ಶುಕ್ರವಾರ, ಜೂನ್ 18, 2021

ಒಂದು ನಿದ್ದೆಯ ಕತೆ

 ದೇವರ ದಯೆಯಿಂದ ನಿದ್ದೆಯ ವಿಚಾರದಲ್ಲಿ ನಾನು ಅದೃಷ್ಟವಂತ. ಎಷ್ಟು ಹೊತ್ತು ಮಲಗಿದರೂ ಎಲ್ಲೇ ಮಲಗಿದರೂ ನಿದ್ದೆ ಬರುತ್ತದೆ. ಕೆಲವೊಂದು ಸಲ ನಿದ್ದೆಮಾಡಬಾರದಾದ ಸ್ಥಳದಲ್ಲೂ ನಿದ್ದೆ ಬರುವುದುಂಟು. ಈ ವಿಷಯದಲ್ಲಿ ಪಿ.ಎಚ್.ಡಿ ಯ ತರಗತಿಗಳಿಗೋಸ್ಕರ ಪ್ರಯಾಗದಲ್ಲಿದ್ದಾಗ ನಡೆದ ಘಟನೆಯೊಂದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ.

ಮಾರ್ಚ್ ತಿಂಗಳಿಗಾಗಲೇ ಚಳಿ ಕಳೆದು ಸೆಖೆ ಆರಂಭವಾಗಿತ್ತು. ನಮ್ಮ ತರಗತಿಗಳೂ ಮಾರ್ಚ್ ತಿಂಗಳಲ್ಲೇ ನಡೆಯುತ್ತಿದ್ದವು. ಹಿರಿಯ ವಿದ್ವಾಂಸರ ಭಾಷಣಗಳನ್ನು ಅಲ್ಲಿ ಆಯೋಜಿಸಲಾಗುತ್ತಿತ್ತು. ಕೆಲವು ಹಿರಿಯರ ಮಾತುಗಳು ಹೊರಗಡೆ ಶೃಂಗಾರ ಒಳಗಡೆ ಗೋಳಿಸೊಪ್ಪಿನಂತೆ ಇರುತ್ತವೆ. ಇಂತಹ ಸಂದರ್ಭದಲ್ಲಿ ಪ್ರಯಾಗದ ಹಿರಿಯ ವಿದ್ವಾಂಸರಾದ ಪ್ರೊ. ಹರದತ್ತ ಶರ್ಮಾ ಅವರ ವ್ಯಾಖ್ಯಾನವನ್ನು ನಮ್ಮ ವಿಶ್ವವಿದ್ಯಾಲಯದಲ್ಲಿ ಆಯೋಜಿಸಲಾಗಿತ್ತು. ಯಾವುದೋ ವಿಷಯದ ಬಗ್ಗೆ ಹಿಂದಿಯಲ್ಲಿ ಮಾಡುತ್ತಿದ್ದ ವ್ಯಾಖ್ಯಾನ ನನಗಂತೂ ಜೋಗುಳ ಹಾಡಿದಂತಾಗಿತ್ತು. ಅಲ್ಲದೇ ಕಂಬವೊಂದಕ್ಕೆ ಒರಗಿಕೊಂಡು ಕೂತಿದ್ದೆ. ಇದರಿಂದಾಗಿ ವ್ಯಾಖ್ಯಾನ ನಡೆಯುತ್ತಿದ್ದಾಗ ಚೆನ್ನಾಗಿ ನಿದ್ದೆ ಮಾಡಿದ್ದೆ.

ಬೋಧಿಸುತ್ತಿರುವವರೂ ಗಮನಿಸಿದರು. ಹತ್ತು ನಿಮಿಷಗಳ ನಂತರ ನನ್ನ ಪಕ್ಕದವನ ಹತ್ತಿರ ನನ್ನನ್ನು ಎಬ್ಬಿಸಲು ಹೇಳಿದರು. ನಾನು ಆವಾಗಿನಿಂದ ನೋಡ್ತಾ ಇದ್ದೆ. ನೀನೇ ಏಳುತ್ತೀ ಅಂತ ಅಂದುಕೊಂಡೆ. ಆದರೆ ನಿನಗೆ ಎಚ್ಚರವಾಗಲಿಲ್ಲ, ಆದ್ದರಿಂದ ಎಬ್ಬಿಸಲು ಹೇಳಿದೆ ಎಂದರು. ನಾನು ಎದ್ದುನಿಂತು ನನ್ನನ್ನು ಕ್ಷಮಿಸಿ ಎಂದು ಹೇಳಿದೆ. 

ನಮ್ಮ ತರಗತಿಯ ಮುಖ್ಯಸ್ಥರಾಗಿದ್ದ ಪ್ರೊ.ಲಲಿತ್ ಕುಮಾರ್ ತ್ರಿಪಾಠಿಯವರಿಗೆ ಅವಮಾನವಾದಂತಾಯಿತು. ತಾನು ಕರೆಸಿದ ವಿದ್ವಾಂಸರ ತರಗತಿಯಲ್ಲಿ ವಿದ್ಯಾರ್ಥಿಯೊಬ್ಬನು ನಿದ್ದೆ ಮಾಡುತ್ತಿದ್ದಾನೆಂದರೆ ಅವಮಾನವಲ್ಲವೇ ? ತಕ್ಷಣವೇ ನನ್ನನ್ನು ಎದುರಿಗೆ ಕರೆದು ಕೂರಿಸಿದರು. ತದನಂತರ ನನ್ನ ನಿದ್ದೆಗೂ ಸಮಜಾಯಿಷಿ ಕೊಟ್ಟರು. दक्षिण में लोगों के आदत ऐसा है । मैं जब दक्षिण में गया था तब देखा । दोपहर में खाने के बाद सब लोग सो जातें हैं । चार बजे तक सब बंद रहते है । इसके बाद फिर से सब काम चालू हो जाता है । ये लडका दक्षिण का है इसलिए सो रहा था ।

ಅವರೇನೂ ಕೋಪಿಸಿಕೊಳ್ಳಲಿಲ್ಲ. ಹಿರಿಯರಾದ ಅವರು ತರಗತಿಯಲ್ಲಿ ನಿದ್ದೆ ಮಾಡುವ ನನ್ನಂತಹ ಎಷ್ಟು ಜನರನ್ನು ನೋಡಿರಲಿಕ್ಕಿಲ್ಲ? ತಮ್ಮ ಬೋಧನೆ ಮುಗಿಸಿ ತೆರಳಿದರು. ತದನಂತರ ಪ್ರೊ.ಲಲಿತ್ ಕುಮಾರ್ ತ್ರಿಪಾಠಿ ಅವರು ಇಡಿಯ ತರಗತಿಯನ್ನು ತರಾಟೆಗೆ ತೆಗೆದುಕೊಂಡರು. ನೀವು ಪಾಠ ಕೇಳುವುದಿಲ್ಲ. ನಾವು ನಿಮಗೆ ಬೋಧಿಸಲಿಕ್ಕೆ ಯಾರ್ಯಾರನ್ನೋ ಕರೆಸುತ್ತೇವೆ. ಅವರೆದುರು ನೀವು ಮರ್ಯಾದೆ ತೆಗೆಯುತ್ತೀರಿ ಎಂದು ಎಲ್ಲರನ್ನೂ ಬೈದರು. ಕೊನೆಯಲ್ಲಿ ವಿಶೇಷವಾಗಿ ನನ್ನನ್ನುದ್ದೇಶಿಸಿ सूर्य, आप क्यों सोते हैं जिससे हमें ऐसे बहाना बनाना पडता है । ಏನನ್ನೂ ಉತ್ತರಿಸುವ ಸ್ಥಿತಿಯಲ್ಲಿ ನಾನಿರಲಿಲ್ಲವಾದ್ದರಿಂದ ಮೌನಿಯಾದೆ.


ಸೋಮವಾರ, ಜೂನ್ 7, 2021

ಭಾಷೆಗಳೂ ಶಬ್ದಗಳೂ ಅನುವಾದವೂ

ಭಾಷಾಪ್ರಪಂಚ ವಿಚಿತ್ರವಾದುದು. ಭಾಷೆಗಳ ನಡುವೆ ಕಾಣುವ ವೈಶಿಷ್ಟ್ಯಗಳನ್ನು ಪಟ್ಟಿ ಮಾಡುತ್ತಾ ಹೋದರೆ ಮುಗಿದಷ್ಟು ಅಂಶಗಳು ದೊರೆಯಬಹುದು. ವ್ಯಾಕರಣದ ನಿಯಮಗಳನ್ನು ಕಲಿತು ಮಾತನಾಡುವುದಕ್ಕಿಂತ ಮಾತನಾಡುತ್ತಿರುವವರ ನಡುವೆ ಕಲೆತು ಮಾತನಾಡಿದಾಗ ಭಾಷೆ ಹೆಚ್ಚು ಆಪ್ತವಾಗುತ್ತದೆ. ಸಾಮಾನ್ಯವಾಗಿ ಹೊಸ ಭಾಷೆಗಳನ್ನು ಕಲಿಯುವಾಗ ನಮಗೆ ಗೊತ್ತಿರುವ ಭಾಷೆಯಲ್ಲಿ ಯೋಚಿಸಿ ಆ ವಾಕ್ಯವನ್ನೇ ತರ್ಜುಮೆ ಮಾಡುತ್ತೇವೆ. ಯಾವಾಗ ಚಿಂತನೆಯಲ್ಲೂ ಭಾಷೆಯೊಂದು ಒದಗಿ ಬರುತ್ತದೆಯೋ ಆವಾಗ ಆ ಭಾಷೆ ಆಪ್ತವಾದಂತೆ ಎಂಬುವುದು ಅನೇಕರ ಅಭಿಪ್ರಾಯ.

ನನ್ನ ವಿಚಾರಕ್ಕೆ ಬರುವುದಾರೆ ಮನೆಯಲ್ಲಿ ಆಡುವ ಚಿತ್ಪಾವನೀ ಭಾಷೆ, ಶಾಲೆಯಲ್ಲಾಡಿದ ಕನ್ನಡ, ಕಾಲೇಜು ಹಾಗೂ ಉದ್ಯೋಗದ ಸ್ಥಳದಲ್ಲಾಡುತ್ತಿರುವ ಸಂಸ್ಕೃತ ಹೀಗೆ ಮೂರು ಭಾಷೆಗಳು ಆಪ್ತವಾದ ಭಾಷೆಗಳಾಗಿವೆ.  ಈ ಭಾಷೆಗಳಲ್ಲಾಡುವಾಗ ಅದೇ ಭಾಷೆಯಲ್ಲಿ ಯೋಚನೆಯನ್ನೂ ಮಾಡುತ್ತೇನೆ.  ಕೆಲವೊಂದು ಕಡೆಗಳಲ್ಲಿ ಮೂರೂ ಭಾಷೆಯ ವಾಕ್ಯರಚನಾಶೈಲಿ ಭಿನ್ನವಾಗಿದೆ. ಉದಾಹರಣೆಗೆ ನಾನು ನಿನ್ನೊಂದಿಗೆ ಬರುತ್ತೇನೆ ಎನ್ನುವಾಗ ನಿನ್ನ ಎಂದು ಷಷ್ಠೀ ವಿಭಕ್ತಿಯನ್ನು ಕನ್ನಡದಲ್ಲೂ, ತೂಸವ ಏಸ ಎನ್ನೂವಾಗ ತೂ ಎಂದು ಪ್ರಥಮಾ ವಿಭಕ್ತಿಯನ್ನು ಚಿತ್ಪಾವನೀ ಭಾಷೆಯಲ್ಲಿಯೂ, ಭವತಾ ಸಹ ಆಗಚ್ಛಾಮಿ ಎನ್ನುವಾಗ ಭವತಾ ಎಂದು ತೃತೀಯಾ ವಿಭಕ್ತಿಯನ್ನು ಸಂಸ್ಕೃತದಲ್ಲಿಯೂ ಬಳಸಲಾಗುತ್ತದೆ. ಸಂಸ್ಕೃತದಲ್ಲಿ ಇಂತಹ ಸಂದರ್ಭದಲ್ಲಿ ತೃತೀಯಾವಿಭಕ್ತಿಯನ್ನು ಬಳಸಬೇಕು ಎಂಬ ನಿಯಮವನ್ನು ನಾನು ಓದಿರುವೆನಾದರೂ ಮಾತನಾಡುವಾಗ ನಿಯಮವನ್ನು ನೆನಪಿಸಿಕೊಂಡು ಮಾತನಾಡುವುದಿಲ್ಲ. ಅದು ಸಹಜವಾಗಿಯೇ ನನ್ನ ಬಾಯಿಯಿಂದ ಬರುತ್ತದೆ. 

ಹೀಗಿದ್ದರೂ ಕೂಡಾ ಕೆಲವೊಮ್ಮೆ ಒಂದು ಭಾಷೆಯ ಪ್ರಭಾವ ಮತ್ತೊಂದು ಭಾಷೆಯ ಮೇಲೆ ಆಗುವುದಿದೆ. ಕನ್ನಡ ಮಾತನಾಡುವಾಗ ಹಲವಾರು ಬಾರಿ ಸಹಜವಾಗಿ ಸಂಸ್ಕೃತದ ಶಬ್ದಗಳು ಬರುತ್ತವೆ. ಒಂದು ಭಾಷೆಯ ಗುಂಗಿನಲ್ಲಿದ್ದಾಗ ಮತ್ತೊಂದು ಭಾಷೆಯಲ್ಲಿ ಮಾತನಾಡತೊಡಗಿದರೆ ಗುಂಗಿನಲ್ಲಿರುವ ಭಾಷೆಯ ಶಬ್ದಗಳೇ ಬರಲಾರಂಭಿಸುತ್ತವೆ. ಕೆಲವೊಂದು ಬಾರಿ ಶಬ್ದಶಃ ಅನುವಾದವೂ ಆಗಿಬಿಡುತ್ತದೆ.

ನನ್ನ ದೂರದ ಸಂಬಂಧಿಯೊಬ್ಬರು ಮದುವೆಗಾಗಿ ಬೆೆಂಗಳೂರಿನಿಂದ ಊರಿಗೆ ಹೊರಡುತ್ತಿದ್ದರು. ನಾನು ಕೂಡಾ ಅವರ ಮನೆಗೆ ತಯಾರಿಗೆಂದು ಹಿಂದಿನ ದಿನವೇ ಹೋಗಿದ್ದೆ. ಅವರ ಮನೆಯಲ್ಲಿ ಚಿತ್ಪಾವನೀಯನ್ನು ಮಾತನಾಡುತ್ತಾರೆ. ಅವರ ಪಕ್ಕದ ಮನೆಯಲ್ಲೂ ಚಿತ್ಪಾವನೀಯನ್ನಾಡುವ ಕುಟುಂಬವೊಂದಿದೆ. ಬೆಳಿಗ್ಗೆ ಬೇಗ ಕಾರಿನಲ್ಲಿ ಅವರು ಹೊರಟರು. ನಾನು ಅವರನ್ನು ಬೀಳ್ಕೊಟ್ಟು ಬರುವಾಗ ಪಕ್ಕದ ಮನೆಯವರು ಕಂಡರು. ಅವರಲ್ಲೂ ಚಿತ್ಪಾವನೀಯಲ್ಲಿ ಮಾತಾಡಿ ಮನೆಗೆ ವಾಪಾಸ್ಸಾದಾಗ ಮೇಲಿನ ಮನೆಯವರು ಕಂಡರು. ಇವರಲ್ಲೂ ಹೊರಟದ್ದನ್ನು ತಿಳಿಸೋಣ ಎಂದುಕೊಂಡೆ. ಚಿತ್ಪಾವನೀ ಗುಂಗಿನಲ್ಲಿದ್ದ ನಾನು ಕನ್ನಡದಲ್ಲಿ ಆರಂಭಿಸಿದೆ.

ಈಗಷ್ಟೇ ಹೋದ್ರು ಅಂತ ಹೇಳಿದೆ. ಈ ವಾಕ್ಯಕ್ಕೆ ಕನ್ನಡದಲ್ಲಿ ಅಮಂಗಲಕರವಾದ ಅರ್ಥವಿದೆ. ಇದನ್ನು ನಾನೂ ತಿಳಿಯದವನೇನಲ್ಲ. ಆದರೆ ಚಿತ್ಪಾವನೀ ಭಾಷೆಯ ಎಷ್ಶಾ ಗೆಲ್ಲಿ ಎಂಬುವುದರೆ ಶಬ್ದಾನುವಾದ ಈಗಷ್ಟೇ ಹೋದ್ರು ಎನ್ನುವುದು. ಹಿಂದಿನ ದಿನದಿಂದ ಇದ್ದ ಚಿತ್ಪಾವನೀಯ ಗುಂಗು ನನ್ನ ಬಾಯಿಯಿಂದ ಈ ಮಾತನ್ನಾಡಿಸಿತ್ತು. ಕೇಳಿಸಿಕೊಂಡವರು ಹೊರಟ್ರಾ..... ಒಳ್ಳೆದಾಯ್ತು ಎಂದು ಹೇಳಿದಾಗ ನನ್ನ ವಾಕ್ಯದ ಅಮಂಗಳಕರವಾದ ಅರ್ಥ ಹೊಳೆಯಿತು. 

ಹೀಗೆ ಕೆಲವೊಂದು ಬಾರಿ ನಮ್ಮ ಗುಂಗಿನಲ್ಲಿರುವ ಭಾಷೆಯಿಂದ ಹೊರಬರಲಾಗುವುದಿಲ್ಲ. ಆದರೂ ಕೂಡಾ ಇಂತಹ ಸಂದರ್ಭಗಳಲ್ಲಿ ಅನರ್ಥಗಳೇನೂ ಘಟಿಸುವುದಿಲ್ಲ. ಭಾಷಾವಿಷಯದಲ್ಲಿ ಯೋಚಿಸುವವರು ಈ ಹಾದಿಯಲ್ಲೂ ಯೋಚನಾಲಹರಿಯನ್ನೂ ವಿಸ್ತರಿಸಬಹುದು.

ಬುಧವಾರ, ಜೂನ್ 2, 2021

मम महातोषः

सर्वेषामपि जीवने सन्तोषः भवत्येव । सः आजीवनं दुःखी स्यात् परन्तु निश्चयेन कदाचित् महान्तम् आनन्दम् अनुभूतवान् एव भवति । सर्वत्र रन्ध्रान्वेषिणः कदाचित् तोषस्य अनुभवं न कृतवन्तः स्युः । परन्तु भगवतः कृपया मम जीवने कष्टानामपेक्षया तोष एव अधिकः । एतेषु तोषेषु एतावत्पर्यन्तं भवता अनुभूतः महान् तोषः कः इति प्रच्छ्यते चेत् वर्तते कश्चित्, यश्च आजीवनं महातोषत्वेनैव तिष्ठति ।

तत्प्रकाशयितुम् अयं सुसमयः । यतो  हि मम शैक्षिकं जीवनं समाप्तप्रायं वर्तते । विद्यावारिधिशोधप्रबन्धः उपाधये समर्पयितुं सज्जः । विद्यावारिधिः इति उपाधिरपि मया लभेत । अनेके जनाः विद्यावारिध्युपाधिप्राप्तिसमयः एव मम शैक्षिकजीवनस्य आनन्दमयः समयः इति मन्वते । मम विषये अपि तथा चिन्तयन्तः अनेके भवतः विद्यावारिधिः समाप्यमाना अस्ति खलु इति पृच्छन्ति । मम अपेक्षया तत्र उत्सुकता, आनन्दः च तेषामेव वर्तते इति कदाचित् भासते । (न केवलम् उद्योगादिविषये चिन्तयन्तः ते इदं कथयन्ति अपि तु विद्यावारिधिप्राप्तिः नाम ते महतीम् उपलब्धिं मन्वते) । भवतु नाम तेषां मतिः । मम तु विद्यावारिधिप्राप्त्या महानन्दः तु न भवत्येव । यतो हि तदपेक्षया महानन्दम् अहं शैक्षिकजीवने प्रागेव प्राप्तवान् अस्मि ।

अखिलभारतस्तरे शास्त्रविषयेषु भाषणादिस्पर्धाः प्रचलन्ति । तत्र भागः वोढव्यः इति मम स्वप्नः प्राक्शास्त्रितः आसीत् । तत्र भागग्रहणमेव मम शैक्षिकजीवनस्य महती उपलब्धिः इति चिन्तितवान् आसम् । शास्त्रिकक्ष्यासु राज्यस्तरीयस्पर्धायामेव पराजयं प्राप्तवान् इति हेतोः अवसरः न लब्धः आसीत् । आचार्यस्तरे प्रथमवर्षे अवसरं प्राप्य पुरस्कारद्वयं प्राप्तवान् आसम् । तावता अहं तृप्तः च आसम् । परन्तु आचार्यद्वितीयवर्षे अपि अखिलभारतशास्त्रस्पर्धां प्रति गमनाय अवसरः प्राप्तः । तत्र एकं स्वर्णपदकम् (साहित्यभाषणे) एकं रजतपदकम् (समस्यापूर्तौ) कांस्यपदकद्वयं (अक्षरश्लोक्यां प्रश्नमञ्चे च) प्राप्तवान् । एषः तु मम आनन्दमयः क्षणः आसीत् । यस्यां स्पर्धायां भागग्रहणमात्रेण आत्मानं धन्यं मन्ये स्म, तादृशस्पर्धायां चतुर्णां पदकानाम् अवाप्त्या अहम् आनन्दतुन्दिलः आसम् ।

परन्तु अन्येषां दृष्ट्या इदम् आनन्ददायकं न । यतो हि एतद्वारा उद्योगप्राप्तिः वा विद्यालयस्य सर्वोत्कृष्टविद्यालयः इति नाम वा न भवति । तद् अहमपि जानामि । विद्यालयीयाः तु युवमहोत्सवे चत्वारि पदकानि प्राप्तानि इतीदम् अधुनापि मम महोपलब्धिं चिन्तयन्ति ।  तथापि मम शैक्षिकजीवनस्य आनन्दतमः समयः एषः इत्यत्र इदानीमपि नास्ति सन्देहः । स च आनन्दः अन्यैः आज्ञातः स्यात् । परन्तु अहं तु आनन्दानुभूतिं प्राप्तवान्, तत् स्मरामि चेत् इदानीमपि आनन्दः भवति । 





एतादृशः अव्यक्तानन्दः मया अन्येषु नावलोकितः आसीत् । अन्येऽपि एतादृशम् अनुभूतवन्तः स्युः एव । यथा मम आनन्दः अन्यैः न ज्ञायते तथैव अन्येषामपि आनन्दः मया न ज्ञातः स्यात् । एषः आनन्दः कस्यचित् वैद्यस्य मुखे मया दृष्टः। 

मम मातुः शस्त्रचिकित्सां कश्चन वैद्यः कृतवान् । सः मङ्गलूरुनगरे प्रसिद्धः शस्त्रचिकित्सकः । मम मातुः शस्त्रचिकित्साम् अयं करोति इति ज्ञानानन्तरं गूगल्-द्वारा तस्य विषये ज्ञातुं प्रयासः मया कृतः । तदा तेन घण्टाः यावत् शस्त्रचिकित्साः कृत्वा अनेकान् रोगिणः प्राणान् रक्षितवान् इति पठितम् । प्रतिदिनं सः रात्रौ शस्त्रचिकित्सां निर्वर्तयति स्म । मातुः शस्त्रचिकित्सायाः पूर्वं सप्त दिनानि यावत् लघुचिकित्सार्थम् अहं वैद्यालये आसम् । तदानीं एषः शस्त्रचिकित्सां कृत्वा शस्त्रक्रियाप्रकोष्ठतः बहिः आगच्छन् द्वित्रवारं दृष्टः । तदा तस्य मुखे विशिष्टः कोऽपि भावः न भवति स्म । मम मातुः शस्त्रचिकित्साकरणानन्तरम् आगतस्य तस्य मुखस्य उपरि विशिष्टः आनन्दः आसीत् । शस्त्रक्रिया क्लृप्तरूपेण जाता अस्ति इति आनन्देन बहुवारम् अवोचत् । जनाः माम् अन्यान्यविषयार्थं प्रशंसां कुर्युः, परन्तु मम महानन्दः एतया शस्त्रचिकित्सया अभवत् इति भावः तस्य मुखे दृश्यते स्म । एतेन ममापि अखिलभारतशात्रस्पर्धायाः आनन्ददायकः क्षणः स्मृतः । मम मातुः शस्त्रचिकित्सा उत्तमतया जाता इति आन्दोपि अभवत् ।

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...