ಸೋಮವಾರ, ಫೆಬ್ರವರಿ 25, 2019

ನಿಮ್ಮ ಮದುವೆಯಾಯಿತಲ್ಲ, ಅಭಿನಂದನೆಗಳು

2017-2018 ನೆಯ ಶೈಕ್ಷಣಿಕ ವರ್ಷದಲ್ಲಿ ಪಿ.ಎಚ್.ಡಿ ಕೋರ್ಸ್ ವರ್ಕ್ ನಿಮಿತ್ತವಾಗಿ ಆರು ತಿಂಗಳುಗಳ ಕಾಲ ಪ್ರಯಾಗದಲ್ಲಿ ವಾಸವಾಗಿದ್ದೆ. ಐದು ಮಂದಿ ಸ್ನೇಹಿತರ ಜೊತೆ ನಿವಾಸವಿತ್ತು. ದಕ್ಷಿಣಭಾರತದಿಂದ ಹಿಂದೀಭಾಷಾಕ್ಷೇತ್ರಕ್ಕೆ ತೆರಳಿದ್ದ ನಾವು ಹಿಂದಿಯಲ್ಲಿ ವ್ಯವಹರಿಸುವುದು ಅನಿವಾರ್ಯವಾಗಿತ್ತು. ನನ್ನೊಂದಿಗಿದ್ದ ಮಿತ್ರರಿಗಿಂತಲೂ ಚೆನ್ನಾಗಿ ಹಿಂದಿಯಲ್ಲಿ ನಾನು ವ್ಯವಹರಿಸುತ್ತಿದ್ದೆ. ಹಾಳೂರಿಗೆ ಉಳಿದವನೇ ಗೌಡ ಎಂಬಂತೆ ಅನೇಕ ಕಡೆಗಳಲ್ಲಿ ಹಿಂದಿಯಲ್ಲಿ ವ್ಯವಹರಿಸುವ ಕೆಲಸವನ್ನು ನನಗೇ ವಹಿಸುತ್ತಿದ್ದರು. ಪ್ರಯಾಗದ ಸುತ್ತಮುತ್ತಲಿನ ಪ್ರೇಕ್ಷಣೀಯಸ್ಥಳಗಳ ಸಂದರ್ಶನವನ್ನೂ ನಮ್ಮ ಕೋರ್ಸ್ ವರ್ಕ್ ನ ಸಮಯದಲ್ಲಿ ಪೂರೈಸಿದ್ದೆವು. ನನ್ನೊಂದಿಗೆ ಮುರಳೀಕೃಷ್ಣ ಎಂಬ ಗೆಳೆಯನಿದ್ದ. ಕರ್ನಾಟಕ ಮೂಲದ ಸುಬ್ರಹ್ಮಣ್ಯ ಭಾರತೀ ಕೋಣಾಲೆ ಎಂಬುವವರು ಆತನಿಗೆ ಪರಿಚಿತರಾಗಿದ್ದರು. ಅನೇಕ ವರ್ಷಗಳ ಕಾಲ ಬಿಹಾರದಲ್ಲಿ ವಾಸವಾಗಿದ್ದ ಅವರು ಉತ್ತರ ಭಾರತದಲ್ಲಿನ ಪ್ರೇಕ್ಷಣೀಯ ಸ್ಥಳಗಳ ತಿರುಗಾಟಕ್ಕೆ ನಮಗೆ ಮಾರ್ಗದರ್ಶಕರಂತಿದ್ದರು. ಚಿತ್ರಕೂಟದಲ್ಲಿ ನಮ್ಮ ವಾಸಾದಿಗಳ ವ್ಯವಸ್ಥೆಗೆ ಸಂಗಮಲಾಲ್ ಶುಕ್ಲ ಎನ್ನುವವರ ದೂರವಾಣೀ ಸಂಖ್ಯೆಯನ್ನು ನೀಡಿದ್ದರು. ಅಲ್ಲದೇ ನನ್ನ ಪರಿಚಿತರಾಗಿರುವ ಮುರಳೀಕೃಷ್ಣ ಎಂಬುವವರು ನಿಮಗೆ ದೂರವಾಣಿಕರೆಯನ್ನು ಮಾಡಲಿದ್ದಾರೆ. ಅವರಿಗೆ ಚಿತ್ರಕೂಟದಲ್ಲಿ ವ್ಯವಸ್ಥೆ ಮಾಡಿ ಎಂದು  ಸಂಗಮಲಾಲ್ ಶುಕ್ಲ ಅವರಿಗೆ ದೂರವಾಣಿ ಮಾಡಿ ಸೂಚಿಸಿದ್ದರು. ಚಿತ್ರಕೂಟಕ್ಕೆ ತೆರಳುವ ಒಂದು ದಿನದ ಮೊದಲು ಸಂಗಮಲಾಲ್ ಶುಕ್ಲ ಅವರಿಗೆ ಫೋನ್ ಮಾಡಬೇಕೆಂದು ಚಿಂತಿಸಿದೆವು. ಮೊದಲೇ ಹೇಳಿದಂತೆ ಅವರೊಂದಿಗೆ ಹಿಂದಿಯಲ್ಲಿ ಮಾತನಾಡುವ ಜವಾಬ್ದಾರಿ ನನ್ನದಾಗಿತ್ತು. ಸುಬ್ರಹ್ಮಣ್ಯ ಭಾರತೀಯವರು ಮುರಳೀಕೃಷ್ಣ ಫೋನ್ ಮಾಡುತ್ತಾನೆ ಎಂದು ಹೇಳಿರುವುದರಿಂದ ನಾನು ಫೋನ್ ಮಾಡುವುದು ಸರಿಯಲ್ಲ ಎಂದು ವಾದಿಸಿದೆ. ಆದರೂ "ನನಗೆ ಹಿಂದಿ ಅರ್ಥಮಾಡಿಕೊಳ್ಳುವುದು ಕಷ್ಟವಾಗುತ್ತದೆ. ಅಲ್ಲದೇ ಸಂಗಮಲಾಲ್ ಶುಕ್ಲ ನನ್ನ ಮುಖವನ್ನೂ ನೋಡಿಲ್ಲ. ಆದ್ದರಿಂದ ನಾನೇ ಮುರಳೀಕೃಷ್ಣ ಎಂದು ಹೇಳಿ ಮಾತನಾಡು" ಎಂದು ನನ್ನ ಮನವೊಲಿಸಿದ. ಆಪತ್ಕಾಲದಲ್ಲಿ ಯಾರಿಗೂ ತೊಂದರೆಯಾಗದಂತಹ ಸುಳ್ಳನ್ನು ನುಡಿಯುವುದು ಅಪರಾಧವೇನಲ್ಲ ಎಂದು ಭಾವಿಸಿದ ನಾನು "ನಾನೇ ಮುರಳೀಕೃಷ್ಣ" ಎಂದು ಸುಳ್ಳನ್ನಾಡಿದೆ. ಚಿತ್ರಕೂಟಕ್ಕೆ ಹೋದಾಗ ಸಂಪೂರ್ಣದಿನವನ್ನು ಅವರೊಂದಿಗೇ ಕಳೆದಿದ್ದೆವು. ಮುಖಪರಿಚಯ ಮಾಡಿಕೊಳ್ಳುವಾಗ ನಾನು ಸೂರ್ಯ ಎಂದು ನಿಜವನ್ನೇ ಹೇಳಿದ್ದೆ. ಆದರೆ ಫೋನ್ ನಲ್ಲಿ ಮಾತನಾಡುವಾಗ ನಾನು ಮುರಳೀಕೃಷ್ಣ ಎಂದು ಹೇಳುತ್ತಿದ್ದೆ. ಅವರು ನನ್ನ ಫೋನ್ ನಂಬರ್ ಅನ್ನು ಮುರಳಿಕೃಷ್ಣ ಎಂದೇ ಸೇವ್ ಮಾಡಿಕೊಂಡಿದ್ದರು. ಪ್ರಯಾಗದಿಂದ ಮರಳಿದ ನಂತರವೂ ನಾಲ್ಕೈದು ಬಾರಿ ಫೋನ್ ಮಾಡಿದ್ದರು.

 2019ರ ಫೆಬ್ರವರಿ 14 ರಂದು ಮುರಳೀಕೃಷ್ಣನ ಮದುವೆಯಾಯಿತು. ಮದುವೆಯಾಗುವ ವಿಷಯವನ್ನು ಬಹುಶಃ ಮುರಳಿಕೃಷ್ಣ ಸಂಗಮಲಾಲ್ ಶುಕ್ಲಾ ಅವರಿಗೆ ತಿಳಿಸಿದ್ದ. ಆತನ ಮದುವೆಯಾಗಿ ಒಂದೆರಡು ದಿನಗಳ ನಂತರ ಸಂಗಮಲಾಲ್ ಶುಕ್ಲ ಅವರಿಂದ ದೂರವಾಣಿ ಕರೆ ಬಂತು. ಪ್ರಯಾಗದಿಂದ ಮರಳಿದ ನಂತರ ಪ್ರತಿ ಬಾರಿ ಫೋನ್ ಮಾಡಿದಾಗಲೂ ಸಂಗಮಲಾಲ್ ಶುಕ್ಲ ನಮಸ್ಕಾರ್ ಜೀ ಕ್ಯಾ ಹಾಲ್ ಹೇ ಆಪ್ ಕಾ ಎಂದು ಸಂಭಾಷಣೆಗೆ ತೊಡಗುತ್ತಿದ್ದರು. ಮುರಳಿಜೀ ಎಂದಾಗಲೀ ಸೂರ್ಯಜೀ ಎಂದಾಗಲೀ ಸಂಬೋಧಿಸುತ್ತಿರಲ್ಲ. ಆದ್ದರಿಂದ ನನ್ನ ಫೋನ್ ನಂಬರನ್ನು ಮುರಳಿಕೃಷ್ಣ ಎಂಬ ಹೆಸರಿನಲ್ಲಿ ಸೇವ್ ಮಾಡಿದ್ದಾರೆ ಎಂಬ ವಿಚಾರ ಮರೆತು ಹೋಗಿತ್ತು. ಈ ಬಾರಿ ಫೋನ್ ಮಾಡಿದವರು ನೇರವಾಗಿ ಬಹುತ್ ಬಧಾಯೀ ಆಪ್ ಕೋಎಂದು ನುಡಿದರು. ಏಕೆಂದು ಕೇಳಿದರೆ ನಿಮ್ಮ ಊರಿನಲ್ಲಿ ಮದುವೆಗೆ ಹುಡುಗಿ ಸಿಗುವುದೇ ಕಷ್ಟ ಎಂದು ಹೇಳುತ್ತಿದ್ದಿರಿ ಈಗ ನಿಮಗೆ ಹುಡುಗಿಯೂ ಸಿಕ್ಕಿದಳು ಮದುವೆಯೂ ಆಯಿತು. ಆದ್ದರಿಂದ ಬಧಾಯೀ ಹೇಳುತ್ತಿದ್ದೇನೆ ಎಂದು ನುಡಿದರು. ನಮ್ಮೂರಿನಲ್ಲಿ ಮದುವೆಗೆ ಹೆಣ್ಣು ಸಿಗುವುದು ಕಷ್ಟ ಎಂಬ ವಿಷಯವನ್ನು ಅವರಿಗೆ ಹೇಳಿದ್ದು, ಉತ್ತರಭಾರತದ ಅನೇಕರು ದಕ್ಷಿಣ ಭಾರತಕ್ಕೆ ತಮ್ಮ ಮಗಳನ್ನು ಮದುವೆಮಾಡಿಕೊಡಲು ಬಯಸುತ್ತಾರೆ ಎಂದು ಅವರು ಹೇಳುತ್ತಿದ್ದುದೆಲ್ಲಾ ನೆನಪಾಯಿತು. ಆದರೂ ನನ್ನ ಮದುವೆ ನನಗೇ ಗೊತ್ತಿಲ್ಲದೇ ಆಗಿಹೋಯಿತೇ ಎಂದು ಕಳವಳವಾಯಿತು. ಮಾತನ್ನು ಮುಂದುವರಿಸುತ್ತಾ ಮುರಳೀಜೀ ಆಪ್ ಕೋ ಪತ್ನೀ ಕೇ ಸಾಥ್ ಏಕ್ ಬಾರ್ ಚಿತ್ರಕೂಟ್ ಆನಾ ಎಂದಾಗ ಎಲ್ಲವೂ ನೆನಪಾಗಿ ಗೊಂದಲ ದೂರವಾಯಿತು. ನಾನು ಮುರಳಿ ಅಲ್ಲ ಆತನ ಗೆಳೆಯ ಸೂರ್ಯ ಎಂದು ಹೇಳಿ ಮುರಳೀಕೃಷ್ಣನ ಫೋನ್ ನಂಬರ್ ಕಳುಹಿಸಿದೆ.


ಬುಧವಾರ, ಫೆಬ್ರವರಿ 13, 2019

प्रेमदिवसः

(2018तमे वर्षे प्रेमिदिवसे रचितानि कतिचन पद्यानि)

यस्य प्रेम विफलं सः इत्थम् अनुभवेत्-💔

द्रवीभवद्धस्तगतं विलोक्य
पयोहिम! त्वां दयितोपभुङ्क्ते।
द्रवीभवन्मे हृदयं कुतः सा
न पश्यति प्रेमदिनेsपि हन्त॥

एकेन चैव बहुना तनुना गुणेन
युक्तं स्वकीयहृदये धरतीह हारम्।
प्रीत्यादरादिबहुभिर्गुणराशिभिर्यो
युक्तोस्त्ययं, धरति तं न तदस्ति चित्रम्॥

पृष्ठे गतान्मुहुरपि स्वकरेण केशा
नाकृष्य या स्वहृदये विनिवेष्टुकामा।
योsयं पुरः प्रतिदिनं चरतीह तं सा 
दूरीकरोति सततं किल चित्रमेतद्।

यस्य च प्रेम सफलं स इत्थं चिन्तयेत्💘💑

शम्भौ भक्त्या निशि सुविहिता जागरेत्येष कोपात्
मन्ये तीक्ष्णैः प्रहरति भृशं त्र्यम्बकारिः स्वबाणैः।
नैतद्युक्तं तव हररिपो! सायकान् संहर त्वं
प्रत्यासन्ने मदनदिवसे प्रेमिणां क्वास्ति निद्रा॥
(2018तमे वर्षे प्रेमिदिवसस्य पूर्वस्मिन् दिने महाशिवरात्रिपर्व आसीत् )

मन्मथः पञ्चभिर्बाणैर्हृदयं मम विध्यति।
हृदयस्था  प्रिया भीरुर्भीत्या न हि पलायते॥
तथापि मनसः खेदः कुतो मे वर्धते वृथा।
मन्ये स्मरः प्रियायाश्च हृदयं विध्यतीति सः॥
प्रेयसीहृदये वासाद् स्मरबाणाः स्पृशन्ति माम्।
तां च मद्धृदये वासाद्, विशिष्टं कामखेलनम्॥

2018तमे वर्षे प्रयागे वसतो मम त्वैषा स्थितिः-
अङ्गनालिङ्गनेनाङ्गभङ्गैरिङ्गितसङ्गतिः।
सङ्गिनां, सङ्गमेsङ्गं मे तरङ्गैस्सङ्गतङ्गुणि॥

ವರ್ಕ್ ಶಾಪ್ ವರವಾದಾಗ

AttachmentsThu, Jan 24, 7:42 PM


ವಿದ್ಯಾರ್ಥಿ ಜೀವನದಲ್ಲಿ ಅನೇಕ ವರ್ಕ್ ಶಾಪ್ ಗಳಲ್ಲಿ ಭಾಗವಹಿಸುವ ಯೋಗ(?) ದೊರಕಿತ್ತು. ಅನೇಕ ವರ್ಕ್ ಶಾಪ್ ಗಳನ್ನು ನೋಡಿದ್ದರಿಂದ ವರ್ಕ್ ಶಾಪ್ ಎಂದರೆ ಭವ್ಯವಾದ ಸಭೆ, ವಿದ್ವಾಂಸರ ಪರಸ್ಪರ ಹೊಗಳಿಕೆಗಳು. ೫ ನಿಮಿಷದ ಪ್ರಾರ್ಥನೆಗೆ ೫ ದಿನಗಳ ಕಾಲ ಕಠಿಣ ಅಭ್ಯಾಸ ನಡೆಸಿ ೧೦ ನಿಮಿಷಗಳ ಕಾಲ ಶ್ರುತಿ ಇತ್ಯಾದಿಗಳನ್ನು ಸೆಟ್ ಮಾಡುವುದು, ಬಂದವರಿಗೆ ಊಟ ವಸತಿಗಳ ವ್ಯವಸ್ಥೆ, ನಡುವಿನಲ್ಲಿ ಕಾಫಿ ಚಹ ತಿಂಡಿಗಳ ಸರಬರಾಜು. ಕಾರ್ಯಶಾಲೆಯ ಕೊನೆಗೆ ಕಂಡಕಂಡವರಿಗೆಲ್ಲ ಸ್ವೀಟ್ ಹಂಚುವುದು, ಮಾರನೆಯ ದಿನ ಸಂಗೋಷ್ಠಿಯಲ್ಲಿ ಕೆಲಸ ಮಾಡಿದವರಿಗೆ ಧನ್ಯವಾದಗಳನ್ನು ಹೇಳುವುದಕ್ಕಾಗಿ ಗಂಟೆಯೊಂದನ್ನು ಪೋಲು ಮಾಡುವುದು ಮೊದಲಾದುವುಗಳೇ ನೆನಪಿಗೆ ಬರುತ್ತಿದ್ದವು. ಕಾರ್ಯಶಾಲೆಯಿಂದ  ಆದ ಪ್ರಯೋಜನವೇನು ಎಂದು ಹೇಳಿದರೆ ಉತ್ತರಿಸುವುದು ಸ್ವಲ್ಪ ಕಷ್ಟವಾಗುತ್ತಿತ್ತು.

ಅನೇಕ ದಿನಗಳ ನಂತರ ಕಾರ್ಯಶಾಲೆಯೊಂದರಲ್ಲಿ ಭಾಗವಹಿಸುವ ಅವಕಾಶ ದೊರಕಿತು. ವಿಕಿಸೋರ್ಸ್ ಎಂಬ ವಿಷಯದಲ್ಲಿ ಎರಡು ದಿನಗಳ ಸಣ್ಣ ಕಾರ್ಯಶಾಲೆಯಾಗಿತ್ತು. ಸಂಸ್ಕೃತ ಭಾರತೀ ಹಾಗೂ  CIS-A2K  ಎಂಬ ಸಂಸ್ಥೆಗಳು ಜಂಟಿಯಾಗಿ ಕಾರ್ಯಶಾಲೆಯನ್ನು ಆಯೋಜಿಸಿದ್ದವು. ೨೩-೦೧-೨೦೧೯ ಹಾಗೂ ೨೪-೦೧-೨೦೧೯ ರಂದು ವಿಕಿಸೋರ್ಸ್ ಕಾರ್ಯಶಾಲೆ ನಡೆಯಿತು. ಕಾರ್ಯಶಾಲೆಯಲ್ಲಿ ಇಂಟರ್ನೆಟ್ ಆಧಾರದಲ್ಲೇ ಕೆಲಸಗಳು ನಡೆಯುವುದರಿಂದ ಬೆಂಚು ಡೆಸ್ಕುಗಳ ಬಳಿಯಲ್ಲಿ ವಿದ್ಯುತ್ ಸಂಪರ್ಕ ಅತ್ಯವಶ್ಯವಾಗಿತ್ತು. ಕಾರ್ಯಶಾಲೆಯ ಹಿಂದಿನ ದಿನ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲು ಇಬ್ಬರು 1 ಗಂಟೆ ಕೆಲಸ ಮಾಡಿದೆವು. (ಈ ಒಂದು ಗಂಟೆಯಲ್ಲೇ ಬ್ಯಾನರ್ ಕಟ್ಟುವ ಕೆಲಸವೂ ಮುಗಿದಿತ್ತು). ಕಾರ್ಯಶಾಲೆಯಲ್ಲಿ ಭಾಗವಹಿಸಲು ಬರುವವರೆಲ್ಲರೂ ಬೆಂಗಳೂರಿನವರೇ ಆದುದರಿಂದ ವಾಸವ್ಯವಸ್ಧೆಯನ್ನು ಕಲ್ಪಿಸುವ ಕೆಲಸವಿರಲಿಲ್ಲ. ಜಮಖಾನ ಹಾಸುವುದು, ಹೂಗುಚ್ಛ ಮಾಡುವುದು, ಹಣ್ಣು ತರುವುದು, ಶಾಲು ಮಡಿಚುವುದು, ನೇಮ್ ಪ್ಲೇಟ್ ಮಾಡುವುದು, ಪ್ರೋಗ್ರಾಮ್ ಲಿಸ್ಟ್ ಪ್ರಿಂಟ್ ತೆಗೆಯುವುದು ಮೊದಲಾದ ಯಾವುದೇ ವ್ಯರ್ಥ ಕಾರ್ಯಗಳಿರಲಿಲ್ಲ. ಕಾರ್ಯಶಾಲೆಯಲ್ಲಿ ತರಬೇತಿ ನೀಡಲು CIS-A2K ಸಂಸ್ಧೆಯಲ್ಲಿ ಇಂಡಿಕ್ ವಿಕಿಸೋರ್ಸ್ ನ ಸಂಯೋಜಕರಾಗಿ ಜವಾಬ್ದಾರಿಯನ್ನು ನಿರ್ವಹಿಸುತ್ರಿರುವ ಕೋಲ್ಕತ್ತಾದ  ಜಯಂತನಾಥ್ ಆಗಮಿಸಿದ್ದರು. ಸಂಪೂರ್ಣ ಕಾರ್ಯಶಾಲೆಯು ಅವರ ಮಾರ್ಗದರ್ಶನದಂತೆಯೇ ನಡೆಯಿತು.  ಮಧ್ಯಾಹ್ನ ಊಟ ಹಾಗೂ ಎರಡು ಬಾರಿ ಪಾನೀಯದ ವ್ಯವಸ್ಧೆಯಿದ್ದರೂ ಸುಗಮವಾಗಿ ನಡೆದುಹೋಯಿತು.   ಪಾನೀಯಕ್ಕಾಗಿ ಪ್ರತ್ಯೇಕವಾದ ವಿರಾಮವಿರಲಿಲ್ಲ. ಕಾರ್ಯಶಾಲೆಯ ಮಧ್ಯದಲ್ಲೇ ಮಾರ್ಗದರ್ಶಕರೂ ಪ್ರತಿಭಾಗಿಗಳೂ ಪಾನೀಯವನ್ನು ಕುಡಿಯುತ್ತಿದ್ದೆವು. ಮಾರ್ಗದರ್ಶಕರಂತೂ ಒಂದು ನಿಮಿಷವನ್ನೂ ಪೋಲು ಮಾಡದೇ ತಮಗೆ ಗೊತ್ತಿರುವ ಅಂಶಗಳನ್ನು ನಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದರು. ತಕ್ಷಣ ಅದರ ಪ್ರಯೋಗವನ್ನು ಮಾಡಿ ಅದರ ಪರಿಣಾಮವನ್ನು ನಾವು ಹೇಳಬೇಕಿತ್ತು. ಕಾರ್ಯಶಾಲೆಯ ಕೊನೆಯಲ್ಲಿ 5 ನಿಮಿಷಗಳಲ್ಲಿ ಮಾರ್ಗದರ್ಶಕರು ಹಾಗೂ ಪ್ರತಿಭಾಗಿಗಳು ಕಾರ್ಯಶಾಲೆಯ ಅನುಭವಗಳನ್ನು ಹಂಚಿಕೊಂಡೆವು. ಮುಖ್ಯವಾಗಿ 2 ದಿನಗಳ ಕಾಲ ಅಕ್ಷರಂನಲ್ಲಿ ನಡೆದ ಕಾರ್ಯಶಾಲೆಯಲ್ಲಿ ಅಕ್ಷರಂನ ದಿನನಿತ್ಯದ ಕೆಲಸಗಳಿಗೆ ಯಾವುದೇ ತೊಂದರೆಯಾಗಲಿಲ್ಲ.  ಅಕ್ಷರಂನಲ್ಲೇ ಕೆಲಸ ಮಾಡುವ ಅನೇಕರಿಗೆ ಕಾರ್ಯಶಾಲೆ ನಡೆಯಿತು ಎಂದು ತಿಳಿದಿರಲಿಕ್ಕೂ ಇಲ್ಲ. ಅಕ್ಷರಂನ ಹಿರಿಯರೊಬ್ಬರು ಅರ್ಧಗಂಟೆಗಳ ಕಾಲ ಕುಳಿತು ಕಾರ್ಯಶಾಲೆಯನ್ನು ಅವಲೋಕಿಸಿದರು. ಅವರ ಹೊಗಳಿಕೆಗೆ ಸಮಯವ್ಯಯವನ್ನೂ ಮಾಡಲಿಲ್ಲ. ಒಟ್ಟಿನಲ್ಲಿ ಹೇಳುವುದಾದರೆ ಕಾರ್ಯಶಾಲೆ ಎನ್ನುತ್ತಾ ದೈನಂದಿನ ಕಾರ್ಯಕಲಾಪಗಳನ್ನು ಬಿಟ್ಟು ಕುಣಿದಾಡಿ ಎರಡು ದಿನವನ್ನು ಹಾಳುಮಾಡಿದೆ ಎಂದು ವ್ಯಥೆಪಡುವ ಪರಿಸ್ಧಿತಿ ಉಂಟಾಗಲಿಲ್ಲ. ಎರಡು ದಿನಗಳ ಬೆಳಗ್ಗೆ 9.30 ರಿಂದ ಸಂಜೆ 5.30 ರ ತನಕ ದೈನಂದಿನ ಕಾರ್ಯಗಳಂತೆಯೇ ಕಾರ್ಯಶಾಲೆಯೂ ನಡೆದುಹೋಯಿತು.

ಎಲ್ಲಾ ವಿಷಯಗಳಲ್ಲೂ, ಎಲ್ಲಾ ಸಂಸ್ಧೆಗಳಲ್ಲೂ ಈ ತರಹದ ಕಾರ್ಯಶಾಲೆಗಳನ್ನು ಆಯೋಜಿಸುವುದು ಕಷ್ಟಸಾಧ್ಯವೇ. ಆದರೂ ಕೂಡಾ ಕಾರ್ಯಶಾಲೆಯಲ್ಲಿ ಕಾರ್ಯ ಸಿದ್ಧವಾಗುವಂತೆ ಕಾರ್ಯಶಾಲೆಗಳನ್ನು ನಡೆಸಿದರೆ ಭಾಗವಹಿಸಿದವರಿಗೆ ಸಂತೋಷ, ಆಯೋಜಕರಿಗೆ ತೃಪ್ತಿ ಸಿಗುವುದರಲ್ಲಿ ಅನುಮಾನವಿಲ್ಲ.

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...