ಮಂಗಳವಾರ, ಅಕ್ಟೋಬರ್ 27, 2020

ಶೋಷಣೆಯೆಂದು ಅಳುವುದೇ ಪೋಷಣೆಯೆಂದು ಸಂಭ್ರಮಿಸುವುದೇ?

ಕೆಲವೊಂದು ಕೆಲಸಗಳು ನಮ್ಮ ಅಭಿವೃದ್ಧಿಗೆ ಪೂರಕವಾಗಿರುತ್ತವೆ. ನಮ್ಮ ಅಭಿವೃದ್ಧಿಯಾಗಲಿ ಎಂಬ ಉದ್ದೇಶದಿಂದಲೇ ಹಿರಿಯರು ನಮಗೆ ಅನೇಕ ಕೆಲಸಗಳನ್ನು ವಹಿಸಿರುತ್ತಾರೆ. ಆ ಕೆಲಸಗಳನ್ನು ಮಾಡಿ ಮುಗಿಸಿದಾಗ ಯಾವುದೋ ಒಂದು ಅವ್ಯಕ್ತವಾದಂತಹ ಆನಂದ ನಮಗಿರುತ್ತದೆ. ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸಿದ ನಂತರ ಹಿರಿಯರು ನಮಗೆ ಇನ್ನಷ್ಟು ಜವಾಬ್ದಾರಿಯುತ ಕೆಲಸಗಳನ್ನು ನೀಡಿ ನಮ್ಮನ್ನು ಪ್ರೋತ್ಸಾಹಿಸತೊಡಗುತ್ತಾರೆ. ಹೀಗೆ ಯಾವುದಾದರೊಂದು ಕೆಲಸದಲ್ಲಿ ನಿಪುಣತೆ ಕ್ರಮಶಃ ಪ್ರಾಪ್ತವಾಗುತ್ತದೆ. ನಾವು ಮಾಡಿದ ಕೆಲಸದಿಂದ ಮಾಡಿಸಿಕೊಂಡವರಿಗೆ ಲಾಭವಾದರೆ ಪಾರಿತೋಷಕವಾಗಿಯೋ, ಪ್ರೋತ್ಸಾಹಕ್ಕಾಗಿಯೋ ಕಿಂಚಿತ್ತನ್ನು ನಮಗೂ ನೀಡುವುದು ಸಜ್ಜನರ ಲಕ್ಷಣ. ದ್ರವ್ಯರೂಪದಲ್ಲಿ ನೀಡದಿದ್ದರೂ ನಾಲ್ಕು ಪ್ರೋತ್ಸಾಹದ ಮಾತುಗಳನ್ನಾಡಿ ಬೆನ್ನು ತಟ್ಟುವುದು, ಮಾಡಿದ ತಪ್ಪುಗಳನ್ನು ತಿದ್ದುವುದು ಮುಂತಾದುವುಗಳನ್ನು ಮಾಡಿಯೇ ಮಾಡುತ್ತಾರೆ.

 

ಜುಲೈ ತಿಂಗಳಲ್ಲಿ ಊರಿಗೆ ಹೋಗಿದ್ದಾಗ ಪ್ರತಿಷ್ಠಿತ ವಿಶ್ವವಿದ್ಯಾಲಯದ ಅಧಿಕಾರಿಯೊಬ್ಬರ ಕರೆ ಬಂತು. ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಶಿಕ್ಷಕರ ಬೋಧನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಸಂಸ್ಕೃತಸಾಹಿತ್ಯ ಎಂಬ ವಿಷಯದ ಬಗ್ಗೆ ಮುಂದಿನ ಸೋಮವಾರದಿಂದ ಮೂರು ಗಂಟೆಗಳ ಕಾಲ ಬೋಧಿಸಬೇಕು. ಎಂದರು. ನಾನೂ ಒಪ್ಪಿಕೊಂಡಾಯಿತು. ಯಾವ ವಿಷಯವನ್ನು ಬೋಧಿಸಬೇಕು, ಹೇಗೆ ಬೋಧಿಸಬೇಕು, ಬೋಧಿಸುವ ಮಾಧ್ಯಮ ಯಾವುದು (online platform), ಎಷ್ಟು ಗಂಟೆಯಿಂದ ಬೋಧಿಸಬೇಕು ಮೊದಲಾದ ವಿಚಾರಗಳಲ್ಲಿ ಮಾಹಿತಿ ಇರಲಿಲ್ಲ. ಆಮೇಲೆ ಹೇಳುತ್ತೇನೆ ಎಂದು ಹೇಳಿದ್ದರು. ಆದರೆ ಭಾನುವಾರದವರೆಗೂ ಅವರ ಸುದ್ದಿ ಇಲ್ಲ. ಯಾರೋ ದೊಡ್ಡ ವಿದ್ವಾಂಸರು ಬರುತ್ತೇನೆ ಎಂದು ಹೇಳಿ ಕೈ ಕೊಟ್ಟ ಮೇಲೆ ನನ್ನನ್ನು ಕೇಳಿದ್ದಿರಬಹುದು, ಈಗ ಅವರು ಪುನಃ ಒಪ್ಪಿಕೊಂಡಿರಬೇಕು ಎಂದು ನಾನೂ ಸುಮ್ಮನಾಗಿದ್ದೆ. ಫೋನ್ ಮಾಡಿ ನಿಮ್ಮ ಬೋಧನೆ ರದ್ದಾಗಿದೆ ಎಂಬ ವಾಕ್ಯವನ್ನು ಹೇಳುವ ಮುಜುಗರ ಅವರಿಗೂ ಕೇಳುವ ಮುಜುಗರ ನನಗೂ ಆಗಬಾರದು ಎಂಬುವುದು ನನ್ನ ಉದ್ದೇಶವಾಗಿತ್ತು.

 

ಆದರೆ ನಡೆದದ್ದೇ ಬೇರೆ. ಸೋಮವಾರ ಅಮ್ಮನಿಗೆ ಔಷಧಿ ತರಬೇಕು ಎಂದು ಹತ್ತಿರದ ಆಸ್ಪತ್ರೆಗೆ ಹೋಗಿದ್ದೆ. ವೈದ್ಯರ ಬಳಿಯಿದ್ದಾಗ ವಿಶ್ವವಿದ್ಯಾಲಯದ ಮತ್ತೊಬ್ಬ ಕಿರಿಯ ಅಧಿಕಾರಿಯ ಕರೆ ಬಂತು. ನಿಮ್ಮ ಇಂದಿನ ಬೋಧನೆಯಲ್ಲಿ ಪಿಪಿಟಿ ಉಪಯೋಗಿಸುತ್ತೀರಾ ಎಂದು ಅವರು ಕೇಳಿದಾಗ ಅವಾಕ್ಕಾದೆ. ಯಾವ ವಿಷಯ, ಎಂತಹ ಬೋಧನೆ, ಬೋಧನಾ ಮಾಧ್ಯಮ ಯಾವುದು ಎಂಬುದರ ಬಗ್ಗೆ ನನಗೆ ಅರಿವೇ ಇಲ್ಲ. ಹೇಳಿದ ಅಧಿಕಾರಿಗಳು ಏನನ್ನೂ ತಿಳಿಸಿಲ್ಲ ಎಂದಾಗ ಅವರು ವಿಷಯಗಳ ಪಟ್ಟಿಯನ್ನು ವಾಟ್ಸ್ ಆಪ್ ನ ಮೂಲಕ ಕಳುಹಿಸಿ, ಹೇಗೆ ಬೋಧಿಸಬೇಕು ಎಂಬುವುದನ್ನು ಒಂದೇ ನಿಮಿಷದಲ್ಲಿ ವಿವರಿಸಿದರು. ಆವಾಗಲೇ ಗಂಟೆ 11.00 ದಾಟಿತ್ತು. 12.30 ರಿಂದ 1.30 ರವರೆಗೆ ನನ್ನ ಅವಧಿಯಿತ್ತು. ಮನೆಗೆ ವೇಗವಾಗಿ ತೆರಳಿ ಕೂಡಲೇ ಸಿಕ್ಕಿದ ಪುಸ್ತಕಗಳನ್ನು ತಡಕಾಡಿ ಹೇಗಾದರೂ ವಿಷಯವನ್ನು ಸಿದ್ಧಪಡಿಸಿದೆ. ನಮ್ಮ ಊರಿನಲ್ಲಿ ನೆಟ್ವರ್ಕ್ ಸಮಸ್ಯೆ ಇದ್ದುದರಿಂದ ಅಂತರ್ಜಾಲದಲ್ಲಿ ಸಿಗುವ ಮಾಹಿತಿಯನ್ನು ಪಡೆಯಲೂ ವಿಫಲನಾಗಿದ್ದೆ.

 

ಮನೆಯಲ್ಲಿ ನೆಟ್ವರ್ಕ್ ಇರಲಿಲ್ಲ ಎಂಬ ಕಾರಣಕ್ಕಾಗಿ ಸಮೀಪದ ಬೆಟ್ಟಕ್ಕೆ ತೆರಳಿದೆ. ಮಳೆಯೂ ಹೊಯ್ಯುತ್ತಿದ್ದುದರಿಂದ ಕಾರಿನೊಳಗೆ ಕುಳಿತು ಬೋಧಿಸುವುದು ಮಾಡುವುದು ಅನಿವಾರ್ಯವಾಗಿತ್ತು. ನಮ್ಮ ಕಾರಿನ ಹಿಂಭಾಗದಲ್ಲಿ ಆಗಷ್ಟೇ ಕೊಯ್ದ ತಾಳೆ ಹಣ್ಣುಗಳು ಸುಮಾರು 3 ಕ್ವಿಂಟಾಲ್ನಷ್ಟಿದ್ದವು. ಅವುಗಳನ್ನು ಇಳಿಸಲು ಸಮಯವಿಲ್ಲದ್ದರಿಂದ ತಾಳೆ ಹಣ್ಣುಗಳ ವಾಸನೆಯನ್ನೂ, ತಾಳೆ ಹಣ್ಣುಗಳ ಬಳಿ ಹಾರುತ್ತಿದ್ದ ಕೀಟಗಳ ಕಚ್ಚುವಿಕೆಯನ್ನೂ ತಡೆದುಕೊಂಡು ಹೇಗೋ ಒಂದು ಗಂಟೆಯ ಬೋಧನೆಯನ್ನು ಮುಗಿಸಿದೆ. ನಂತರದ ಎರಡು ದಿನಗಳಲ್ಲಿ ಪಿಪಿಟಿ ರಚಿಸಿ ಸ್ವಲ್ಪ ಚೆನ್ನಾಗಿಯೇ ಸಿದ್ಧತೆ ಮಾಡಿಕೊಂಡು ಬೋಧಿಸಿದೆ.

 

ಮೂರು ದಿನಗಳ ಬೋಧನೆಯ ನಂತರ ವಿಶ್ವವಿದ್ಯಾಲಯಕ್ಕೆ ನನ್ನ ವಿಚಾರವೇ ಮರೆತು ಹೋಗಿತ್ತು. ಹೀಗೆಯೇ ನನ್ನ ಆತ್ಮೀಯ ಮಿತ್ರರ ಬಳಿ ವಿಶ್ವವಿದ್ಯಾಲಯದ ಕತೆಯನ್ನು ಹಂಚಿಕೊಳ್ಳುತ್ತಿದ್ದೆ. ಅವರೆಲ್ಲರದೂ ಒಂದೇ ಸಲಹೆಯಾಗಿತ್ತು. ಅವಶ್ಯವಾಗಿ ವಿಶ್ವವಿದ್ಯಾಲಯಕ್ಕೆ ಈ ವಿಷಯವನ್ನು ನೀನು ಮುಟ್ಟಿಸಬೇಕು. ಹೀಗೆ ಬೋಧನೆಯನ್ನು ಮಾಡಿಸಿ ಮರೆಯುವುದು ಯಾವುದೇ ಸಂಸ್ಥೆಗೆ ಶೋಭೆ ತರುವಂತಹ ವಿಚಾರವಲ್ಲ. ಅವರ ಕಣ್ತಪ್ಪಿನಿಂದಾದ ವಿಚಾರವಾದರೆ ಅವರು ಸರಿಪಡಿಸಿಕೊಳ್ಳುತ್ತಾರೆ ಎಂದು ಅನೇಕರು ಅನೇಕ ರೀತಿಯಲ್ಲಿ ಬೋಧಿಸುತ್ತಿದ್ದರು.

 

3 ಗಂಟೆಗಳ ಕಾಲ ಬೋಧನೆಯ ಅನುಭವ ನನಗಾಗಿದೆ. ಇದಕ್ಕಾಗಿ ಧನ್ಯವಾದದ ನುಡಿಗಳನ್ನೋ ಗೌರವ ಧನವನ್ನೋ ಅಪೇಕ್ಷಿಸಿ ಸಿಗದೇ ಇರುವುದಕ್ಕಾಗಿ ಬೇಸರ ಮಾಡಿಕೊಳ್ಳುವುದು ಉಚಿತವಲ್ಲ ಎಂದು ನನಗನ್ನಿಸುತ್ತಿತ್ತು. ಇಂತಹ ಕಾರ್ಯಕ್ರಮಗಳಿಂದ ನಾನೂ ಒಂದಷ್ಟು ಕಲಿತಂತಾಗುತ್ತದೆ ಎಂಬ ತೃಪ್ತಿಯೂ ಇತ್ತು. ಆದರೆ ವಿಶ್ವವಿದ್ಯಾಲಯ ನಡೆಸಿಕೊಂಡ ರೀತಿ ಉಚಿತವಲ್ಲ ಎಂದು ನನಗನ್ನಿಸುತ್ತಿತ್ತು. ಆದ್ದರಿಂದ ಅನೇಕ ಬಾರಿ ಈ ವಿಚಾರವನ್ನು ವಿಶ್ವವಿದ್ಯಾಲಯಕ್ಕೆ ತಿಳಿಸಬೇಕು ಎಂದುಕೊಂಡಿದ್ದೆ. ಆದರೆ ಕಂಪ್ಯೂಟರ್ ತೆರೆದಾಗ ಈ ವಿಚಾರ ಮರೆಯುತ್ತಿತ್ತು. 3 ತಿಂಗಳ ನಂತರ ಯಾವುದೋ ವಿಚಾರಕ್ಕಾಗಿ ವಿಶ್ವವಿದ್ಯಾಲಯದ ವೆಬ್ ಸೈಟ್ ತೆರೆದಾಗ ಈ ವಿಚಾರ ನೆನಪಾಯಿತು. ವಿಶ್ವವಿದ್ಯಾಲಯದ ಇಮೇಲ್ ಐಡಿಗೆ ಸ್ವಲ್ಪ ಖಾರವಾಗಿಯೇ ಇಮೇಲೊಂದನ್ನು ರವಾನಿಸಿದೆ.

 

ನಾನು ಜುಲೈ ತಿಂಗಳ 13, 14, 15 ರಂದು ವಿಶ್ವವಿದ್ಯಾಲಯದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಬೋಧನೆ ನಡೆಸಿದ್ದೆ. ಇದಕ್ಕೆ ಕನಿಷ್ಠಪಕ್ಷ ಪ್ರಮಾಣಪತ್ರವನ್ನಾದರೂ ನೀಡಬಹುದು ಎಂದು ನಾನು ಭಾವಿಸಿದ್ದೆ. ಆದರೆ ಬಾಯಿಮಾತಿನಲ್ಲೂ ಧನ್ಯವಾದಗಳನ್ನು ತಿಳಿಸಲಿಲ್ಲ. ಬೋಧನೆಯ ಸಮಯದಲ್ಲಿ ನಾನು ಊರಿನಲ್ಲಿದ್ದೆ. ಅಲ್ಲಿ ಇಂಟರ್ ನೆಟ್ ಸಿಗುವುದಿಲ್ಲ ಎಂಬ ಕಾರಣಕ್ಕಾಗಿ ಮಳೆ ಬರುತ್ತಿದ್ದಾಗಲೂ ಕಾರಿನಲ್ಲಿ ಕುಳಿತು ಬೋಧನೆ ನಡೆಸಿಕೊಟ್ಟಿದ್ದೆ. ನನ್ನ ಬೋಧನೆಯ ವಿಚಾರ ಬಾಲಿಶವೇ ಆಗಿರಬಹುದು ಆದರೂ ಕೂಡಾ ವಿಷಯವನ್ನು ಮಂಡಿಸಲು ಪ್ರಯತ್ನವನ್ನಂತೂ ಮಾಡಿದ್ದೇನೆ. ಅದಕ್ಕೋಸ್ಕರವಾಗಿ ಡಾಟಾ ಪ್ಯಾಕ್ ಕೂಡಾ ಹಾಕಿಸಿದ್ದೇನೆ. ಇಷ್ಟನ್ನೆಲ್ಲಾ ಮಾಡಿದರೂ ವಿಶ್ವವಿದ್ಯಾಲಯದ ಕಡೆಯಿಂದ ಪ್ರತಿಸ್ಪಂದವೇ ಇಲ್ಲ ಎಂಬ ಕಾರಣಕ್ಕಾಗಿ ಇಷ್ಟು ದಿನಗಳ ತನಕ ಕಾದು, ಈಗ ಮರ್ಯಾದೆ ಬಿಟ್ಟು ಹೇಳುತ್ತಾ ಇದ್ದೇನೆ. ಮುಂದೆ ಯಾರಿಗೂ ಹೀಗಾಗಬಾರದು, ವಿಶ್ವವಿದ್ಯಾಲಯದ ಗೌರವ ನಾಶವಾಗಬಾರದು ಎಂಬ ಇರಾದೆ ನನ್ನದು. ಆದ್ದರಿಂದ ಈ ನನ್ನ ನಿರ್ಲಜ್ಜ ವ್ಯವಹಾರ. ನಾನು ಮಾಡಿದ ಬೋಧನೆಯನ್ನು ವಿಶ್ವವಿದ್ಯಾಯ ಯೂಟ್ಯೂಬ್ ಚಾನಲ್ನಲ್ಲಿಯೂ ಅಪ್ಲೋಡ್ ಮಾಡಿದೆ ಅದರ ಲಿಂಕ್ ಈ ಕೆಳಗಿದೆ (ಇಲ್ಲಿ ಲಿಂಕ್ ಸೇರಿಸಿಲ್ಲ. ವಿಶ್ವವಿದ್ಯಾಲಯಕ್ಕೆ ಕಳುಹಿಸಿದ ಪತ್ರದಲ್ಲಿ ಸೇರಿಸಿದ್ದೆ.)

 

ಪತ್ರವನ್ನು ಕಳುಹಿಸಿದ ಒಂದು ವಾರದ ನಂತರ ವಿಶ್ವವಿದ್ಯಾಲಯ ಅಭಿನಂದನಾ ಪತ್ರವೊಂದನ್ನು ಮೇಲ್ ಮಾಡಿತು. ಪತ್ರವನ್ನು ನೋಡಿದ ನನಗೆ ಕಟಕಟೆ ದೇವರಿಗೆ ಮರದ ಜಾಗಟೆ ಎಂಬ ಗಾದೆ ನೆನಪಾಯಿತು.


ಬುಧವಾರ, ಜುಲೈ 8, 2020

ಮಿತಾದರ್ಶ, ಹಿತಾದರ್ಶ, ಸಕಾಲಾದರ್ಶ


ಹಾಸ್ಟೆಲ್ನ ಜೀವನವನ್ನು ಅನುಭವಿಸದಿದ್ದವರು ಜೀವನದಲ್ಲಿ ಮಹತ್ತ್ವವಾದ ಅಂಶವೊಂದನ್ನು ಕಳೆದುಕೊಂಡಂತೆಯೇ. ಹಾಸ್ಟೆಲ್ ನಲ್ಲಿ ಸಿಗುವ ಅನೇಕ ಅನುಭವಗಳಿಗೆ ಬದಲಿ(alternative) ಅನುಭವಗಳಿಲ್ಲ. ವಿವಿಧ ಊರುಗಳಿಂದ ವಿವಿಧ ಮನಃಸ್ಥಿತಿಯ ಬಗೆಬಗೆಯ ವಿದ್ಯಾರ್ಥಿಗಳು ಸೇರುವುದರಿಂದ ಅನೇಕರಿಗೆ ಅನೇಕ ವಿಷಯಗಳ ಪರಿಚಯವಾಗುತ್ತದೆ. ತಮ್ಮ ಅಧ್ಯಯನಕ್ಕಾಗಿ ಹಾಸ್ಟೆಲ್ ಸೇರಿದ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವಾಸ ಕೊನೆಯಾದ ಹಲವು ವರ್ಷಗಳ ನಂತರವೂ ಅಧ್ಯಯನವೊಂದನ್ನು ಬಿಟ್ಟು ಬೇರೆಲ್ಲಾ ಅಂಶಗಳು ನೆನಪಿರುತ್ತವೆ ಎಂಬುವುದಂತೂ ಸತ್ಯ. ಅನೇಕ ಹಾಸ್ಟೆಲ್ ಗಳು ರ್ಯಾಗಿಂಗ್ ಮುಂತಾದ ಕೆಟ್ಟ ಕಾರಣಗಳಿಂದಾಗಿ ಯುವಪೀಳಿಗೆಯ ಹಾದಿ ತಪ್ಪಿಸುತ್ತಿದ್ದರೂ ಅನೇಕ ಹಾಸ್ಟೆಲ್ ಗಳಲ್ಲಿ ಹಿರಿಯ ವಿದ್ಯಾರ್ಥಿಗಳು ಕಿರಿಯರಿಗೆ ಮಾರ್ಗದರ್ಶನವನ್ನು ನೀಡಿ ಕಿರಿಯರ ಜೀವನವನ್ನು ರೂಪಿಸುತ್ತಿರುವುದನ್ನೂ ಕಾಣಬಹುದು.

ನಾನು ಶೃಂಗೇರಿಯಲ್ಲಿ ಹಾಸ್ಟೆಲ್ ಸೇರಿದಾಗ ಆ ಹಾಸ್ಟೆಲ್ ಆಗಷ್ಟೇ ನಿರ್ಮಾಣವಾಗಿತ್ತು. ಹೊಸ ಹಾಸ್ಟೆಲ್ ನಲ್ಲಿ ವಾಸ ಮಾಡಿದ ಎರಡನೇ ಬ್ಯಾಚ್ ನಮ್ಮದು. ಹೀಗಾಗಿ ಹಾಸ್ಟೆಲ್ ದೃಷ್ಟಿಯಿಂದ ನೋಡಿದರೆ ಹಿರಿಯರು ಕಿರಿಯರು ಎಂಬ ಭೇದಭಾವವಿರಲಿಲ್ಲ. ಈ ಹಾಸ್ಟೆಲ್ ನಲ್ಲಿ ಎಲ್ಲರೂ ಹೊಸಬರೇ. ಅನೇಕರಿಗೆ ಬೇರೆ ಹಾಸ್ಟೆಲ್ ಗಳಲ್ಲಿ ವಾಸವಾಗಿದ್ದ ಅನುಭವವನ್ನು ಗಣನೆಗೆ ತೆಗೆದುಕೊಂಡರಷ್ಟೇ ಹಿರಿಯರು ಕಿರಿಯರು ಎಂಬ ಎರಡು ವರ್ಗಗಳನ್ನು ಹೇಳಬಹುದಾಗಿತ್ತು.


ವಿದ್ಯಾರ್ಥಿಜೀವನದಲ್ಲಿ ಚಟಗಳು ಅಂಟುವುದು ಸಾಮಾನ್ಯ. ಅನೇಕರು ವಿದ್ಯಾರ್ಥಿಜೀವನದಲ್ಲಂಟಿದ ಚಟಗಳಿಂದ ತಮ್ಮ ಜೀವನವನ್ನೇ ಬಲಿಯಾಗಿಸಿದ ಘಟನೆಗಳೂ ಇವೆ. ಮತ್ತೂ ಕೆಲವರಿಗೆ ಅಂಟಿದ ಚಟವನ್ನು ಬಿಡಲಾಗದಿದ್ದರೂ ನಾನು ಮಾಡುತ್ತಿರುವ ಚಟ ಒಳ್ಳೆಯದಲ್ಲ ಎಂಬ ಅರಿವೂ ಇರುತ್ತದೆ. ಅಲ್ಲದೇ, ನನ್ನಿಂದಾಗಿ ಇತರರು ಚಟವನ್ನು ಕಲಿಯಬಾರದು ಎಂಬ ಕಳಕಳಿಯೂ ಇರುತ್ತದೆ. ಇಂತಹವರು ತುಂಬಾ ವಿರಳ. ನನ್ನ ಹಾಸ್ಟೆಲ್ ನಲ್ಲಿ ವಾಸಿಸುತ್ತಿದ್ದ ಹಿರಿಯ ವಿದ್ಯಾರ್ಥಿಯೊಬ್ಬನಿಗೆ (ಮೊದಲೇ ಹೇಳಿದಂತೆ ಬೇರೆ ಕಡೆ ವಿದ್ಯಾಭ್ಯಾಸವನ್ನು ಮುಗಿಸಿ ಉನ್ನತ ವಿದ್ಯಾಭ್ಯಾಸಕ್ಕಾಗಿ ನಮ್ಮ ವಿದ್ಯಾಪೀಠವನ್ನು ಸೇರಿದವನು) ಗುಟಕಾ ತಿನ್ನುವ ಚಟವಿತ್ತು. ಹಾಗೆಂದು ಹೊಸದಾಗಿ ಯಾರಾದರೂ ಚಟವನ್ನು ಆರಂಭಿಸಿದರೆ ಮನಮುಟ್ಟುವಂತೆ ಅವರಿಗೆ ಬುದ್ಧಿಹೇಳಿ ಅವರನ್ನು ಚಟಮುಕ್ತರನ್ನಾಗಿಸುತ್ತಿದ್ದ.

ಆತ ಸುಮಾರು 20ರ ಸಂಖ್ಯೆಯಲ್ಲಿದ್ದ  ವಿದ್ಯಾರ್ಥಿಗಳಿಗೆ(ಹಾಸ್ಟೆಲ್ ನ ಒಂದು ಭಾಗದಲ್ಲಿ ವಾಸಿಸುತ್ತಿದ್ದ) ನಾಯಕನೂ ಆಗಿದ್ದ. ಹಾಗೆಂದು ಆತನೂ ಘೋಷಿಸಿಕೊಂಡಿರಲಿಲ್ಲ, ಹಾಸ್ಟೆಲ್ ವಾರ್ಡನ್ ಕೂಡಾ ಘೋಷಿಸಿರಲಿಲ್ಲ. ಆದರೂ ವಿದ್ಯಾರ್ಥಿಗಳಿಗೆಲ್ಲರಿಗೂ ಸೂಕ್ತವಾದ ಸಮಯದಲ್ಲಿ ಸೂಕ್ತ ಮಾರ್ಗದರ್ಶನವನ್ನು ನೀಡುತ್ತಿದ್ದ. ಈ 20 ಜನರಲ್ಲೇ  7-8 ಜನರ ಆಪ್ತವಲಯವಿತ್ತು (ಅದರಲ್ಲಿ ನಾನೂ ಒಬ್ಬ). ವಿಶೇಷವಾಗಿ ತಿಂಡಿಯನ್ನೇನಾದರೂ ಯಾರಾದರೂ ತಿಂದರೆ ಹಂಚಿಕೊಂಡು ತಿನ್ನುವುದು ನಮ್ಮ ಅಭ್ಯಾಸವಾಗಿತ್ತು. ಹೀಗೆ ತಿನ್ನುವ ಸಮಯದಲ್ಲಿ ಯಾರೂ ಬರಬಾರದು. (ಬೇರೆಯವರಿಗೆ ಕೊಡಬಾರದೆಂದಲ್ಲ. ಇರುವ ಇಷ್ಟರಲ್ಲೇ ಬೇರೆಯವರಿಗೆ ಕೊಟ್ಟರೆ ನಮಗೇನೂ ಉಳಿಯದೇ ಕಷ್ಟವಾಗುತ್ತಿತ್ತು.) ತಿನ್ನುವ ವೇಳೆಯಲ್ಲಿ ಯಾರಾದರೂ ಬಂದರೆ ಉಪಾಯವಾಗಿ ಅವರನ್ನು ಹೊರಗಟ್ಟುತ್ತಿದ್ದೆವು.


ಹೀಗೆ ಒಂದು ಬಾರಿ ಗೆಳೆಯನೊಬ್ಬ ಹಲಸಿನ ಹಣ್ಣಿನ ಚಿಪ್ಸ್ (ಸೋಂಟೆ) ತಂದಿದ್ದ. ತಿನ್ನುತ್ತಿರುವಾಗ ವಿದ್ಯಾಪೀಠದ ನಾಯಕನ ಆಗಮನವಾಯಿತು. ವಿದ್ಯಾಪೀಠದ ನಾಯಕ ನಮ್ಮೆಲ್ಲರಿಗೂ ಅಣ್ಣನಂತೆ ಆತ್ಮೀಯನಾಗಿ ಅಚ್ಚುಮೆಚ್ಚಿನವನಾಗಿದ್ದರಿಂದ ಒಕ್ಕೊರಲಿನಿಂದ ಆತನನ್ನು ಸ್ವಾಗತಿಸಿದೆವು. ಬಾಗಿಲಿಗೆ ಚಿಲಕ ಜಡಿದು ಹೊಟ್ಟೆಗೆ ತಿಂಡಿ ಜಡಿಯಲಾರಂಭಿಸಿದೆವು. ಆ ದಿನದ ಉಪಾಹಾರ ಅಂತಿಮ ಹಂತಕ್ಕೆ ಬಂದಿತ್ತು. ಬಂದ ಅತಿಥಿ ವಿದ್ಯಾಪೀಠದ ನಾಯಕನಾಗಿದ್ದರಿಂದ ಯಾವುದೋ ಕೆಲಸಕ್ಕೆ ಆತನನ್ನು ಹುಡುಕಿಕೊಂಡು ಬಂದಿದ್ದ ನಾಲ್ಕೈದು ವಿದ್ಯಾರ್ಥಿಗಳು ಬಾಗಿಲು ಬಡಿಯಲಾರಂಭಿಸಿದರು. ಬಾಗಿಲು ತೆಗೆಯದೇ ನಿರ್ವಾಹವಿಲ್ಲ. ಬಾಗಿಲು ತೆಗೆದ ತಕ್ಷಣ ತಿಂಡಿಯನ್ನು ಕಂಡರೆ ವಿದ್ಯಾರ್ಥಿಗಳು ಬಿಡುವವರಲ್ಲ. ತಿನ್ನಬೇಡಿ ಎಂದು ಹೇಳಲೂ ಸಾಧ್ಯವಿಲ್ಲ. (ಆತಿಥ್ಯಕ್ಕೆ ಹೆಸರಾದ ಉತ್ತರಕನ್ನಡದ ಹವ್ಯಕರು ಯಾರಿಗೂ ಗೊತ್ತಾಗದಂತೆ ತಿಂದು ಮುಗಿಸಿಯಾರು, ಆದರೆ ತಿನ್ನುವ ವೇಳೆಯಲ್ಲಿ ಯಾರಾದರೂ ಎದುರಿಗೆ ಬಂದರೆ ಅವರಿಗೆ ನೀಡದೇ ತಿನ್ನುವುದಂತೂ ಸಾಧ್ಯವಿಲ್ಲ. ನನ್ನೊಬ್ಬನನ್ನು ಬಿಟ್ಟರೆ ಗೆಳೆಯರೆಲ್ಲಾ ಉತ್ತರಕನ್ನಡದ ಹವ್ಯಕರೇ). ಉಪಾಯವಾಗಿ ಅವರನ್ನು ಹೊರಗಟ್ಟಲು ನಮ್ಮ ನಾಯಕ ಚಿಲಕ ತೆಗೆಯುವುದಕ್ಕೂ ಮುಂಚೆ ವಿದ್ಯಾಪೀಠದ ನಾಯಕನನ್ನುದ್ದೇಶಿಸಿ ಎರಡು ಮಾತುಗಳನ್ನಾಡಿದ.

ಈಗ ಬಂದವರು ತಿಂಡಿ ತಿಂದರೆ ನಾಳೆಗೆ ತಿಂಡಿ ಉಳಿಯುವುದಿಲ್ಲ. ಹೀಗಾದುದಕ್ಕೆ ನೀನೇ ಕಾರಣನಾಗುತ್ತೀ. ಎನ್ನುತ್ತಲೇ ಚಿಲಕ ತೆಗೆದು ಬನ್ನಿ ತಗೋಳಿ, ತಿನ್ನಿ ಎನ್ನುತ್ತಾ ಬಂದವರನ್ನು ಸ್ವಾಗತಿಸಿದ. ಚಾಣಾಕ್ಷಮತಿಯಾದ ವಿದ್ಯಾಪೀಠದ ನಾಯಕನಿಗೆ ನಮ್ಮ ನಾಯಕನ ಮಾತುಗಳ ಆಂತರ್ಯ ಅರ್ಥವಾಯಿತು.  ಕೂಡಲೇ ತಾನೇ ನಾಲ್ಕು ಚಿಪ್ಸ್(ಸೋಂಟೆ)ಗಳನ್ನು ಕೈಯಲ್ಲಿ ಹಿಡಿದುಕೊಂಡು ಅವರಿಗೂ ಕೊಟ್ಟು ಬಂದವರನ್ನೆಲ್ಲರನ್ನೂ ಹೊರಗೊಯ್ದ.  ಹೀಗೆ ಯಾರ ಮನಸ್ಸಿಗೂ ನೋವುಂಟುಮಾಡದೇ ಯಾರೂ ತಿಂಡಿಯನ್ನು ತಿನ್ನದಂತೆ ಪರಿಸ್ಥಿತಿಯ ನಿರ್ವಾಹವಾಯಿತು. (ವಿದ್ಯಾಪೀಠದ ನಾಯಕನಿಗೂ ಬೇಜಾರಾಗಲು ಸಾಧ್ಯವಿಲ್ಲ. ಆತನೂ ಇಂತಹ ಅನೇಕ ಪರಿಸ್ಥಿತಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದರಿಂದಲೇ ವಿದ್ಯಾಪೀಠದ ನಾಯಕನಾದುದಲ್ಲವೇ.)

ಸಂಸ್ಕೃತ ವಿದ್ಯಾರ್ಥಿಗಳಾದ ನಮಗೂ ಆಧುನಿಕತೆಯ ಸ್ಪರ್ಶವಾಗಲಾರಂಭಿಸಿತ್ತು. ನಮ್ಮ 7-8 ವಿದ್ಯಾರ್ಥಿಗಳಲ್ಲಿ ಯಾರದಾದರೂ ಹುಟ್ಟುಹಬ್ಬವಿದ್ದರೆ ಕೇಕ್ ತಂದು ಕತ್ತರಿಸಿ ಆಚರಿಸುವ ಪರಂಪರೆಯಿತ್ತು. 100 ರೂಪಾಯಿಗೆ ಕೇಕ್ ಸಿಗುತ್ತಿದ್ದ ಆ ಕಾಲದಲ್ಲಿ ಪ್ರತಿಯೊಬ್ಬರೂ 10-15 ರೂಪಾಯಿಗಳನ್ನು ಹಾಕಿದ್ದರೆ ಕೇಕ್ ತರಬಹುದಾಗಿತ್ತು. ಹೀಗೆ ಕೇಕ್ ತಂದು ಕತ್ತರಿಸಿ ತಿನ್ನುತ್ತಿದ್ದೆವು. ನಮ್ಮಲ್ಲೊಬ್ಬನ ಬಳಿ ಚೈನೀಸ್ ಮೊಬೈಲ್ ಸೆಟ್ ಇತ್ತು. ಆ ಮೊಬೈಲ್ ಸೆಟ್ ನಲ್ಲಿ ನಗುತಾನಗುತಾ ಬಾಳು ನೀನು ನೂರು ವರುಷ ಎಂಬ ಹಾಡನ್ನು ಪ್ಲೇ ಮಾಡುತ್ತಾ ಕೇಕ್ ತಿನ್ನುತ್ತಾ ಹುಟ್ಟುಬ್ಬವನ್ನಾಚರಿಸುತ್ತಿದ್ದೆವು.

ನಾನು ಹಾಸ್ಟೆಲ್ ಸೇರಿದ ಮರು ವರ್ಷವೇ ನಮ್ಮ ಸ್ನೇಹಿತರ ಬಳಗಕ್ಕೆ ಮತ್ತೊಬ್ಬನ ಪ್ರವೇಶವಾಯಿತು. ವರ್ಷಾರಂಭದಲ್ಲೇ ಆತನ ಹುಟ್ಟುಹಬ್ಬ. ಆತನೋ ಧೃಢಮತಿ. ಏನನ್ನಾದರೂ ನಿರ್ಧರಿಸಿದರೆ ತನ್ನ ನಿರ್ಧಾರವನ್ನು ಬದಲಾಯಿಸುವುದೇ ಇಲ್ಲ. ನಾನು ಕೇಕ್ ತಿನ್ನುವುದಿಲ್ಲ ಹಾಗೂ ಕತ್ತರಿಸುವುದಿಲ್ಲ ಎಂಬ ನಿರ್ಣಯವನ್ನು ಅವನು ಮಾಡಿದ್ದನಂತೆ. ಈ ವಿಚಾರ ಗೊತ್ತಿಲ್ಲದ ನಾವು ಕೇಕ್ ತಂದುಬಿಟ್ಟಿದ್ದೆವು. ಆತನನ್ನು ಕರೆದು ಕತ್ತರಿಸಲು ಹೇಳಿದಾಗ ತಮ್ಮ ನಿರ್ಣಯವನ್ನು ತಿಳಿಸಿ ನಿಮಗೆ ಬೇಜಾರಾದರೂ ಕೂಡಾ ನನ್ನ ನಿರ್ಧಾರದಿಂದ ನಾನು ಹಿಂದೆ ಸರಿಯುವುದಿಲ್ಲ ಎಂದು ಖಡಾಖಂಡಿತವಾಗಿ ಹೇಳಿಬಿಟ್ಟ. ಕೇಕನ್ನು ತಂದು ಸಂತೋಷದಿಂದ ಹುಟ್ಟುಹಬ್ಬವನ್ನು ಆಚರಿಸುತ್ತೇವೆಂದು ಕಾತರರಾಗಿದ್ದ ನಮಗೆ ಬರಸಿಡಿಲು ಬಡಿದಂತಾಯಿತು. ವಿವಿಧರೀತಿಯಲ್ಲಿ ಕೇಕ್ ತಿನ್ನುವಂತೆ ಹೇಳಿದ ಪ್ರಯತ್ನಗಳೆಲ್ಲಾ ವಿಫಲವಾದುವು. ಕೊನೆಯ ಪ್ರಯತ್ನವಾಗಿ ನೀನು ತಿನ್ನದಿದ್ದರೆ ನಾವೂ ತಿನ್ನುವುದಿಲ್ಲ ಎಂದು ಹೇಳಿದ ನಮ್ಮ ನಾಯಕನ ನುಡಿಗೂ ಆತ ಜಗ್ಗಲಿಲ್ಲ. ತಂದಿದ್ದ ಕೇಕ್, ಆತನ ನಿರ್ಣಯ ಹಾಗೂ ನಮ್ಮ ಬಾಡಿದ ಮುಖಗಳು ಹಾಗೆಯೇ ಉಳಿದವು.


ಮರುದಿನ ನಾಯಕ ತನ್ನ ರೂಮಿಗೆ ನಮ್ಮನ್ನೆಲ್ಲ ಕರೆದ. ಕೇಕ್ ಕತ್ತರಿಸಲು ನಿರಾಕರಿಸಿದ ಸ್ನೇಹಿತ ಇರಲಿಲ್ಲ. ಆತ ಹಾಗೆ ಹೇಳಿದ ಎಂದು ಬೇಜಾರಾಗಿ ಕೇಕ್ ಬಿಸಾಡುವುದರಲ್ಲಿ ಅರ್ಥವಿಲ್ಲ. ಯಾರದೋ ಮೇಲಿರುವ ಬೇಜಾರಿಗೆ ತಿನ್ನುವ ವಸ್ತುವನ್ನು ಹಾಳು ಮಾಡುವ ಅಧಿಕಾರ ನಮಗಿಲ್ಲ. ನಿನ್ನೆಯೇನೋ ನೀನು ತಿನ್ನದಿದ್ದರೆ ನಾವೂ ತಿನ್ನುವುದಿಲ್ಲ ಎಂದು ಹೇಳಿಬಿಟ್ಟೆವು. ಆದರೆ ಈಗ ಆತನ ಹುಟ್ಟುಹಬ್ಬದ ಕೇಕ್ ಅಂತಲ್ಲ, ತಿನ್ನುವ ವಸ್ತುವೊಂದಿದೆ ಅಂದುಕೊಂಡು ತಿಂದು ಮುಗಿಸೋಣ ಎನ್ನುತ್ತಾ ಕೇಕ್ ಕೊಯ್ದು ಎಲ್ಲರಿಗೂ ಹಂಚಿದ. ಈ ಘಟನೆಯಿಂದಾಗಿ ನಮ್ಮ ಸ್ನೇಹಿತರ ವಲಯದಲ್ಲಿ ಕೇಕ್ ತಂದು ಹುಟ್ಟುಹಬ್ಬವನ್ನಾಚರಿಸುವ ಸಂಪ್ರದಾಯ ನಿಂತೇ ಹೋಯಿತು.

ಹೀಗೆ ಉನ್ನತ ಆದರ್ಶಗಳನ್ನು ತಿಳಿದಿದ್ದರೂ ವಾಸ್ತವ ಬದುಕಿನಲ್ಲಿ ಎಷ್ಟರ ಮಟ್ಟಿಗೆ ಅವುಗಳನ್ನು ಅನುಸರಿಬೇಕು ಎಂಬುದರ ಬಗ್ಗೆ ಕಲ್ಪನೆ ಅನೇಕರ ಇಂತಹ ವ್ಯವಹಾರಗಳಿಂದ ತಿಳಿದುಬರುತ್ತದೆ. ಈ ವಿಚಾರಕ್ಕೆ ಪೂರಕವಾಗಿ ತತ್ಕ್ಷಣದಲ್ಲಿ ನೆನಪಾದ ಘಟನೆಗಳನ್ನು ಉದಾಹರಿಸಿದೆ ಅಷ್ಟೇ.

ಸೋಮವಾರ, ಜೂನ್ 8, 2020

देवालये भोजनम् ।



शृङ्गेर्याम् अध्ययनावसरे अतीव सन्तोषं(तदा वयं दुःखदायकम् इत्यपि चिन्तयामः स्म) जनयति स्म देवालयभोजनम् । आरम्भिकेषु त्रिचतुरवर्षेषु प्रतिदिनं मध्याह्ने देवालयस्यैव भोजनं करोमि स्म । सोमवासरतः शुक्रवासरपर्यन्तं यदा विद्यालये कक्ष्याः चलन्ति, तदानीं तु देवालयात् अन्नम्, सारः क्वथितश्च विद्यालयं प्रति एव प्रेष्यते स्म । शनिभानुवासरयोः रात्रौ च इयं व्यवस्था नासीत् ।

विद्यालयः देवालयतः किलोमीटर् त्रयपरिमिते दूरे अस्ति । प्रथमवर्षे सायङ्काले अहं प्रथमदीक्षाकक्ष्यां गच्छामि स्म । सा च कक्ष्या देवालयस्य पार्श्वे एव चलति स्म । सायं सार्धपञ्चवादनतः सप्तवादनपर्यन्तं कक्ष्या आसीत् । सप्तवादने साक्षात् मन्दिरं प्रविश्य शारदाम्बायाः दर्शनं कृत्वा सपादसप्तवादने भोजनारम्भे प्रथमपङ्क्तौ प्रथमे स्थाने मित्रैः सह भवामि स्म । प्रथमदीक्षाकक्ष्यायाः समाप्त्यनन्तरं तु रात्रौ मन्दिरे भोजनं विरलतया करोमि स्म ।
 
भोजनार्थं समित्रं मन्दिरं प्रस्थितः अहम् ।
प्रतिशनिवासरं भानुवासरं च मध्याह्ने भोजनार्थं मन्दिरं गच्छामः स्म । गमनसमये आनन्देन पद्भ्यां गमनं, देवालये आकण्ठं भोजनं, ततः बस् यानेन प्रत्यागमनम् इत्येवं क्रमः आसीत् । गमनावसरे सूर्यस्य प्रखरे आतपे गणशः विद्यार्थीनां गमनं भवति स्म । मन्दिरगमनं तु विनीतवेषेणैव भवति स्म इति कृत्वा वेष्टिधारिणां गणाः मार्गेषु राराजन्ते स्म । मित्रैः सह मन्दिरगमनम् इत्येषः अंशः आनन्ददायकः आसीत् । छात्रावासतः प्रस्थीयते चेत् मन्दिरपर्यन्तं विविधाः घटनाः स्मरन्तः चलामः स्म ।

परन्तु त्रिचतुरवर्षाणाम् अनन्तरं मन्दिरगमनस्य अभ्यासः बहुभिः परित्यक्तः । स्वयम्पाके रुचिः आगता आसीत् । अन्यच्च मन्दिरपर्यन्तं यत् किलोमीटर्त्रयपरिमितं दूरम् अस्ति तदेव महद्दूरायते स्म अनेकेषाम् । तथापि त्रिचतुराणां गणः (यत्र अहमपि अन्तर्भूतः) प्रतिदिनं मन्दिरं गच्छति स्म ।

अधुना तु छात्रावासतः भोक्तुं मन्दिरगन्तारः न्यूनाः जाताः । तत्रापि पादाभ्यां गमनं तु न कुर्वन्त्येव इति वार्ता श्रुता । तुङ्गायां यथा नूतनं जलं प्रवहति तथा छात्राणां मनस्थितिरपि नूतना भवति । इदानीन्तनाः छात्राः प्रतिदिनं मन्दिरं प्रति गमनागमनकार्यं मूर्खकार्यमिति मन्येरन् । तथापि तस्य आनन्दं ये अनुभूतवन्तः ते एव जानन्ति ।

ಗುರುವಾರ, ಜೂನ್ 4, 2020

ಮಂಗ ಮನೆಯಲ್ಲೇ ಇದ್ದಾನೆ



ಪಿ.ಎಚ್.ಡಿ  ಪದವೀಧರರಾಗಿ ಸಮಾಜದಲ್ಲಿ ಜ್ಞಾನಿಗಳೆಂದು ಗುರುತಿಸಿಕೊಂಡರೂ ಅನೇಕ ಉಪನ್ಯಾಸಕರು ತಮ್ಮ ಸಣ್ಣ ಬುದ್ಧಿಯನ್ನು ಬಿಟ್ಟಿರುವುದಿಲ್ಲ. ಅನೇಕ ಬಾರಿ ಪ್ರೊ. ಎಂಬ ಅಕ್ಷರವನ್ನು ಹೆಸರಿನ ಹಿಂದೆ ಅಂಟಿಸಿಕೊಂಡ ಪ್ರೊಫೆಸರ್ ಗಳಿಗಿಂತಲೂ ಸಣ್ಣ ಪುಟ್ಟ ಕೆಲಸಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವ ಪ್ರೊಪ್ರೈಟರ್ಗಳಳೇ ಸಮಾಜದಲ್ಲಿ ಗೌರವಯುತವಾಗಿ ಬಾಳುತ್ತಿರುತ್ತಾರೆ. (ಅವರ ಹೆಸರಿನ ಹಿಂದೆಯೂ ಪ್ರೊಪ್ರೈಟರ್ ಎಂಬರ್ಥದಲ್ಲಿ ಪ್ರೊ. ಎಂಬ ಅಕ್ಷರ ಇರುತ್ತದೆ) ವಿಶ್ವವಿದ್ಯಾಲಯಗಳಲ್ಲಂತೂ ಪ್ರೊಫೆಸರ್ ಗಳ ನಡುವೆ ಪರಸ್ಪರ ಕಲಹಗಳಾಗುವುದು ಸಹಜ. ಉಪನ್ಯಾಸಕರ ಮಧ್ಯದಲ್ಲಿ ಪರಸ್ಪರ ಕಲಹಗಳಿಲ್ಲದ ವಿಶ್ವವಿದ್ಯಾಲಯವೇ ಇಲ್ಲ ಎಂದರೂ ತಪ್ಪಲ್ಲ.  ಮರಣಂ ಪ್ರಕೃತಿಃ ಶರೀರಿಣಾಂ ವಿಕೃತಿರ್ಜೀವಿತಮುಚ್ಯತೇ ಬುಧೈಃ ಎಂಬ ಕಾಲಿದಾಸನ ಮಾತಿನಂತೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕರುಗಳಲ್ಲಿ ಕಲಹವೇ ಪ್ರಕೃತಿ. ಸಾಮರಸ್ಯವೇ ವಿಕೃತಿ.

ಎಲ್ಲಾ ವಿದ್ಯಾಲಯಗಳಲ್ಲಿರುವಂತೆಯೇ ನಮ್ಮ ವಿದ್ಯಾಲಯದಲ್ಲೂ ಇಬ್ಬರು ಅಧ್ಯಾಪಕರ ಮಧ್ಯೆ ಜಗಳವಿತ್ತು. ಎಷ್ಟರ ಮಟ್ಟಿಗೆಂದರೆ ವಿದ್ಯಾರ್ಥಿಗಳ ಎದುರಲ್ಲಿಯೇ ಪರಸ್ಪರರ ನಿಂದೆಯೂ ನಡೆಯುತ್ತಿತ್ತು. (ಗುರುವೆಂಬ ಜವಾಬ್ದಾರಿಯುತ ಸ್ಥಾನದಲ್ಲಿದ್ದೇವೆ ಎಂಬ ಕಾರಣದಿಂದ ಅವಾಚ್ಯ ಶಬ್ದಗಳ ಬಳಕೆ ಅಷ್ಟಾಗಿ ಆಗುತ್ತಿರಲಿಲ್ಲ.) ವಿದ್ಯಾರ್ಥಿಯಾಗಿ ನಾನು ಇಬ್ಬರಿಗೂ ಪರಿಚಿತ. ಆದರೆ ಇಬ್ಬರೂ ನನಗೆ ಪಾಠವನ್ನು ಬೋಧಿಸುತ್ತಿರಲಿಲ್ಲವಾದ್ದರಿಂದ ನಾನವರ ಸಾಕ್ಷಾತ್ ಶಿಷ್ಯನಾಗಿರಲಿಲ್ಲ. ಎಲ್ಲಾ ಅಧ್ಯಾಪಕರಂತೆ ಈ ಇಬ್ಬರು ಅಧ್ಯಾಪಕರೂ ನನ್ನನ್ನು ಅಕ್ಕರೆಯಿಂದ ಕಾಣುತ್ತಿದ್ದರು.

ಹಾವು ಮುಂಗುಸಿಯಂತಿದ್ದ ಪ್ರಾಧ್ಯಾಪಕರಿಬ್ಬರ ಮನೆಗಳೂ ಅಕ್ಕಪಕ್ಕದಲ್ಲಿದ್ದವು. ಬಹುಶಃ ಮನೆಯ ಗಡಿ ವಿಚಾರವಾಗಿಯೇ ಜಗಳ ತಾರಕಕ್ಕೇರಿತ್ತು. ಒಂದು ದಿನ  ಒಬ್ಬರ ಹೆಂಡತಿ-ಮಕ್ಕಳು ಊರಿನಲ್ಲಿರಲಿಲ್ಲ. ಅವರ ಮನೆಯಲ್ಲಿ ಹಾಲು ಹೆಚ್ಚಾಗುತ್ತಿತ್ತು. ಪ್ರತಿದಿನವೂ ಹಳ್ಳಿಯ ಮನೆಯೊಂದರಿಂದ ಅವರು ಹಾಲನ್ನು ಕೊಳ್ಳುತ್ತಿದ್ದುದರಿಂದ ಕಡಿಮೆ ಹಾಲನ್ನು ಕೊಳ್ಳುವುದೂ ಸಾಧ್ಯವಾಗುತ್ತಿರಲಿಲ್ಲ. (ಹೆಂಡತಿ ಮಕ್ಕಳು ಊರಿಗೆ ಹೋದಾಗ ಕಡಿಮೆ ಹಾಲನ್ನು ಕೊಂಡರೆ ಹಾಲು ಮಾರುವವರು ಹೆಚ್ಚಾದ ಹಾಲನ್ನು ಏನು ಮಾಡಬೇಕು? ಆದ್ದರಿಂದ ಪ್ರತಿದಿನ ಕೊಂಡುಕೊಳ್ಳುವಷ್ಟೇ ಹಾಲನ್ನು ಕೊಂಡುಕೊಳ್ಳುತ್ತಿದ್ದರು.) ಅವರ ಮನೆ ನನ್ನ ರೂಮಿನಿಂದ ಸುಮಾರು 1 ಕಿಲೋಮೀಟರ್ ದೂರದಲ್ಲಿತ್ತು.

ನಾನು ಮಿತ್ರರೊಂದಿಗೆ ಸೇರಿ ಅಡುಗೆ ಮಾಡಿಕೊಳ್ಳುತ್ತಿದ್ದೆ. ಇದನ್ನರಿತಿದ್ದ ಪ್ರಾಧ್ಯಾಪಕರು ಮನೆಗೆ ಹೋಗುವಾಗ ನನ್ನನ್ನು ಕರೆದರು. ಹೆಂಡತಿ ಮಕ್ಕಳು ಊರಲ್ಲಿಲ್ಲ. ಕೊಂಡುಕೊಂಡ ಹಾಲು ನನಗೆ ಹೆಚ್ಚಾಗುತ್ತದೆ. ನಿನಗೆ ಸ್ವಲ್ಪ ಕೊಡುತ್ತೇನೆ. ಗಾಡಿ ಹತ್ತು. ಮನೆಗೆ ಬಾ ಎಂದು ಕರೆದರು. ಭೋಜ್ಯವಸ್ತುಗಳನ್ನು ಉಚಿತವಾಗಿ ಕೊಡುತ್ತೇನೆಂದರೆ ಸ್ವಯಂಪಾಕಿಗಳಾದ ಬ್ರಹ್ಮಚಾರಿಗಳು ತಕ್ಷಣವೇ ಕೈಚಾಚುತ್ತಾರೆ. ಮರುಮಾತನಾಡದೇ ಉಟ್ಟಬಟ್ಟೆಯಲ್ಲೇ ಬೈಕನ್ನೇರಿದೆ.

ಬೈಕಿನಲ್ಲಿ ಹೋಗುವ ಹಾದಿಯಲ್ಲಿ ಪರಸ್ಪರರ ಜಗಳದ ವಿಚಾರವನ್ನು ಅವರೇ ಪ್ರಸ್ತಾವಿಸಿದರು. ನಮ್ಮಿಬ್ಬರ ಮಧ್ಯದಲ್ಲಿ  ಜಗಳವಿದೆ ಎಂಬ ವಿಚಾರ ನಿನಗೂ ತಿಳಿದಿದೆ. ನೀನು ನಮ್ಮ ಮನೆಗೆ ಬರುತ್ತಿದ್ದೀ ಎಂಬ ವಿಷಯದ ಬಗ್ಗೆ ಅಳುಕುವ ಅಗತ್ಯವಿಲ್ಲ.  ನನ್ನ ಮನೆಗೆ ನೀನು ಬಂದೆ ಎಂಬ ಕಾರಣಕ್ಕಾಗಿ ನಿನ್ನ ವಿಷಯದಲ್ಲಿ ಕೇಡು ಬಗೆಯುವ ಮನಸ್ಸು  ಅವರಿಗಾದರೂ ಅದು ಸಾಧ್ಯವಿಲ್ಲ. ಅಲ್ಲದೇ ಅವರು ನಿನ್ನ ವಿಷಯದ ಪ್ರಾಧ್ಯಾಪಕರೂ ಅಲ್ಲ. ಆದ್ದರಿಂದ ನೀನು ಹೆದರುವ ಅವಶ್ಯಕತೆಯಿಲ್ಲ ಎಂಬ ವಾಕ್ಯಗಳನ್ನು ನಿರಂತರವಾಗಿ ಹೇಳುತ್ತಿದ್ದರು. ನನಗಂತೂ ಎಳ್ಳಷ್ಟೂ ಹೆದರಿಕೆಯಿರಲಿಲ್ಲ. ಒಂದು ವೇಳೆ ಮನೆಯ ಅಂಗಳದಲ್ಲಿ ಮತ್ತೊಬ್ಬ ಪ್ರಾಧ್ಯಾಪಕರು ಕಂಡರೆ ಅವರ ಮನೆಗೂ ಭೇಟಿಕೊಟ್ಟು ಚಹಾ-ತಿಂಡಿಗಳನ್ನು ತಿಂದು ಬರಬಹುದು ಎಂಬ ಯೋಚನೆಯೂ ಇತ್ತು.

ಇಷ್ಟನ್ನೆಲ್ಲಾ ನನಗೆ ಬೋಧಿಸುತ್ತಿರುವಾಗ ಅವರ ಮನೆ ಬಂದೇ ಬಿಟ್ಟಿತು. ಮಳೆಗಾಲದ ದಿನವಾದ್ದರಿಂದ ಅಂಗಳದಲ್ಲಿ ಕೆಸರಿತ್ತು. ಪ್ರಾಧ್ಯಾಪಕರು ತಮ್ಮ ಬೈಕನ್ನು ನೂರು ಮೀಟರ್ ದೂರದಲ್ಲೇ ನಿಲ್ಲಿಸಿ ಮನೆಗೆ ಹೋಗುತ್ತಿದ್ದರು. ಹೀಗೆ ಹೋಗುವಾಗ ವೈರಿ ಪ್ರಾಧ್ಯಾಪಕರ ಮನೆಯ ಮುಂಭಾಗದಿಂದ ಹಾದು ಹೋಗಬೇಕು. ಇಷ್ಟು ಹೊತ್ತು ನನ್ನಲ್ಲಿ ಧೈರ್ಯ ತುಂಬಿದ ಪ್ರಾಧ್ಯಾಪಕರು ತಮ್ಮ ವೈರಿಯ ಬೈಕನ್ನು ಕಂಡಕೂಡಲೇ ಮಾತಿನ ವರಸೆಯನ್ನೇ ಬದಲಾಯಿಸಿದರು. ಇಲ್ಲಿ ನೋಡು; ಅವನ ಬೈಕ್ ಉಂಟು. ಮಂಗ ಮನೆಯಲ್ಲೇ  ಇದ್ದಾನೆ. (ಮಂಗ ಎನ್ನುವ ಸಂಬೋಧನೆ ಶತ್ರುಪ್ರಾಧ್ಯಾಪಕರಿಗೆ) ನೀನು ಇಲ್ಲಿಯೇ ನಿಲ್ಲು. ನಾನು ಹಾಲು ತಂದುಕೊಡ್ತೇನೆ ನೀನು ನನ್ನ ಮನೆಗೆ ಬಂದದ್ದು ಅವನಿಗೆ ಗೊತ್ತಾಗುವುದು ಬೇಡ ಎಂದರು. ನನಗಿಂತ ಹೆಚ್ಚು ಅವರೇ ಹೆದರಿದ್ದಾರೆ ಎಂದು ನಗು ಬಂದರೂ ನನ್ನಿಂದಾಗಿ ವಿದ್ಯಾರ್ಥಿಯೊಬ್ಬನಿಗೆ ತೊಂದರೆಯಾಗಬಾರದು ಎಂಬ ಕಾಳಜಿಯನ್ನು ಕಂಡು ಸಂತೋಷವೂ ಆಯಿತು. ತತ್ಕ್ಷಣವೇ ಅವರು ಇದ್ರೆ ನಾನ್ಯಾಕೆ ಹೆದರಬೇಕು? ನಾನು ಬರ್ತೇನೆ ಮನೆಗೇ ಹೋಗ್ವಾ ಅಂದಾಗ ಪ್ರಾಧ್ಯಾಪಕರಿಗೂ ತಮ್ಮ ಮಾತುಗಳಲ್ಲಿನ ವೈರುಧ್ಯ ಅರ್ಥವಾಯಿತು. ಹೌದು; ನೀನ್ಯಾಕೆ ಹೆದರಬೇಕು. ಬಾ ಎನ್ನುತ್ತಾ ಮನೆಗೆ ಕರೆದೊಯ್ದರು.

ಸೋಮವಾರ, ಜೂನ್ 1, 2020

दाद्दाशि कसो से रे?


मे हैस्कूलांतु सता झाल्लि घटना । मज्झे सेज्झोळा जेवु झाय्वे सल । तयि रात्ति सत्यनारायणव्रत म्हणि साव्डसे । तेढ्ला घरांशि सि.एफ्.एल् बल्ब नत्ले । 60 वोल्टाचे बल्ब । वोल्टेज अव्वल नत्लते लाटणातित्लोच् उज्जोडु । ते दिव्सुयि तसोच् उज्जोडु सलो बहुशः । अम्चे घर्ठि मे दद्दासव झेवु गेल्लसल । अज्जोबा चूरु अद्दिच् गेल्लोसलो । अज्जोबाला आर्तच् दोळेंच आपरेशन् झालसल । दोळे समान् दिस्सन्नत्ले ।

वठारांतु पंक्ति घल्नि फळाराला बेस्ता एक्मकांचि पाठि लग्गवेसर्खि ठाई घल्सति । ते दिव्सुयि तसिच् पंक्ति घल्लिसलि । मज्झि पाठि अज्जोबाला लाग्गत्सलि । मे अज्जोबा म्हणि कळोनि पाट्ठिला पाठि जोरिन लाग्गाय्लि । अज्जोबान पर्तुनि माला पळाय्लन । माला पळाय्तक्षणि अज्जोबान- क्षेमकारे दद्दाशि कसो से, उट्ठुनि भोवसे न्होका म्हणि विचार्लन । प्रश्नु आय्कुनि माला आश्चर्य झाल ।

मे नि अज्जोबा घाराशि कन्नड्या बोल्लसल । मज्झि मट्टिय्ये घट्टाचि म्हणि त्यासव अज्जोबा कन्नड्या बोल्लसलो । म्हण्णि आम्हि नत्तर्वईं अज्जोबाशि कन्नड्यांतुच् बोल्लसल   मे अज्जोबासन विचार्ल ಅಜ್ಜೋಬಾ ದದ್ದಾ ಇಲ್ಲೇ ಇದ್ದಾರಲ್ಲೋ. ಏನಾಗಿದೆ ದದ್ದನಿಗೆ? (दद्दा एठाच् से न्होका कित झालसे दद्दाला? ) अज्जोबाला मे सूर्यु म्हणि कळ्ळ । मे गणराजु म्हणि मनान् केल्ल म्हणि म्हळ्ळन ।

अज्जोबाचो अत्तेचो बोड्यो अनिरुद्धशेण्ड्ये म्हणि सलो । तेचो बोड्यो गणराजु । मा पक्षा 3-4 वर्खांतु मट्टो । तो नि मे पळाव्वे एक्सर्ख स म्हणि आव्घि म्हण्सति । गणराजण्णचे दद्दालाशि तेढ्ला हुषारि नल्ति । म्हण्णि अज्जोबान तस विचार्लेल । गणराजण्णा 10 क्लासावेरी हास्टेलांतु सल्लो । मे गावांतुच् सल । म्हण्णि तेढ्ला तो कईतरि गावाला आय्लोते सूर्यु कितो समाचारु म्हणि तेसन विचार्सलि । 10 क्लासा उप्रांत मे गाविठि बाहेरु गेल्ल । तो गावाला आय्लो । ते उप्रांत मे गेल्लते मालाच् कितरे गणराजा म्हणि बोल्लाय्सति । प्रायि झाल्लेय् अस विचारवेच सुमार्दा अनुभवु झालोसे । तेंतूई मज्झे अज्जोबानच् विचार्लेल कक्कई विस्रन्नाहि ।
माज्झो फोटो
गणराजण्णा
यदा प्रौढशालायां पठामि स्म तदानीं प्रवृत्ता घटना एषा । ग्रामे मम प्रतिवेशिनः गृहे काचित् पूजा आसीत् । सा च पूजा रात्रौ आसीत् । तदानीन्तनकाले सि.एल्.एफ् गोलदीपाः न आसन् । सामान्याः 60 वोल्ट्युताः गोलदीपाः आसन् । ते तु रात्रौ लघुदीपक इव प्रकाशं यच्छन्ति स्म । प्रायः पूजादिने अपि तादृशः एव दीपः तत्र आसीदिति स्मरामि । अहं पित्रा सह पूजार्थं गतवान् । मम पितामहः पूर्वमेव तत्र गतवान् आसीत् । पितामहस्य नेत्रचिकित्सा सद्यः एव जाता आसीत् । अतः तस्य दृष्टिः क्षीणा आसीत् ।
ग्रामेषु रात्रौ अल्पाहारसमये परस्परं पृष्ठानि लग्नानि यथा भवेयुः तथा उपवेशनव्यवस्था क्रियते । तस्मिन् दिने अपि व्यवस्था तथैव आसीत् । मम पितामहस्य पृष्ठम् मां स्पृशति स्म । पितामहः एव पृष्ठतः अस्ति इति कृत्वा अहं सरभसं पृष्ठं घट्टितवान् । पितामहः माम् अपश्यत् । अनुक्षणम् सः कुशलं वा ? पिता कथम् अस्ति? सः स्वयं चलितुं शक्नोति किल? इत्यपृच्छत् । प्रश्नश्रवणेन अहं विस्मितः ।

अहं गृहे पितामहेन सह कन्नडेन भाषे स्म । मम पितामही मलेनाडुप्रदेशीया इति तया सह पितामहः कन्नडेन भाषते स्म । वयं पौत्राः अपि पितामहेन सह कन्नडेनैव भाषामहे स्म । अतः अहं पितामम् कन्नडेन अपृच्छम् ಅಜ್ಜೋಬಾ! ದದ್ದಾ ಇಲ್ಲೇ ಇದ್ದಾರಲ್ಲೋ. ಏನಾಗಿದೆ ದದ್ದನಿಗೆ? (पितामह! पिता अत्रैव अस्ति किल किम् अभवत् तस्य इति? ) पितामहः अहं सूर्यः इति अवगतवान् ।

पितामहस्य पितृभगिन्याः पुत्रः अनिरुद्धशेण्डे इति आसीत् । तस्य पुत्रः गणराजः । सः मदपेक्षया 3-4 वर्षेभ्यः ज्येष्ठः । आवाम् समानरूपिणौ इति अनेके कथयन्ति । गणराजस्य पितुः अनारोग्यम् आसीत् तेषु दिवसेषु । अतः पितामहः एवम् अपृच्छत् । गणराजस्तु दशमकक्ष्यापर्यन्तं छात्रावासे आसीत् । अहं ग्रामे आसम् । तदानीं सः ग्रामम् आगच्छति चेत् किं भो सूर्य! कः विशेषः इति जनाः पृच्छन्ति स्म । दशमकक्ष्यायाः अनन्तरम् अहं ग्रामाद्बहिः आगतः । सः ग्रामे एव अस्ति । अतः अधुना अहं ग्रामं गच्छामि चेत् किं भो गणराज! इति मां सम्भाषयन्ति । वयोवृद्धाः प्रायेण एतादृशं व्यवहारं कुर्वन्तीत्यनुभवः बहुधा आवयोः अस्ति । तत्रापि मम पितामहेन एव कृतः एतादृशः प्रश्नः न  कदापि विस्मर्यते ।



ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...