆ.)

 

ಪತ್ರವನ್ನು ಕಳುಹಿಸಿದ ಒಂದು ವಾರದ ನಂತರ ವಿಶ್ವವಿದ್ಯಾಲಯ ಅಭಿನಂದನಾ ಪತ್ರವೊಂದನ್ನು ಮೇಲ್ ಮಾಡಿತು. ಪತ್ರವನ್ನು ನೋಡಿದ ನನಗೆ ಕಟಕಟೆ ದೇವರಿಗೆ ಮರದ ಜಾಗಟೆ ಎಂಬ ಗಾದೆ ನೆನಪಾಯಿತು.


ಬುಧವಾರ, ಜುಲೈ 8, 2020

ಮಿತಾದರ್ಶ, ಹಿತಾದರ್ಶ, ಸಕಾಲಾದರ್ಶ


ಹಾಸ್ಟೆಲ್ನ ಜೀವನವನ್ನು ಅನುಭವಿಸದಿದ್ದವರು ಜೀವನದಲ್ಲಿ ಮಹತ್ತ್ವವಾದ ಅಂಶವೊಂದನ್ನು ಕಳೆದುಕೊಂಡಂತೆಯೇ. ಹಾಸ್ಟೆಲ್ ನಲ್ಲಿ ಸಿಗುವ ಅನೇಕ ಅನುಭವಗಳಿಗೆ ಬದಲಿ(alternative) ಅನುಭವಗಳಿಲ್ಲ. ವಿವಿಧ ಊರುಗಳಿಂದ ವಿವಿಧ ಮನಃಸ್ಥಿತಿಯ ಬಗೆಬಗೆಯ ವಿದ್ಯಾರ್ಥಿಗಳು ಸೇರುವುದರಿಂದ ಅನೇಕರಿಗೆ ಅನೇಕ ವಿಷಯಗಳ ಪರಿಚಯವಾಗುತ್ತದೆ. ತಮ್ಮ ಅಧ್ಯಯನಕ್ಕಾಗಿ ಹಾಸ್ಟೆಲ್ ಸೇರಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾಸ ಕೊನೆಯಾದ ಹಲವು ವರ್ಷಗಳ ನಂತರವೂ ಅಧ್ಯಯನವೊಂದನ್ನು ಬಿಟ್ಟು ಬೇರೆಲ್ಲಾ ಅಂಶಗಳು ನೆನಪಿರುತ್ತವೆ ಎಂಬುವುದಂತೂ ಸತ್ಯ. ಅನೇಕ ಹಾಸ್ಟೆಲ್ ಗಳು ರ್ಯಾಗಿಂಗ್ ಮುಂತಾದ ಕೆಟ್ಟ ಕಾರಣಗಳಿಂದಾಗಿ ಯುವಪೀಳಿಗೆಯ ಹಾದಿ ತಪ್ಪಿಸುತ್ತಿದ್ದರೂ ಅನೇಕ ಹಾಸ್ಟೆಲ್ ಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಮಾರ್ಗದರ್ಶನವನ್ನು ನೀಡಿ ಕಿರಿಯರ ಜೀವನವನ್ನು ರೂಪಿಸುತ್ತಿರುವುದನ್ನೂ ಕಾಣಬಹುದು.

ನಾನು ಶೃಂಗೇರಿಯಲ್ಲಿ ಹಾಸ್ಟೆಲ್ ಸೇರಿದಾಗ ಆ ಹಾಸ್ಟೆಲ್ ಆಗಷ್ಟೇ ನಿರ್ಮಾಣವಾಗಿತ್ತು. ಹೊಸ ಹಾಸ್ಟೆಲ್ ನಲ್ಲಿ ವಾಸ ಮಾಡಿದ ಎರಡನೇ ಬ್ಯಾಚ್ ನಮ್ಮದು. ಹೀಗಾಗಿ ಹಾಸ್ಟೆಲ್ ದೃಷ್ಟಿಯಿಂದ ನೋಡಿದರೆ ಹಿರಿಯರು ಕಿರಿಯರು ಎಂಬ ಭೇದಭಾವವಿರಲಿಲ್ಲ. ಈ ಹಾಸ್ಟೆಲ್ ನಲ್ಲಿ ಎಲ್ಲರೂ ಹೊಸಬರೇ. ಅನೇಕರಿಗೆ ಬೇರೆ ಹಾಸ್ಟೆಲ್ ಗಳಲ್ಲಿ ವಾಸವಾಗಿದ್ದ ಅನುಭವವನ್ನು ಗಣನೆಗೆ ತೆಗೆದುಕೊಂಡರಷ್ಟೇ ಹಿರಿಯರು ಕಿರಿಯರು ಎಂಬ ಎರಡು ವರ್ಗಗಳನ್ನು ಹೇಳಬಹುದಾಗಿತ್ತು.


ವಿದ್ಯಾರ್ಥಿಜೀವನದಲ್ಲಿ ಚಟಗಳು ಅಂಟುವುದು ಸಾಮಾನ್ಯ. ಅನೇಕರು ವಿದ್ಯಾರ್ಥಿಜೀವನದಲ್ಲಂಟಿದ ಚಟಗಳಿಂದ ತಮ್ಮ ಜೀವನವನ್ನೇ ಬಲಿಯಾಗಿಸಿದ ಘಟನೆಗಳೂ ಇವೆ. ಮತ್ತೂ ಕೆಲವರಿಗೆ ಅಂಟಿದ ಚಟವನ್ನು ಬಿಡಲಾಗದಿದ್ದರೂ ನಾನು ಮಾಡುತ್ತಿರುವ ಚಟ ಒಳ್ಳೆಯದಲ್ಲ ಎಂಬ ಅರಿವೂ ಇರುತ್ತದೆ. ಅಲ್ಲದೇ, ನನ್ನಿಂದಾಗಿ ಇತರರು ಚಟವನ್ನು ಕಲಿಯಬಾರದು ಎಂಬ ಕಳಕಳಿಯೂ ಇರುತ್ತದೆ. ಇಂತಹವರು ತುಂಬಾ ವಿರಳ. ನನ್ನ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಹಿರಿಯ ವಿದ್ಯಾರ್ಥಿಯೊಬ್ಬನಿಗೆ (ಮೊದಲೇ ಹೇಳಿದಂತೆ ಬೇರೆ ಕಡೆ ವಿದ್ಯಾಭ್ಯಾಸವನ್ನು ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ ನಮ್ಮ ವಿದ್ಯಾಪೀಠವನ್ನು ಸೇರಿದವನು) ಗುಟಕಾ ತಿನ್ನುವ ಚಟವಿತ್ತು. ಹಾಗೆಂದು ಹೊಸದಾಗಿ ಯಾರಾದರೂ ಚಟವನ್ನು ಆರಂಭಿಸಿದರೆ ಮನಮುಟ್ಟುವಂತೆ ಅವರಿಗೆ ಬುದ್ಧಿಹೇಳಿ ಅವರನ್ನು ಚಟಮುಕ್ತರನ್ನಾಗಿಸುತ್ತಿದ್ದ.

ಆತ ಸುಮಾರು 20ರ ಸಂಖ್ಯೆಯಲ್ಲಿದ್ದ  ವಿದ್ಯಾರ್ಥಿಗಳಿಗೆ(ಹಾಸ್ಟೆಲ್ ನ ಒಂದು ಭಾಗದಲ್ಲಿ ವಾಸಿಸುತ್ತಿದ್ದ) ನಾಯಕನೂ ಆಗಿದ್ದ. ಹಾಗೆಂದು ಆತನೂ ಘೋಷಿಸಿಕೊಂಡಿರಲಿಲ್ಲ, ಹಾಸ್ಟೆಲ್ ವಾರ್ಡನ್ ಕೂಡಾ ಘೋಷಿಸಿರಲಿಲ್ಲ. ಆದರೂ ವಿದ್ಯಾರ್ಥಿಗಳಿಗೆಲ್ಲರಿಗೂ ಸೂಕ್ತವಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದ್ದ. ಈ 20 ಜನರಲ್ಲೇ  7-8 ಜನರ ಆಪ್ತವಲಯವಿತ್ತು (ಅದರಲ್ಲಿ ನಾನೂ ಒಬ್ಬ). ವಿಶೇಷವಾಗಿ ತಿಂಡಿಯನ್ನೇನಾದರೂ ಯಾರಾದರೂ ತಿಂದರೆ ಹಂಚಿಕೊಂಡು ತಿನ್ನುವುದು ನಮ್ಮ ಅಭ್ಯಾಸವಾಗಿತ್ತು. ಹೀಗೆ ತಿನ್ನುವ ಸಮಯದಲ್ಲಿ ಯಾರೂ ಬರಬಾರದು. (ಬೇರೆಯವರಿಗೆ ಕೊಡಬಾರದೆಂದಲ್ಲ. ಇರುವ ಇಷ್ಟರಲ್ಲೇ ಬೇರೆಯವರಿಗೆ ಕೊಟ್ಟರೆ ನಮಗೇನೂ ಉಳಿಯದೇ ಕಷ್ಟವಾಗುತ್ತಿತ್ತು.) ತಿನ್ನುವ ವೇಳೆಯಲ್ಲಿ ಯಾರಾದರೂ ಬಂದರೆ ಉಪಾಯವಾಗಿ ಅವರನ್ನು ಹೊರಗಟ್ಟುತ್ತಿದ್ದೆವು.


ಹೀಗೆ ಒಂದು ಬಾರಿ ಗೆಳೆಯನೊಬ್ಬ ಹಲಸಿನ ಹಣ್ಣಿನ ಚಿಪ್ಸ್ (ಸೋಂಟೆ) ತಂದಿದ್ದ. ತಿನ್ನುತ್ತಿರುವಾಗ ವಿದ್ಯಾಪೀಠದ ನಾಯಕನ ಆಗಮನವಾಯಿತು. ವಿದ್ಯಾಪೀಠದ ನಾಯಕ ನಮ್ಮೆಲ್ಲರಿಗೂ ಅಣ್ಣನಂತೆ ಆತ್ಮೀಯನಾಗಿ ಅಚ್ಚುಮೆಚ್ಚಿನವನಾಗಿದ್ದರಿಂದ ಒಕ್ಕೊರಲಿನಿಂದ ಆತನನ್ನು ಸ್ವಾಗತಿಸಿದೆವು. ಬಾಗಿಲಿಗೆ ಚಿಲಕ ಜಡಿದು ಹೊಟ್ಟೆಗೆ ತಿಂಡಿ ಜಡಿಯಲಾರಂಭಿಸಿದೆವು. ಆ ದಿನದ ಉಪಾಹಾರ ಅಂತಿಮ ಹಂತಕ್ಕೆ ಬಂದಿತ್ತು. ಬಂದ ಅತಿಥಿ ವಿದ್ಯಾಪೀಠದ ನಾಯಕನಾಗಿದ್ದರಿಂದ ಯಾವುದೋ ಕೆಲಸಕ್ಕೆ ಆತನನ್ನು ಹುಡುಕಿಕೊಂಡು ಬಂದಿದ್ದ ನಾಲ್ಕೈದು ವಿದ್ಯಾರ್ಥಿಗಳು ಬಾಗಿಲು ಬಡಿಯಲಾರಂಭಿಸಿದರು. ಬಾಗಿಲು ತೆಗೆಯದೇ ನಿರ್ವಾಹವಿಲ್ಲ. ಬಾಗಿಲು ತೆಗೆದ ತಕ್ಷಣ ತಿಂಡಿಯನ್ನು ಕಂಡರೆ ವಿದ್ಯಾರ್ಥಿಗಳು ಬಿಡುವವರಲ್ಲ. ತಿನ್ನಬೇಡಿ ಎಂದು ಹೇಳಲೂ ಸಾಧ್ಯವಿಲ್ಲ. (ಆತಿಥ್ಯಕ್ಕೆ ಹೆಸರಾದ ಉತ್ತರಕನ್ನಡದ ಹವ್ಯಕರು ಯಾರಿಗೂ ಗೊತ್ತಾಗದಂತೆ ತಿಂದು ಮುಗಿಸಿಯಾರು, ಆದರೆ ತಿನ್ನುವ ವೇಳೆಯಲ್ಲಿ ಯಾರಾದರೂ ಎದುರಿಗೆ ಬಂದರೆ ಅವರಿಗೆ ನೀಡದೇ ತಿನ್ನುವುದಂತೂ ಸಾಧ್ಯವಿಲ್ಲ. ನನ್ನೊಬ್ಬನನ್ನು ಬಿಟ್ಟರೆ ಗೆಳೆಯರೆಲ್ಲಾ ಉತ್ತರಕನ್ನಡದ ಹವ್ಯಕರೇ). ಉಪಾಯವಾಗಿ ಅವರನ್ನು ಹೊರಗಟ್ಟಲು ನಮ್ಮ ನಾಯಕ ಚಿಲಕ ತೆಗೆಯುವುದಕ್ಕೂ ಮುಂಚೆ ವಿದ್ಯಾಪೀಠದ ನಾಯಕನನ್ನುದ್ದೇಶಿಸಿ ಎರಡು ಮಾತುಗಳನ್ನಾಡಿದ.

ಈಗ ಬಂದವರು ತಿಂಡಿ ತಿಂದರೆ ನಾಳೆಗೆ ತಿಂಡಿ ಉಳಿಯುವುದಿಲ್ಲ. ಹೀಗಾದುದಕ್ಕೆ ನೀನೇ ಕಾರಣನಾಗುತ್ತೀ. ಎನ್ನುತ್ತಲೇ ಚಿಲಕ ತೆಗೆದು ಬನ್ನಿ ತಗೋಳಿ, ತಿನ್ನಿ ಎನ್ನುತ್ತಾ ಬಂದವರನ್ನು ಸ್ವಾಗತಿಸಿದ. ಚಾಣಾಕ್ಷಮತಿಯಾದ ವಿದ್ಯಾಪೀಠದ ನಾಯಕನಿಗೆ ನಮ್ಮ ನಾಯಕನ ಮಾತುಗಳ ಆಂತರ್ಯ ಅರ್ಥವಾಯಿತು.  ಕೂಡಲೇ ತಾನೇ ನಾಲ್ಕು ಚಿಪ್ಸ್(ಸೋಂಟೆ)ಗಳನ್ನು ಕೈಯಲ್ಲಿ ಹಿಡಿದುಕೊಂಡು ಅವರಿಗೂ ಕೊಟ್ಟು ಬಂದವರನ್ನೆಲ್ಲರನ್ನೂ ಹೊರಗೊಯ್ದ.  ಹೀಗೆ ಯಾರ ಮನಸ್ಸಿಗೂ ನೋವುಂಟುಮಾಡದೇ ಯಾರೂ ತಿಂಡಿಯನ್ನು ತಿನ್ನದಂತೆ ಪರಿಸ್ಥಿತಿಯ ನಿರ್ವಾಹವಾಯಿತು. (ವಿದ್ಯಾಪೀಠದ ನಾಯಕನಿಗೂ ಬೇಜಾರಾಗಲು ಸಾಧ್ಯವಿಲ್ಲ. ಆತನೂ ಇಂತಹ ಅನೇಕ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದಲೇ ವಿದ್ಯಾಪೀಠದ ನಾಯಕನಾದುದಲ್ಲವೇ.)

ಸಂಸ್ಕೃತ ವಿದ್ಯಾರ್ಥಿಗಳಾದ ನಮಗೂ ಆಧುನಿಕತೆಯ ಸ್ಪರ್ಶವಾಗಲಾರಂಭಿಸಿತ್ತು. ನಮ್ಮ 7-8 ವಿದ್ಯಾರ್ಥಿಗಳಲ್ಲಿ ಯಾರದಾದರೂ ಹುಟ್ಟುಹಬ್ಬವಿದ್ದರೆ ಕೇಕ್ ತಂದು ಕತ್ತರಿಸಿ ಆಚರಿಸುವ ಪರಂಪರೆಯಿತ್ತು. 100 ರೂಪಾಯಿಗೆ ಕೇಕ್ ಸಿಗುತ್ತಿದ್ದ ಆ ಕಾಲದಲ್ಲಿ ಪ್ರತಿಯೊಬ್ಬರೂ 10-15 ರೂಪಾಯಿಗಳನ್ನು ಹಾಕಿದ್ದರೆ ಕೇಕ್ ತರಬಹುದಾಗಿತ್ತು. ಹೀಗೆ ಕೇಕ್ ತಂದು ಕತ್ತರಿಸಿ ತಿನ್ನುತ್ತಿದ್ದೆವು. ನಮ್ಮಲ್ಲೊಬ್ಬನ ಬಳಿ ಚೈನೀಸ್ ಮೊಬೈಲ್ ಸೆಟ್ ಇತ್ತು. ಆ ಮೊಬೈಲ್ ಸೆಟ್ ನಲ್ಲಿ ನಗುತಾನಗುತಾ ಬಾಳು ನೀನು ನೂರು ವರುಷ ಎಂಬ ಹಾಡನ್ನು ಪ್ಲೇ ಮಾಡುತ್ತಾ ಕೇಕ್ ತಿನ್ನುತ್ತಾ ಹುಟ್ಟುಬ್ಬವನ್ನಾಚರಿಸುತ್ತಿದ್ದೆವು.

ನಾನು ಹಾಸ್ಟೆಲ್ ಸೇರಿದ ಮರು ವರ್ಷವೇ ನಮ್ಮ ಸ್ನೇಹಿತರ ಬಳಗಕ್ಕೆ ಮತ್ತೊಬ್ಬನ ಪ್ರವೇಶವಾಯಿತು. ವರ್ಷಾರಂಭದಲ್ಲೇ ಆತನ ಹುಟ್ಟುಹಬ್ಬ. ಆತನೋ ಧೃಢಮತಿ. ಏನನ್ನಾದರೂ ನಿರ್ಧರಿಸಿದರೆ ತನ್ನ ನಿರ್ಧಾರವನ್ನು ಬದಲಾಯಿಸುವುದೇ ಇಲ್ಲ. ನಾನು ಕೇಕ್ ತಿನ್ನುವುದಿಲ್ಲ ಹಾಗೂ ಕತ್ತರಿಸುವುದಿಲ್ಲ ಎಂಬ ನಿರ್ಣಯವನ್ನು ಅವನು ಮಾಡಿದ್ದನಂತೆ. ಈ ವಿಚಾರ ಗೊತ್ತಿಲ್ಲದ ನಾವು ಕೇಕ್ ತಂದುಬಿಟ್ಟಿದ್ದೆವು. ಆತನನ್ನು ಕರೆದು ಕತ್ತರಿಸಲು ಹೇಳಿದಾಗ ತಮ್ಮ ನಿರ್ಣಯವನ್ನು ತಿಳಿಸಿ ನಿಮಗೆ ಬೇಜಾರಾದರೂ ಕೂಡಾ ನನ್ನ ನಿರ್ಧಾರದಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಕೇಕನ್ನು ತಂದು ಸಂತೋಷದಿಂದ ಹುಟ್ಟುಹಬ್ಬವನ್ನು ಆಚರಿಸುತ್ತೇವೆಂದು ಕಾತರರಾಗಿದ್ದ ನಮಗೆ ಬರಸಿಡಿಲು ಬಡಿದಂತಾಯಿತು. ವಿವಿಧರೀತಿಯಲ್ಲಿ ಕೇಕ್ ತಿನ್ನುವಂತೆ ಹೇಳಿದ ಪ್ರಯತ್ನಗಳೆಲ್ಲಾ ವಿಫಲವಾದುವು. ಕೊನೆಯ ಪ್ರಯತ್ನವಾಗಿ ನೀನು ತಿನ್ನದಿದ್ದರೆ ನಾವೂ ತಿನ್ನುವುದಿಲ್ಲ ಎಂದು ಹೇಳಿದ ನಮ್ಮ ನಾಯಕನ ನುಡಿಗೂ ಆತ ಜಗ್ಗಲಿಲ್ಲ. ತಂದಿದ್ದ ಕೇಕ್, ಆತನ ನಿರ್ಣಯ ಹಾಗೂ ನಮ್ಮ ಬಾಡಿದ ಮುಖಗಳು ಹಾಗೆಯೇ ಉಳಿದವು.


ಮರುದಿನ ನಾಯಕ ತನ್ನ ರೂಮಿಗೆ ನಮ್ಮನ್ನೆಲ್ಲ ಕರೆದ. ಕೇಕ್ ಕತ್ತರಿಸಲು ನಿರಾಕರಿಸಿದ ಸ್ನೇಹಿತ ಇರಲಿಲ್ಲ. ಆತ ಹಾಗೆ ಹೇಳಿದ ಎಂದು ಬೇಜಾರಾಗಿ ಕೇಕ್ ಬಿಸಾಡುವುದರಲ್ಲಿ ಅರ್ಥವಿಲ್ಲ. ಯಾರದೋ ಮೇಲಿರುವ ಬೇಜಾರಿಗೆ ತಿನ್ನುವ ವಸ್ತುವನ್ನು ಹಾಳು ಮಾಡುವ ಅಧಿಕಾರ ನಮಗಿಲ್ಲ. ನಿನ್ನೆಯೇನೋ ನೀನು ತಿನ್ನದಿದ್ದರೆ ನಾವೂ ತಿನ್ನುವುದಿಲ್ಲ ಎಂದು ಹೇಳಿಬಿಟ್ಟೆವು. ಆದರೆ ಈಗ ಆತನ ಹುಟ್ಟುಹಬ್ಬದ ಕೇಕ್ ಅಂತಲ್ಲ, ತಿನ್ನುವ ವಸ್ತುವೊಂದಿದೆ ಅಂದುಕೊಂಡು ತಿಂದು ಮುಗಿಸೋಣ ಎನ್ನುತ್ತಾ ಕೇಕ್ ಕೊಯ್ದು ಎಲ್ಲರಿಗೂ ಹಂಚಿದ. ಈ ಘಟನೆಯಿಂದಾಗಿ ನಮ್ಮ ಸ್ನೇಹಿತರ ವಲಯದಲ್ಲಿ ಕೇಕ್ ತಂದು ಹುಟ್ಟುಹಬ್ಬವನ್ನಾಚರಿಸುವ ಸಂಪ್ರದಾಯ ನಿಂತೇ ಹೋಯಿತು.

ಹೀಗೆ ಉನ್ನತ ಆದರ್ಶಗಳನ್ನು ತಿಳಿದಿದ್ದರೂ ವಾಸ್ತವ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಅವುಗಳನ್ನು ಅನುಸರಿಬೇಕು ಎಂಬುದರ ಬಗ್ಗೆ ಕಲ್ಪನೆ ಅನೇಕರ ಇಂತಹ ವ್ಯವಹಾರಗಳಿಂದ ತಿಳಿದುಬರುತ್ತದೆ. ಈ ವಿಚಾರಕ್ಕೆ ಪೂರಕವಾಗಿ ತತ್ಕ್ಷಣದಲ್ಲಿ ನೆನಪಾದ ಘಟನೆಗಳನ್ನು ಉದಾಹರಿಸಿದೆ ಅಷ್ಟೇ.

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...