ಶುಕ್ರವಾರ, ಮೇ 30, 2025

ಭಾರತೀಯತೆ ಶ್ರೇಷ್ಠ ಎಂಬ ಸೋಗಲಾಡಿತನ

ಭಾರತೀಯ ಸಂಸ್ಕೃತಿ ಶ್ರೇಷ್ಠ ಸಂಸ್ಕೃತಿಯಾಗಿದೆ. ಭಾರತೀಯರು ಶ್ರೇಷ್ಠ ಸಾಧಕರು ಎಂಬ ಕ್ಲೀಷೆಯನ್ನು ಪ್ರತಿದಿನವೂ ಕೇಳುತ್ತಿರುತ್ತೇವೆ. ಆದರೆ ಹೀಗೆ ಹೇಳುವವರು ಅವರ ಹೃದಯದಿಂದ ಮಾತುಗಳನ್ನು ಭಾರತೀಯತೆಯ ಶ್ರೇಷ್ಠತೆಯನ್ನು ಒಪ್ಪುತ್ತಾರೆಯೇ ಎಂದು ಕೇಳಿದರೆ ಇಲ್ಲ ಎಂದು ಉತ್ತರಿಸಬೇಕಾಗುತ್ತದೆ. ಏಕೆ ಎಂಬ ಪ್ರಶ್ನೆಗೆ ಉತ್ತರವಾಗಿ ಕೆಲವೊಂದಿಷ್ಟು ಉದಾಹರಣೆಗಳನ್ನು ನೋಡೋಣ.

ಉದಾಹರಣೆ 1- ಆರ್.ಎಸ್.ಎಸ್ ನ ಒಂದು ಬೈಠಕ್. ಭಾಷಣಮಾಡುತ್ತಿದ್ದವರು ವಯಸ್ಸಿನಿಂದಲೂ, ಅಧ್ಯಯನದಿಂದಲೂ ಅನುಭವದಿಂದಲೂ ಶ್ರೇಷ್ಠರಾದ ಒಬ್ಬ ಪ್ರಸಿದ್ಧ ಪ್ರಚಾರಕರು. ಸಂಘ ಹಾಗೂ ಸ್ವಯಂಸೇವಕ ಹೇಗೆ ಅವಿನಾಭಾವವಾಗಿ ಇರಬೇಕು ಎಂಬ ವಿಷಯವನ್ನು ಪ್ರತಿಪಾದಿಸುತ್ತಿದ್ದರು. ಉದಾಹರಣೆಗಾಗಿ ಅವರು ಕಾವ್ಯದ ಕಡೆ ಹೊರಳಿದರು. ಕಾವ್ಯವನ್ನು ಓದುತ್ತಿರುವಾಗ ಸಹೃದಯ (ವಾಚಕ) ಹಾಗೂ ಕಾವ್ಯದ ಪಾತ್ರದ ನಡುವೆ ಅವಿನಾಭಾವ ಸಂಬಂಧ ಉಂಟಾಗುತ್ತದೆ. ಇದರಿಂದಾಗಿ ಪಾತ್ರದ ಭಾವಗಳನ್ನು ವಾಚಕ ಅನುಭವಿಸುತ್ತಾನೆ. ಎಂದು ಪಾಶ್ಚಾತ್ಯ ಚಿಂತಕರೊಬ್ಬರು (ಅವರು ಹೇಳಿದ ಹೆಸರು ನನಗೆ ಮರೆತು ಹೋಗಿದೆ. ಬಹುಶಃ ಕೀಟ್ಸ್ ಇರಬೇಕು.) ಹೇಳಿದ್ದಾರೆ. ಅವರು ಹೇಳಿದಂತೆ ಸಂಘ ಹಾಗೂ ಸ್ವಯಂಸೇವಕರ ನಡುವೆ ಅವಿನಾಭಾವ ಸಂಬಂಧ ಇರಬೇಕು ಎಂದು ಹೇಳಿದರು.

ಸಂಸ್ಕೃತ ಓದಿದ ನನಗೆ ಇದೇ ವಿಷಯವನ್ನು ಭಟ್ಟನಾಯಕನೂ ಅಭಿನವಗುಪ್ತನೂ ಹೇಳಿದ್ದಾರಲ್ಲ ಎಂದು ಅನಿಸಿತು. ಅವರ ಉದಾಹರಣೆಯನ್ನು ಬಿಟ್ಟು ಇಂಗ್ಲಿಷ್ ಚಿಂತಕರ ಉದಾಹರಣೆ ಏಕೆ ಕೊಟ್ಟರು. ಇಷ್ಟೆಲ್ಲ ಓದಿಕೊಂಡ ಇವರಿಗೆ ಅಭಿನವಗುಪ್ತನ ಬಗೆಗೆ ಗೊತ್ತಿಲ್ಲವೇ ಎಂಬ ಅನುಮಾನಗಳು ಕಾಡಲಾರಂಭಿಸಿದವು. ಭಾಷಣ ಮುಗಿದ ತಕ್ಷಣ ಅವರ ಬಳಿಗೆ ಹೋಗಿ ನೀವು ಹೇಳಿದ್ದು ಭಟ್ಟನಾಯಕ, ಹಾಗೂ ಅಭಿನವಗುಪ್ತನ ಸಾಧಾರಣೀಕರಣವಲ್ಲವೇ ಎಂದು ಕೇಳಿದೆ. ಅವರು ಹೌದು. ಸಾಧಾರಣೀಕರಣದ ಬಗ್ಗೆಯೇ ನಾನು ಹೇಳಿದ್ದು, ಅಭಿನವಗುಪ್ತನ ಬಗೆಗೆ ಮೈಸೂರಿನ ವಿದ್ವಾಂಸರೊಬ್ಬರು ತುಂಬಾ ಚೆನ್ನಾಗಿ ಬರೆದಿದ್ದಾರೆ. ಸುಮಾರು 15-20 ಪುಟಗಳ ಲೇಖನ. ಅದನ್ನು ಓದು ಎಂದು ತಿಳಿಸಿದರು. ಹಾಗಾದರೆ ಇಂಗ್ಲಿಷ್ ಚಿಂತಕರ ಹೆಸರನ್ನು ಯಾಕೆ ಹೇಳಿದಿರಿ ಎಂಬ ಪ್ರಶ್ನೆಗೆ ಇಲ್ಲಿ ಇರುವ ಕೇಳುಗರಿಗೆಲ್ಲ ಸರಳವಾಗಿ ಅರ್ಥವಾಗಲಿ ಎಂಬ ಕಾರಣಕ್ಕೆ ಹಾಗೆ ಹೇಳಿದೆ ಎಂದು ಹೇಳಿದರು. ಅವರು ಬೇರೆಡೆಗೆ ಹೋಗುವ ಅವಸರದಲ್ಲಿದ್ದುದರಿಂದ ಅವರಲ್ಲಿ ಮತ್ತಷ್ಟು ಮಾತನಾಡುವ ಅವಕಾಶವಾಗಲಿಲ್ಲ.

ನನಗೆ ಆ ಕ್ಷಣದಲ್ಲಿ ಅಚ್ಚರಿಯಾಯಿತು. ಅಭಿನವಗುಪ್ತನ ಬಗೆಗೆ ಅವರಿಗೆ ನನಗಿಂತಲೂ ಹೆಚ್ಚು ಗೊತ್ತಿದೆ. ಆದರೂ ಆತನನ್ನು ಬಿಟ್ಟು ಇಂಗ್ಲಿಷ್ ಚಿಂತಕರ ಹೆಸರನ್ನು ಹೇಳಿದರು. ಏಕೆಂದು ಕೇಳಿದ್ದಕ್ಕೆ ಎಲ್ಲರಿಗೂ ಅರ್ಥವಾಗಲಿ ಎಂಬ ಹಾರಿಕೆಯ ಉತ್ತರ ನೀಡಿದರು. ಎಲ್ಲರಿಗೂ ಅರ್ಥವಾಗಲಿ ಎಂಬುವುದು ಹಾರಿಕೆಯ ಉತ್ತರವೇ. ಏಕೆಂದರೆ ಕೇಳುಗರಾಗಿ ಇದ್ದವರು ಆರ್.ಎಸ್.ಎಸ್ ನ ವಿವಿಧ ಕ್ಷೇತ್ರಗಳಲ್ಲಿ ಕಾರ್ಯಕರ್ತರಾಗಿರುವವರು. ಭಜರಂಗದಳ, ಭಾ.ಜ.ಪ, ವಿಶ್ವಹಿಂದೂಪರಿಷತ್, ಗೋರಕ್ಷಣಾ ಪ್ರಕಲ್ಪ, ವನವಾಸಿಕಲ್ಯಾಣಪರಿಷತ್ ಮುಂತಾದ ಸಂಘಟನೆಗಳಲ್ಲಿ ದುಡಿಯುವವರಿಗೆ ಉದಾಹರಣೆಯಾಗಿ ಶೇಕ್ಸ್-ಪಿಯರನ ವಾಕ್ಯವನ್ನು ಹೇಳಿದರೂ ಕಾಲಿದಾಸನ ವಾಕ್ಯವನ್ನು ಹೇಳಿದರೂ ಸಮಾನ ಪರಿಣಾಮ ಉಂಟು ಮಾಡುತ್ತದೆ. ಏಕೆಂದರೆ ಸಾಮಾನ್ಯವಾಗಿ ಎರಡನ್ನೂ ಅವರು ಓದಿರುವುದಿಲ್ಲ  (ಓದಿರುವುದಿಲ್ಲ ಎಂಬುವುದು ಆಕ್ಷೇಪವಲ್ಲ. ವಾಸ್ತವ. ಅವರ ಕ್ಷೇತ್ರದಲ್ಲಿ ಅವರು ಮಾಡುವ ಕೆಲಸ ಗೌರವಾರ್ಹವೇ). ಆದರೆ ಆ ಕ್ಷಣಕ್ಕೆ ಅವರಿಗೆ ಇಂಗ್ಲಿಷ್ ಉದಾಹರಣೆ ಹೇಳಿದರೆ ಜನರ ಮನಸ್ಸನ್ನು ಸುಲಭವಾಗಿ ತಲುಪಬಹುದು ಎಂದು ಅನಿಸಿದ್ದು ಆಶ್ಚರ್ಯ. ಯಾರೋ ಕಮ್ಯುನಿಷ್ಟ್ ಭಾಷಣಕಾರನಿಗೆ ಹೀಗನಿಸಿದ್ದರೆ ವಿಶೇಷವಲ್ಲ. ಆದರೆ ಹೀಗನ್ನಿಸಿದ್ದು. ಭಾರತ, ಭಾರತೀಯರು, ಭಾರತೀಯತೆ ಎಂದು ನಲವತ್ತಕ್ಕೂ ಹೆಚ್ಚು ವರ್ಷ ಶ್ರಮಿಸಿದ ಪ್ರಚಾರಕರಿಗೆ.


ಉದಾಹರಣೆ 2- ಶುಭಸಮಾರಂಭಗಳ ಸೀಸನ್. ಒಂದು ಶನಿವಾರ ನಮ್ಮ ನೆಂಟರೊಬ್ಬರ ರಿಸೆಪ್ಶನ್ ಇತ್ತು. ಅದರ ಮರುದಿನ ಮತ್ತೊಬ್ಬರ ಮನೆಯಲ್ಲಿ ಸತ್ಯನಾರಾಯಣಪೂಜೆ. ಎರಡೂ ಕಾರ್ಯಕ್ರಮಗಳಿಗೂ ನಾನು ಮನೆಯ ಸದಸ್ಯರೊಂದಿಗೆ ಭಾಗಿಯಾಗಿದ್ದೆ. ನನ್ನ ಶರೀರ ದಪ್ಪ ಇರುವುದರಿಂದ ನನಗೆ ಪ್ಯಾಂಟ್ ಧರಿಸುವುದಕ್ಕಿಂತ ಪಂಚೆ ಉಡುವುದೇ ಅನುಕೂಲ. ಅಲ್ಲದೇ ವಿದ್ಯಾರ್ಥಿದೆಸೆಯಿಂದಲೂ ಪಂಚೆ ಉಟ್ಟು ಅಭ್ಯಾಸ ಆಗಿರುವುದರಿಂದ ಅದೇನೂ ಕಷ್ಟ ಎನಿಸುವುದಿಲ್ಲ. ಆದ್ದರಿಂದ ದೂರಪ್ರಯಾಣದಂತಹ ಸಂದರ್ಭಗಳನ್ನು ಹೊರತುಪಡಿಸಿ ಸಾಮಾನ್ಯವಾಗಿ ಪಂಚೆ ಉಟ್ಟುಕೊಳ್ಳುತ್ತೇನೆ. ಭಾರತೀಯ ಸಂಸ್ಕೃತಿ ಪಂಚೆ ಆದ್ದರಿಂದ ಅದನ್ನು ಉಡಬೇಕು ಎಂಬ ಮನಃಸ್ಥಿತಿ ನನ್ನದಲ್ಲ. ನನಗೆ ಇಷ್ಟ ಹಾಗೂ ಅನುಕೂಲ ಆದ್ದರಿಂದ ಪಂಚೆ ಉಡುತ್ತೇನೆ ಎಂದು ಹೇಳುವವನು ನಾನು. 

ಹೀಗೆ ಮದುವೆಯ ರಿಸೆಪ್ಶನ್ ಕಾರ್ಯಕ್ರಮಕ್ಕೆ ಪಂಚೆ ಉಟ್ಟುಕೊಂಡು ಹೋಗಿದ್ದೆ. ನಮ್ಮ ಕುಟುಂಬದ ಹಿರಿಯರೊಬ್ಬರು ತುಂಬಾ ಆತ್ಮೀಯರು ರಿಸೆಪ್ಶನ್ ಗೆ ಬಂದಿದ್ದರು. ಅವರು ನೀನೇನು ಹೀಗೆ ಪಂಚೆ ಉಟ್ಟುಕೊಂಡು ಬಂದಿದ್ದೀಯ. ಪ್ಯಾಂಟ್ ಹಾಕಿಕೊಂಡು ಬರುವುದಲ್ಲವಾ ಎಂದು ಕೇಳಿದರು. ನಾನು ಏನೂ ಹೇಳಲಿಲ್ಲ. ಮರುದಿನ ಸತ್ಯನಾರಾಯಣ ಪೂಜೆಗೆ ನನ್ನ ವಯಸ್ಸಿನ ಒಂದಿಬ್ಬರು ಯುವಕರು ಚಡ್ಡಿ ಹಾಕಿಕೊಂಡು ಬಂದಿದ್ದರು. ಇವರಿಗೆ ಏನೂ ಹೇಳುವುದಿಲ್ಲವೇ ? ಎಂದು ನಾನು ಅವರನ್ನು ಕೇಳಿದೆ. ಅವರು ಉತ್ತರಿಸಲ್ಲಿಲ್ಲ. ಚಡ್ಡಿ ಹಾಕಿದವರನ್ನು ಪ್ರಶ್ನಿಸಲೂ ಇಲ್ಲ. ಚಡ್ಡಿ ಹಾಕಿಕೊಂಡು ಸತ್ಯನಾರಾಯಣಪೂಜೆಗೆ ಬಂದವರು ಕೂಡಾ ಹಿರಿಯರ ಆತ್ಮೀಯರೇ.

ರಿಸೆಪ್ಶನ್ ಗೆ ಪಂಚೆ ಉಟ್ಟುಕೊಂಡು ಹೋಗುವುದು ಅನುಚಿತ ಎಂಬುವುದನ್ನು ಒಪ್ಪಿಕೊಂಡು ಚಿಂತಿಸೋಣ. ಸತ್ಯನಾರಾಯಣ ಪೂಜೆಗೆ ಚಡ್ಡಿ ಹಾಕಿಕೊಂಡು ಬರುವುದೂ ಖಂಡಿತವಾಗಿಯೂ ಅನುಚಿತವೇ. ಆದರೆ ಅದನ್ನು ಹಿಂದೂ ಸಂಸ್ಕೃತಿಯ ಬಗೆಗೆ ಗೌರವವಿದೆ ಎಂದು ಹೇಳುವವರು ಖಂಡಿಸುವುದಿಲ್ಲ. ಅವರೇ ಅಂಗೀಕರಿಸುತ್ತಾರೆ. ಆದರೆ ರಿಸೆಪ್ಶನ್ ಗೆ ಪಂಚೆ ಉಟ್ಟುಕೊಂಡು ಹೋದರೆ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಉದಾಹರಣೆ 3 - ನಾನು ಯಕ್ಷಗಾನಪ್ರಿಯ. ಸ್ವಲ್ಪ ಸಂಸ್ಕೃತ ಓದಿರುವುದರಿಂದಲೋ ಏನೋ ಯಕ್ಷಗಾನವೆಂದರೆ ನನಗೆ ಇಷ್ಟ. ನಮ್ಮ ಮನೆಯಿಂದ ಸುಮಾರು ಒಂದುವರೆ ಗಂಟೆ ಪ್ರಯಾಣ ಮಾಡಿದರೆ ಕಟೀಲು ತಲುಪುತ್ತೇವೆ. ಕಟೀಲಿನಲ್ಲಿ ಯಕ್ಷಗಾನಗಳು ಆಗುತ್ತಿರುತ್ತವೆ. ನವಂಬರ್ ತಿಂಗಳಲ್ಲಿ ಹನುಮಗಿರಿ ಮೇಳದ ಹೊಸ ಪೌರಾಣಿಕ ಪ್ರಸಂಗದ ಪ್ರದರ್ಶನವಿತ್ತು. ಫಸ್ಟ್ ಡೇ ಫಸ್ಟ್ ಶೋ ಸಿನೆಮಾ ನೋಡಲು ಯಾವ ರೀತಿಯಿಂದ ಆಸಕ್ತ ಜನರು ಓಡುತ್ತಾರೋ ಅದೇ ರೀತಿಯಾಗಿ ನಾನೂ ಯಕ್ಷಗಾನ ನೋಡಲು ಹೋದೆ. ಇದನ್ನು ಕೇಳಿದ ಮಂದಿ (ಭಾರತೀಯ ಸಂಸ್ಕೃತಿ ಶ್ರೇಷ್ಠ ಎಂಬುವುದರ ಕುರಿತು ಯಾವಾಗಲೂ ಭಾಷಣ ಮಾಡುವವರು) ಇವನೊಬ್ಬ ಯಕ್ಷಗಾನದ ಹುಚ್ಚ, ಮಧ್ಯರಾತ್ರೆ ನಿದ್ದೆ ಬಿಟ್ಟು ಐವತ್ತು ಕಿಲೋಮೀಟರ್ ಹೋಗ್ತಾನೆ ಎಂದೆಲ್ಲ ಹೇಳುತ್ತಾರೆ.

ಶುದ್ಧ ಪರಂಪರೆಯ ದೃಷ್ಟಿಯಿಂದ ಹೇಳುವುದಾದರೆ ಯಕ್ಷಗಾನಕ್ಕೆ ಹೋಗುವುದು ತಪ್ಪೇ. ಕಾವ್ಯಾಲಾಪಾಂಶ್ಚ ವರ್ಜಯೇತ್ ಮುಂತಾದ ಮಾತುಗಳು ಇಂತಹ ಮನೋರಂಜನೆಗೆ ನಿಷೇಧ ಹೇರುತ್ತವೆ. ಆದರೆ ಅದು ಭಾರತೀಯವಾದರೆ ಮಾತ್ರ ನಿಷೇಧ. ಸಿನೆಮಾ ನೋಡುವುದಕ್ಕೆ ಗಂಟೆಗಟ್ಟಲೆ ದೂರ ಹೋಗಿ ಸಾವಿರಗಟ್ಟಲೆ ಖರ್ಚು ಮಾಡಿದರೆ ಅದು ಶ್ರೇಷ್ಠತೆಯ ಪ್ರತೀಕ. ಏಕೆಂದರೆ ಸಿನೆಮಾ ನೋಡುವವರನ್ನು ಅದೇ ಜನ ಹೊಗಳುವುದನ್ನು ಕಂಡಿದ್ದೇನೆ. ಅವನಿಗೆ ಇಂಗ್ಲಿಷ್ ಸಿನೆಮಾ ಅಂದರೆ ಅಷ್ಟು ಆಸಕ್ತಿ ಎಂಬುವುದು ಅವರ ವಾಕ್ಯ 

ಈ ಉದಾಹರಣೆಗಳಿಂದ ತಿಳಿದು ಬರುವ ಸತ್ಯವೇನೆಂದರೆ ಭಾರತೀಯತೆ ಶ್ರೇಷ್ಠ ಎಂಬುವುದು ಕೆಲವರಿಗೆ ಒಂದು ಚಟ. ಅವರು ತಮ್ಮ ಮನಸ್ಸಿನಿಂದ ಅದನ್ನು ಹೇಳುವುದಿಲ್ಲ. ಭಾರತೀಯತೆಯನ್ನು ಪ್ರತಿಪಾದಿಸುವವರಲ್ಲಿ ಅನೇಕರ ಹೃದಯ ವಿದೇಶೀ ವಸ್ತುಗಳಿಗೆ ಮಾರುಹೋಗಿರುತ್ತದೆ. ವಿದೇಶಿ ವಿಚಾರಗಳಿಗೆ ಮಾರುಹೋಗುವುದು  ತಪ್ಪು ಎಂಬುವುದು ನನ್ನ ವಾದವಲ್ಲ. ಸೋಗಲಾಡಿತನದಿಂದ ತೋರ್ಪಡಿಕೆಗಷ್ಟೇ ಭಾರತೀಯತೆ ಶ್ರೇಷ್ಠ ಎಂಬ ಪ್ರತಿಪಾದನೆಯ ಬಗೆಗಷ್ಟೇ ಆಕ್ಷೇಪ. 

 

IPL तः पठितुं शक्यम् ।

 IPL क्रीडा अद्यत्वे समग्रदेशस्य आकर्षणबिन्दुत्वेन स्थिता वर्तते । युवजनाः ऐ.पि.एल् कारणतः अलसाः जायमानाः सन्ति इति केषाञ्चन मतम् । परन्तु अनेकेषाम् इयं क्रीडा मनस्तोषं जनयित्वा नूतनोर्जाप्राप्तौ अपि सहकारिणी विद्यते एव ।

                    दुःखार्तानां श्रमार्तानां शोकार्तानां तपस्विनाम् ।
                    विश्रान्तिजननं काले नाट्यमेतद्भविष्यति ॥

इति वाक्यं नाट्यविषये उक्तम् । अद्यत्वे क्रिकेट् क्रीडायाम् अपि अस्य श्लोकस्य अन्वयः शक्यः । ऐ.पि.एल् क्रीडाः तु सायङ्काले 7.30 वादनतः प्रवर्तन्ते । श्रमिकाः कार्यं समाप्य गृहे उपविश्य आनन्देन क्रीडाम् आस्वादयितुं शक्नुवन्ति ।

अस्माकं ग्रामे कश्चित् लोकयाननिर्वाहकः वर्तते । प्रातः सार्धसप्तवादनतः सायं सार्धसप्तवादनं यावत् तस्य यानं मार्गे चलति । ततः गृहं गत्वा सः प्रतिदिनं क्रीडाम् आस्वादयति । ग्रामीणभागे यानं चलति इति कारणतः यात्रिषु बहवः तत्परिचिताः एव । सः पूर्वदिनस्य क्रीडायाः विमर्शम् यात्रिभिः सह कुर्वन् आनन्दम् अनुभवति । स च विमर्शः उत्कृष्टः भवति । तादृशमेव विमर्शं कुर्वन्तः अनेके जनाः प्रतिदिनं यूट्यूब् मध्ये अपि दृश्यन्ते । क्रीडाविमर्शस्य तु सहस्रशः दर्शकाः, शतशः प्रतिस्पन्ददातारश्च भवन्ति । यदि एतस्य याननिर्वाहकस्य वचनानि अपि यूट्यूब्-मध्ये भवन्ति तर्हि तस्यापि सहस्रशः अभिमानिनः निश्चयेन भवेयुः इत्यत्र तु सन्देहः नास्ति । आदिनं कृतस्य श्रमस्य परिहारः क्रीडादर्शनेन निवारितः इति तृप्तिः तस्य वचनेषु स्पष्टं भासते ।  

संस्कृतज्ञैः अस्माभिः अपि ऐ.पि.एल् क्रीडातः पठनीयं किञ्चिदस्ति । सा तु क्रीडा, अस्माकं तु भिन्नं क्षेत्रम् इति न चिन्तनीयम् । क्रीडायाः आरम्भे कः ताडनगणः (Batting) कः क्षेपणगणः(Bowling) इति निर्णयः नाणकक्षेपणद्वारा (Toss) भवति । क्रीडायाः अनन्तरं पुरस्कारवितरणं च भवति । तयोः द्वयोः कार्यक्रमयोः निर्वहणं सुचारुतया प्रवर्तते ।

तत्रापि पुरस्कारप्रदानकार्यक्रमस्तु अनुसरणयोग्यः । तत्र भ्रमलेशोऽपि न भवति । देशस्य प्रसिद्धाः क्रीडाकार्यक्रमनिरूपकाः हर्षभोग्ले, मुरळिकार्तिकः, रविशास्त्री, आकाशचोप्रा इत्यादिषु अन्यतमः कार्यक्रमं निर्वहति । यद्यपि एते प्रसिद्धाः तथापि कार्यक्रमे स्वकीयं किमपि न योजयन्ति । संस्कृतक्षेत्रे तु एकैकस्य विदुषः क्रमः एकैकः भवति पिण्डे पिण्डे मतिर्भिन्ना तुण्डे तुण्डे सरस्वती इति वाक्यानुसारं स्वसिद्धान्तप्रतिपादनेन अव्यवस्था दृश्यते । शैलीभेदः प्रतिजनं भवेदेव । परन्तु क्रमभङ्गः भवति चेत् दोषाय । उदाहरणार्थं आरम्भे मङ्गलपद्यं गातव्यम्, उत स्वागतभाषणं करणीयम् इति निर्वाहकस्य भ्रमः भवति ।  


ऐ.पि.एल्.क्रीडायामपि एतादृशः भ्रमः तत्र कार्यं कुर्वतां मध्ये स्याद् । परन्तु सः भ्रमः न प्रकटीभवति । कार्यक्रमस्यादौ सर्वे मञ्चे स्थिताः भवन्ति । निर्वाहकः प्रायोजकेभ्यः धन्यावादसमर्पणं करोति । तदनन्तरं अतिथीनां नाम्नः पदस्य(Designation) च परिचयः भवति । कः पुरस्कारः केन दातव्यः इति पूर्वमेव निश्चितं भवति, सः पुरस्कारहस्तः एव मञ्चे स्थितः भवति । ततः एकैकशः नामोद्घोषणं यदा भवति, तदा क्रीडकः पुरस्कारं स्वीकृत्य गच्छति । अतिवेगताडकः(super striker), अत्यधिकक्रीडनाङ्कवान् (Fantasy king), अत्यधिकषड्धावनाङ्कताटकः,(Maximum sixes) अत्यधिकचत्वारिधावनाङ्कताडकः (maximum fours), अत्यधिकधावनाङ्करहितकन्दुकक्षेपकः(Dot ball) इति पञ्च पुरस्काराः वितीर्यन्ते । तदन्तरं विजेतृगणनायकस्य लघुभाषणं, क्रीडायां सर्वश्रेष्ठक्रीडकस्य च भाषणं भवति । पञ्चभिः निमेषैः सर्वोऽपि कार्यक्रमः समाप्यते ।    

अयमेव पुरस्कारप्रदानकार्यक्रमः यदि कस्मिंश्चित् संस्कृतविश्विद्यालये चाल्यते तर्हि कीदृशी स्थितिः भवेत् इति कल्पनां कर्तुं शक्नुयाम । पञ्चानां पुरस्काराणां वितरणं, तदर्थं पञ्चानाम् अतिथीनाम् आह्वानं बहूनां भाषणम् इत्यादिना अन्यूनं पञ्चानां घण्टानां कार्यक्रमः निश्चयेन भवेत् ।

विश्वविद्यालयीयाः कार्यक्रमाः भिन्नप्रकारकाः, क्रीडाकार्यक्रमाः भिन्नप्रकारकाः । अतः द्वयोः तोलनं यदि क्रियेत तर्हि सा हीनोपमा भवति इति तु सत्यमेव । परन्तु यस्मात् कार्यक्रमनिर्वहणक्रमात् सर्वोऽपि त्रस्तः वर्तते, तादृशे सभाकार्यक्रमे गुणवत्परिवर्तनविषये चिन्तनं तु विधेयमेव खलु तदर्थं कस्यचित् उदाहरणम् अत्र दर्शितम् । दर्शिते उदाहरणे अपि दोषाः भवेयुः नाम, तथापि गुणांशास्तु निश्चयेन स्वीकर्तुं योग्याः।  


कार्यक्रमस्य दर्शनार्थम् अन्तर्जालतन्तुः अत्र विद्यते । https://www.iplt20.com/video/62740 

ಶ್ರೀಮದ್ರಾಮಾಯಣೀ ಗಂಗಾ

ವಾಲ್ಮೀಕಿಗಿರಸಂಭೂತಾ ರಾಮಾಂಭೋನಿಧಿಸಂಗತಾ । ಶ್ರೀಮದ್ರಾಮಾಯಣೀ ಗಂಗಾ ಪುನಾತಿ ಭುವನತ್ರಯಮ್ ॥ ಎಂಬ ಮಾತಿನ ಮೂಲಕ ಹಿರಿಯರು ರಾಮಾಯಣವನ್ನು ಗಂಗೆಯೆಂದೇ ಕರೆದಿದ್ದಾರೆ. ರಾಮಾಯ...